SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 11, 2025

ಮರಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸಾವನ್ನಪಿರುವ ಘಟನೆ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 9 ರಂದು ಸಂಭವಿಸಿದೆ. ಈ ಹಿನ್ನಲೆ ಇಆರ್ವಿ ಸಿಬ್ಬಂದಿಗಳು ಸ್ಥಳಕ್ಕೆ ದಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಘಟನೆಯ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದಾರೆ. ಮೃತ ಪಟ್ಟಿರುವ ಯುವಕನ ಮಾಹಿತಿ ತಿಳಿದುಬಂದಿಲ್ಲ
ಸುದ್ದಿ : 02 ಎಸ್.ಟಿ.ಆನಂದ್ ಗೆ ಮುಖ್ಯಮಂತ್ರಿ ಚಿನ್ನದ ಪದಕ

2024-25ನೇ ಸಾಲಿನ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಇಲಾಖಾ ವತಿಯಿಂದ ಶಿವಮೊಗ್ಗದ ತಿಪ್ಪೆಸ್ವಾಮಿ, ಉಷಾ ಎಸ್.ಟಿ ದಂಪತಿ ಪುತ್ರರಾದ ಗೃಹರಕ್ಷಕ ಎಸ್.ಟಿ.ಆನಂದರವರ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಚಿನ್ನದ ಪದಕವನ್ನು ನOಡಲಾಗಿದೆ. ಆನಂದ್ಗೆ ಗೃಹರಕ್ಷಕ ಮತ್ತು ಪೌರರಕ್ಷಣೆ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿ: 03 ಸಿರಿಗನ್ನಡ ವೇದಿಕೆ ವತಿಯಿಂದ ರಾಷ್ಟ್ರೀಯ ಮಹಿಳಾ ದಿನಾಚರಣೆ
ಸಿರಿಗನ್ನಡ ವೇದಿಕೆ ಮತ್ತು ಸಿರಿಗನ್ನಡ ಮಹಿಳಾ ವೇದಿಕೆ ಶಿವಮೊಗ್ಗ ವತಿಯಿಂದ ಭಾನುವಾರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ಆಚರಿಸಲಾಯಿತು. ಮಹಿಳಾ ದಿನಾಚರಣೆ ಹಿನ್ನೆಲೆ ಕವಿಗೋಷ್ಟಿ ಹಾಗೂ ಚರ್ಚಾ ಸ್ಪರ್ಧೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಎ.ಹೆಚ್., ಸಿರಿಗನ್ನಡ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ನಂದ ಪ್ರೇಮ್ ಕುಮಾರ್, ಇಂದಿರಾ, ಮಂಜುಳಾ, ವಿವೇಕ್, ಗಂಗಾಧರ್ ಪಿ ಬನ್ನಿಹಟ್ಟಿ, ನೀಲಮ್ಮ, ಮಲ್ಲಿಕಾರ್ಜುನ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು. ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹು.ಮಾ.ಸತೀಶ್, ದ್ವೀತಿಯ ಸ್ಥಾನ ಗಾಯತ್ರಿ ರಮೇಶ್, ಮೂರನೇ ಸ್ಥಾನ ಹಾಲಪ್ಪ ಜೈಲರ್, ಕವಿತಾ ಉಂಬ್ಳೇಬೈಲು ಪಡೆದರು.
ಸುದ್ದಿ : 04 ಜೈನ್ ಪಬ್ಲಿಕ್ ಶಾಲೆಯಲ್ಲಿ ಮಹಿಳಾ ದಿನಾಚರಣೆ
ನಿಧಿಗೆ ಜೈನ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಭಾರತದ ಮಿಸ್ಸೆಸ್ ಯುನಿವರ್ಸ್ 2018 ವಿಜೇತೆ ಮನಿಶಾ ವರುಣ್ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಚಂದ್ರಕಲಾ ಎಸ್.ವಿ ಭಾಗವಹಿಸಿದರು, ಪ್ರಾಂಶುಪಾಲರಾದ ಪ್ರಿಯದರ್ಶಿನಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಮಹಿಳೆಯರಿಗೆ ಫ್ಯಾಷನ್ ಶೋ. ಅತ್ತೆ ಸೊಸೆ, ಅಮ್ಮಂದಿರಿಗೆ ಫ್ಯಾಷನ್ ಶೋ, ಮಹಿಳೆಯರಿಗೆ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಫ್ಯಾಷನ್ ಶೋನಲ್ಲಿ ಗೆದ್ದವರಿಗೆ ಡಿವೈನ್ ಬ್ಯೂಟಿ ಮತ್ತು ಡ್ಯೂಯಲ್ ಗ್ರೇಸ್ ಎಂದು ಕಿರೀಟ ನೀಡಲಾಯಿತು.
ಸುದ್ದಿ: 05 ಮೂರು ದಿನ ವೃತ್ತಿಪರ ಮತ್ತು ವ್ಯಯಕ್ತಿಕ ಅಭಿವೃದ್ಧಿ ಹೆಚ್ಚಿಸುವ ತರಬೇತಿ ಕಾರ್ಯಾಗಾರ
ಜ್ಯೂನಿವರ್ ಛೇಂಬರ್ ಇಂಟರ್ ನ್ಯಾಷನಲ್ ಶಿವಮೊಗ್ಗ, ವಿವೇಕ ಹಾಗೂ ಸಹ್ಯಾದ್ರಿ ವಾಣಿಜ್ಯ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಸಂಯುಕ್ತಾಶ್ರಯದಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾರ್ಚ್ 11,12 ಮತ್ತು 13 ರಂದು ವೃತ್ತಿಪರ ಮತ್ತು ವೈಯಕ್ತಿಕ ಅಭಿವೃದ್ಧಿ ಹೆಚ್ಚಿಸುವ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಜ್ಯೂನಿವರ್ ಛೇಂಬರ್ ಇಂಟರ್ ನ್ಯಾಷನಲ್ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
SUMMARY | A bike rider died after being hit by a tree under Tunga Nagar police station limits on March 9.
KEYWORDS | bike rider, died, Tunganagar, chatpat news,