SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 18, 2025
ಶಿವಮೊಗ್ಗ : ಮಹಾಕುಂಭ ಮೇಳದಲ್ಲಿ ಮುಳುಗುವುದರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿಗೆ ಖಂಡನಾರ್ಹ, ಅವರು ಕೂಡಲೆ ಈ ಕುರಿತು ದೇಶದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಆಗ್ರಹಿಸಿದರು.
ಇದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಮಹಾತ್ಮ ಗಾಂಧಿಯವರು ಗೋವುಗಳನ್ನು, ಮಹಿಳೆಯರನ್ನು ಹಾಗೂ ಗಂಗೆಯನ್ನು ನಾವು ದೇವರ ರೂಪದಲ್ಲಿ ಕಾಣಬೇಕು ಎಂದಿದ್ದರು. ಆದರೆ ಮಲ್ಲಿಕಾರ್ಜುನ್ ಖರ್ಗೆ ಇಂತಹ ಹೇಳಿಕೆಯನ್ನು ನೀಡಿ ಗಾಂಧೀಜಿ ಯವರಿಗೆ ಅಪಮಾನ ಮಾಡಿದ್ದಾರೆ. ಖರ್ಗೆಯವರೆ ಡಿ ಕೆ ಶಿವಕುಮಾರ್ ಸೇರಿದಂತೆ ನಿಮ್ಮ ಪಕ್ಷದ ಅನೇಕ ಜನ ನಾಯಕರು ಪ್ರಯಾಗ್ರಾಜ್ನ ಕುಂಭಮೇಳಕ್ಕೆ ಹೋಗಿ ಮಿಂದೆದ್ದಿದ್ದಾರೆ. ಅವರ ವಿರುದ್ದ ನೀವು ಯಾವು ರೀತಿಯ ಕ್ರಮ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿದರು.
ಖರ್ಗೆಯವರೆ ನೀವು ಈ ರೀತಿಯ ಹೇಳಿಕೆಯನ್ನು ಕೊಡುವುದು ತಪ್ಪು. ಈ ಹಿನ್ನಲೆ ದೇಶದ ಜನರಲ್ಲಿ ಕ್ಷಮೆ ಕೇಳಬೇಕೆಂದು ಕೆಎಸ್ ಈಶ್ವರಪ್ಪ ಆಗ್ರಹಿಸಿದರು.
SUMMARY | Former Deputy Chief Minister K S Eshwarappa on Saturday condemned Congress president Mallikarjun Kharge’s statement that immersion in the Kumbh Mela in Prayagraj will not eradicate poverty and demanded an apology from the people of the country.
KEYWORDS | K S Eshwarappa, Kumbh Mela, Prayagraj, Mallikarjun Kharge,