SHIVAMOGGA | MALENADUTODAY NEWS | ಮಲೆನಾಡು ಟುಡೆ

ಶಿವಮೊಗ್ಗ | ನಾನು ಮೊದಲು ಹಿಂದೂಸ್ಥಾನಿ ಕನ್ನಡಿಗ ಆಮೇಲೆ ನಾನು ಮುಸ್ಲಿಂ ಎಂದು ವಸತಿ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಜಮೀರ್ ಅಹಮದ್ ತಿಳಿಸಿದರು.
ಇಂದು ನಗರದ ಗೋವಿಂದಾಪುರದಲ್ಲಿ ಆಶ್ರಯ ಮನೆಗಳ ಹಂಚಿಗೆ ಆಗಮಿಸಿದ ಸಚಿವರು ಜೈ ಭೀಮ್ ಘೋಷಣೆ ಕೂಗುವ ಮೂಲಕ ಭಾಷಣ ಪ್ರಾರಂಭಿಸಿ ಭಾಷಣದ ವೇಳೆ ಈ ಮೇಲಿನಂತೆ ಹೇಳಿದರು. ಯಾರೇ ಆಗಲಿ ಮನೆಯಲ್ಲಿ ಜಾತಿಯನ್ನು ಇಟ್ಟುಕೊಳ್ಳಿ ಆದರೆ ರಾಜಕೀಯದಲ್ಲಿ ಜಾತಿ ತರಬೇಡಿ. ರಾಜಕಾರಣಿಗಳು ರಾಜಕೀಯದಲ್ಲಿ ಜಾತಿ ಮಾಡಿದರೆ ಭಗವಂತ ಒಳ್ಳೆಯದು ಮಾಡುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು

ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರಿಗೆ ಬಡವರ ಪರ ಕಾಳಜಿ ಇರಲಿಲ್ಲ
ಇಂದು 652 ಮನೆಗಳನ್ನು ಲಾಟರಿ ಮೂಲಕ ಹಸ್ತಾಂತರ ಮಾಡುತ್ತಿದ್ದೇವೆ. ಒಂದು ಮನೆ ಕಟ್ಟಲು ಏಳು ಲಕ್ಷ ಆಗುತ್ತೆ. ಮನೆ ನಿರ್ಮಿಸಿ ಕೊಡುವುದು ತಡ ಆಗಿರುವ ಕಾರಣಕ್ಕೆ ಹಣ ಜಾಸ್ತಿ ಹೋಗುತ್ತಿದೆ. ರಾಜ್ಯದಲ್ಲಿ 47800 ಸಾವಿರ ಆಶ್ರಯ ಮನೆಗಳು ಅಪೂರ್ಣವಾಗಿತ್ತು. ಗ್ಯಾರಂಟಿ ಯೋಜನೆಗಳಿಗೆ 50 ರಿಂದ 60 ಸಾವಿರ ಕೋಟಿ ಹೋಗುತ್ತಿದೆ. ಹಾಗಾಗಿ ಅಪೂರ್ಣ ಆಗಿರುವ ಆಶ್ರಯ ಮನೆಗಳಿಗೆ ಸಿಎಂ ಬಳಿ ಹಣ ಹೇಗೆ ಕೇಳಲಿ ಅಂತ ಅಂದುಕೊಂಡಿದ್ದೆ. ಆದರೆ ಸಿಎಂ ಎಷ್ಟೇ ಕಷ್ಟಾ ಆದರೂ ನಾನು ಅನುದಾನ ಕೊಡುತ್ತೇನೆ ಅಂತ ಹೇಳಿದ್ರು. ಮುಂದಿನ ತಿಂಗಳಲ್ಲಿ 41 ಸಾವಿರ ಮನೆಗಳನ್ನು ಬಡವರಿಗೆ ನೀಡುತ್ತೇವೆ.ಆಶ್ರಯ ಯೋಜನೆ ತಂದಿದ್ದು ನಮ್ಮ ಡೈನಾಮಿಂಕ್ ಲೀಡರ್ ಬಂಗಾರಪ್ಪನವರು.ಬಡವರಿಗೆ ಮನೆ ಕೊಡುವುದು ನಮ್ಮ ಕರ್ತವ್ಯ ಆಗಿದೆ. ನಾನು ಯಾವತ್ತು ಪಕ್ಷ ನೋಡಿ ಕೆಲಸ ಮಾಡಲ್ಲ ಯಾರೇ ಒಳ್ಳೆ ಕೆಲಸ ಮಾಡಿದರು ನಾವು ಮೆಚ್ಚಲೇ ಬೇಕು. ಆಗ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರಿಗೆ ಬಡವರ ಪರ ಕಾಳಜಿ ಇರಲಿಲ್ಲ. ಇದ್ದಿದ್ದರೆ ಆಶ್ರಯ ಮನೆಗಳಿಗೆ ಹೆಚ್ಚುವರಿ ಅನುದಾನ ಅವರು ನೀಡುತ್ತಿದ್ದರು ಎಂದರು.
SUMMARY | I am a Hindustani Kannadiga first and then I am a Muslim,” Said Zameer Ahmed, Minister for Housing, Waqf and Minority Welfare.
KEYWORDS | Hindustani Kannadiga, Zameer Ahmed, Minister, political news,