SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 6, 2025

ಶಿವಮೊಗ್ಗ | ಬಿಜೆಪಿ ರಾಜ್ಯಾಧ್ಯಕ್ಷ ವಿಚಾರದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಟೀಂ ಪದೇ ಪದೇ ಹೈಕಮಾಂಡ್ ನಿರ್ಧಾರವನ್ನು ಪ್ರಶ್ನಿಸುತ್ತಿರುವುದು ಸರಿಯಲ್ಲ. ಈ ಹಿನ್ನಲೆ ಗೊಂದಲ ಹಠಾವೋ ಬಿಜೆಪಿ ಬಚಾವೋ ಎಂಬ ಆಂದೋಲನವನ್ನು ಶಿವಮೊಗ್ಗದಿಂದ ಪ್ರಾರಂಭಿಸಿದ್ದೇವೆ ಎಂದು ಬಿಜೆಪಿ ಮಖಂಡ ಬಳ್ಳೇಕೆರೆ ಸಂತೋಷ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದ್ದು ಹೈಕಮಾಂಡ್, ಆದರೆ ಮುಖಂಡರಾದಯತ್ನಾಳ್ ಮತ್ತೆ ಅವರ ಟೀಂ ಇಂದು ಹೈಕಮಾಂಡ್ ನಿರ್ಧಾರವನ್ನೇ ಪ್ರಶ್ನೆ ಮಾಡುತ್ತಿದೆ. ವಿಜಯೇಂದ್ರರವರು ಒಂದು ವರ್ಷದಿಂದ ಪ್ರವಾಸ ಮಾಡಿ ಪಕ್ಷವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ. ನಿಮ್ಮ ನಡುವಿನ ಈ ಕಿತ್ತಾಟದಿಂದ ಕಾರ್ಯಕರ್ತರಿಗೆ ನೋವಾಗಿದ್ದು, ಪಕ್ಷದಲ್ಲಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಈ ಹಿನ್ನಲೆ ಗೊಂದಲ ಹಠಾವೋ ಬಿಜೆಪಿ ಬಚಾವೋ ಎಂಬ ಆಂದೋಲವನ್ನು ಶಿವಮೊಗ್ಗದಿಂದ ಹಮ್ಮಿಕೊಂಡಿದ್ದೇವೆ ಎಂದರು.

ಯಡಿಯೂರಪ್ಪನವರ ನಾಯಕತ್ವದಿಂದ ಬಿಜೆಪಿ ಪಕ್ಷ ಉಳಿದುಕೊಂಡಿದೆ
ಬಸವನಗೌಡ ಪಾಟೀಲ್ ಯತ್ನಾಳ್ರವರು ಬಿಜೆಪಿಯನ್ನು ಅಪ್ಪ ಮಕ್ಕಳ ಪಕ್ಷ ಎಂದು ಬಾಯಿಗೆ ಬಂದಹಾಗೇ ಮಾತನಾಡುತ್ತಾರೆ. ಆದರೆ ಇಂದು ರಾಜ್ಯದಲ್ಲಿ ಯಡಿಯೂರಪ್ಪನವರ ನಾಯಕತ್ವದಿಂದ ಬಿಜೆಪಿ ಪಕ್ಷ ಉಳಿದುಕೊಂಡಿದೆ. ಆ ರೀತಿಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಯಡಿಯೂರಪ್ಪ ಸೇರಿದಂತೆ ಅನೇಕ ಹಿರಿಯರು ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಅಷ್ಟೇ ಅಲ್ಲದೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಸಹ ರಾಘವೇಂದ್ರ ಅಭಿವೃದ್ದಿಯ ಬಗ್ಗೆ ಮಾತನಾಡುತ್ತಾರೆ. ಅಂತ ಕೆಲಸವನ್ನು ಶಿವಮೊಗ್ಗದಲ್ಲಿ ರಾಘವೇಂದ್ರ ಮಾಡಿದ್ದಾರೆ.ಈ ಬಾರಿಯೇ ರಾಘವೇಂದ್ರ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಗಬೇಕಿತ್ತು .ಆದರೆ ಸಿಗಲಿಲ್ಲ ಮುಂದೆ ಸಿಗಬಹುದು ಎಂಬ ಭರವಸೆ ಇದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸುವುದು ಬಿಟ್ಟು ದೆಹಲಿ ಹೋಗಿ ಕುತಿದ್ದಾರೆ ಇದು ಸರಿಯಲ್ಲ ಎಂದರು.
SUMMARY | It is not right for Basavanagouda Patil Yatnal and his team to repeatedly try to take the high command’s decision on the bjp state president’s issue.
KEYWORDS | Yatnal, bjp, state, president, politics,