SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 5, 2025

ಶಿವಮೊಗ್ಗದ ಈದ್ಗಾ ಮೈದಾನದ ವಿಚಾರವಾಗಿ ಇಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ರವರ ವಿರುದ್ದ ಸಿಡಿಮಿಡಿ ಗೊಂಡ ಘಟನೆ ಶಿವಮೊಗ್ಗದಲ್ಲಿ ನಡೆಯಿತು. ಕೆ ಎಸ್ ಈಶ್ವರಪ್ಪ ಎಸ್ ಮಿಥುನ್ ಕುಮಾರ್ ವಿರುದ್ದ ಸಿಡಿಮಿಡಿಗೊಳ್ಳಲು ಕಾರಣವೇನು, ಒಬ್ಬ ಜಿಲ್ಲಾ ರಕ್ಷಣಾಧಿಕಾರಿಗಳ ವಿರುದ್ದ ಕೆ ಎಸ್ ಈ ಸಾರ್ವಜನಿಕವಾಗಿ ಸಿಡಿದೆದಿದ್ದು ಎಷ್ಟು ಸರಿ. ಅಲ್ಲಿನ ವಾತಾವರಣ ಹೇಗಿತ್ತು ಎಂಬುದರು ಸಂಪೂರ್ಣ ವಿವರ ಇಲ್ಲಿದೆ.
ಇಂದು ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯ ಆವರಣದ ಮುಂಬಾಗದಲ್ಲಿ ಜಿಲ್ಲಾಡಳಿತ ಬ್ಯಾರಿಗೇಡ್ ಹಾಕಿರುವುದನ್ನು ಹಾಗೂ ಮುಸ್ಲಿಮರು ಆ ಜಾಗ ವಕ್ಫ್ಗೆ ಸೇರಿದ್ದು ಎಂದು ಹೇಳುತ್ತಿರುವುದನ್ನು ವಿರೋಧಿಸಿ ರಾಷ್ಟ್ರಭಕ್ತ ಬಳಗದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಈಶ್ವರಪ್ಪನವರು ನಗರ ಅಭಿವೃದ್ದಿ ಪ್ಲಾನ್ (CDP) ಯ ಒಂದು ನಕ್ಷೆಯನ್ನು ನೀಡಿ ಶಿವಮೊಗ್ಗದಲ್ಲಿರುವ ಯಾವ್ಯಾವ ಜಾಗ ಯಾವುದಕ್ಕೆ ಸಂಬಂಧಿಸಿದ್ದು ಎಂಬ ಮಾಹಿತಿಯನ್ನು ನೀಡಿದರು. ನಂತರ ಇದು ನಮ್ಮ ಜಾಗ ಪಾರ್ಕ್ನ ಒನ್ ಪ್ಲೇಸ್ ಜಾಗವನ್ನು ಇಂದು ಮುಸ್ಲಿಮರು ಕಬಳಿಸಲು ಯತ್ನಿಸಿದ್ದಾರೆ. ರಕ್ತದ ಕೊನೆ ಹನಿ ಇರುವವರೆಗೂ ಆಟದ ಮೈದಾನ ( ಈದ್ಗಾ ಮೈದಾನ) ದ ವಿಚಾರವಾಗಿ ನಾವು ಹೋರಾಟ ಮಾಡುತ್ತೇವೆ ಎಂದರು.

ಆ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಸ್ಥಳಕ್ಕೆ ಆಗಮಿಸಿದರು. ಆವೇಳೆ ಎಸ್ ಪಿಯನ್ನು ನೋಡಿದ ಕೆ ಎಸ್ ಈಶ್ವರಪ್ಪನವರು ಆಟದ ಮೈದಾನದಲ್ಲಿ ಕಿಡಿಗೇಡಿಗಳು ರೈಲ್ವೇ ಕಂಬಿಯನ್ನು ತಂದು ಬೇಲಿಯನ್ನು ಮಾಡಿದ್ದಾರೆ. ಜಿಲ್ಲೆಯಲ್ಲಿ ರಕ್ಷಣಾ ಇಲಾಖೆ ಇದೆಯೋ ಸತ್ತಿದೆಯೋ ಎಂದು ನಮಗೆ ತಿಳಿದಿಲ್ಲ. ಅಂತಹವರನ್ನು ಏಕೆ ಬಂಧಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಆಗ ಎಸ್ ಪಿ ಮಿಥುನ್ ಕುಮಾರ್ ಇಲ್ಲ ಸಾರ್ ಇದರ ಕುರಿತಾಗಿ ಒಂದು ಮನವಿಯನ್ನು ಕೊಡಿ ಎಂದು ಕೇಳಿದರು. ಆಗ ಈಶ್ವರಪ್ಪ ನಾವೇನು ಇಲ್ಲಿ ಮನವಿ ಕೊಡಲು ಬಾರದೆ ದನ ಕಾಯೋಕೆ ಬಂದಿದ್ದೇವಾ ಎಂದು ಸಾರ್ವಜನಿಕವಾಗಿಯೇ ಸಿಡಿಮಿಡಿಗೊಂಡರು.
ಇದಕ್ಕೆ ರಕ್ಷಣಾಧಿಕಾರಿಗಳು ಮರು ಉತ್ತರ ನೀಡಬೇಕು ಎನ್ನುವಷ್ಟರಲ್ಲಿ ಪ್ರತಿಭಟನಾ ಕಾರರು ಘೊಷಣೆಯನ್ನು ಕೂಗಲು ಆರಂಭಿಸಿದರು. ಇಂತಹ ಸಂದರ್ಭದಲ್ಲಿ ಎಸ್ಪಿಯವರಿಗೆ ಸ್ವಲ್ಪ ಇರುಸು ಮುರುಸು ಉಂಟಾಯಿತು. ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ ಪಿ ಸ್ಥಳದಿಂದ ತೆರಳಿದರು.
ಒಬ್ಬ ಐಪಿಎಸ್ ಅಧಿಕಾರಿ ಆದವರಿಗೆ ಸಾರ್ವಜನಿಕ ವಲಯದಲ್ಲಿ ತಮ್ಮದೇ ಆದಂತಹ ಪ್ರತಿಷ್ಠೆ ಇರುತ್ತದೆ. ಆದರೆ ಒಬ್ಬ ಐಪಿಎಸ್ ಅಧಿಕಾರಿಯನ್ನು ಸಾರ್ವಜನಿಕ ಪ್ರದೇಶದಲ್ಲಿ ಜನಪ್ರತಿನಿದಿಯಾದವರು ನಿಂದಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
SUMMARY | Former Deputy Chief Minister K S Eshwarappa on Monday lashed out at District Protection Officer G K Mithun Kumar over the Idgah maidan in Shivamogga.
KEYWORDS | K S Eshwarappa, G K Mithun Kumar, Idgah maidan, Shivamogga,