SHIVAMOGGA | MALENADUTODAY NEWS | ಮಲೆನಾಡು ಟುಡೆ Feb 8, 2025

ಶಿವಮೊಗ್ಗ ಮೂಲದ ಯೋದರೊಬ್ಬರು ದೈನಂದಿನ ಪ್ಯಾರಚೂಟ್ ತರಬೇತಿ ವೇಳೆ ನಿಧನರಾಗಿದ್ದಾರೆ. ಆಗ್ರಾದಲ್ಲಿರುವ ಪ್ಯಾರಾಟ್ರೂಪರ್ ತರಬೇತಿ ಕೇಂದ್ರದಲ್ಲಿ ಸ್ಕೈಡೈವಿಂಗ್ ವೇಳೆ ಹಾರಿದ 12 ಮಂದಿ ಪೈಕಿ ಶಿವಮೊಗ್ಗದ 36 ವರ್ಷದ ಸುರಕ್ಷಿತವಾಗಿ ಕೆಳಕ್ಕೆ ಇಳಿದಿರಲಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದಾಗ, ಅವರು ತೀವ್ರ ಗಂಭೀರವಾದ ಸ್ಥಿತಿಯಲ್ಲಿ ಗೋದಿಯ ಹೊಲದಲ್ಲಿ ಪತ್ತೆಯಾಗಿದ್ದರು. ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರದೊಯ್ಯಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅವರ ಮನೆಯವರಿಗೆ ಮಾಹಿತಿ ನೀಡಲಾಗಿದೆ ಎಂದು ಇಂಡಿಯನ್ ಏರ್ಫೋರ್ಸ್ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಶಿವಮೊಗ್ಗದ ಮಂಜುನಾಥ್ ಯಾವ ತಾಲ್ಲೂಕುನವರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಇವರು ಏರ್ಫೋರ್ಸ್ನಲ್ಲಿ ಜ್ಯೂನಿಯರ್ ವಾರಂಟ್ ಆಫಿಸರ್ ಆಗಿದ್ದರು. ನಿನ್ನೆ ದಿನ ಬೆಳಗ್ಗೆ 8.30 ಕ್ಕೆ ವಾಯುಸೇನೆಯ ವಿಮಾನ AN-32 ನಿಂದ ಒಟ್ಟು 12 ಮಂದಿ ದೈನಂದಿನ ತರಬೇತಿಯ ಭಾಗವಾಗಿ ಆಕಾಶದಿಂದ ಜಿಗಿದಿದ್ದರು. ಈ ಪೈಕಿ 11 ಮಂದಿ ಸುರಕ್ಷಿತವಾಗಿ ತರಬೇತಿ ಕೇಂದ್ರಕ್ಕೆ ವಾಪಸ್ ಆಗಿದ್ದಾರೆ. ಆದರೆ ಮಂಜುನಾಥ್ ವಾಪಸ್ ಆಗಿರಲಿಲ್ಲ. ಹೀಗಾಗಿ ಹುಡುಕಾಟ ನಡೆಸಿದಾಗ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಮೇಲಾಗಿ ಅವರ ಪ್ಯಾರಚೂಟ್ ಓಪನ್ ಆಗಿರಲಿಲ್ಲ. ಸ್ಕೈಡೈವಿಂಗ್ ವೇಳೆ ಪ್ಯಾರಾಚೂಟ್ ಬಿಚ್ಚಿಕೊಳ್ಳದ ಕಾರಣ, ಮಂಜುನಾಥ್ರವರ ರಭಸವಾಗಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರ ಸಾವಿಗೂ ಪ್ಯಾರಚೂಟ್ ತೆರೆದುಕೊಳ್ಳದೆ ಇರುವುದು ಕಾರಣ ಎನ್ನಲಾಗುತ್ತಿದೆ.

SUMMARY | junior warrant officer in the Indian Air Force (IAF) from Karnataka lost his life after his parachute failed to open during a routine training exercise at Paratrooper Training School (PTS) in Agra on Friday
KEY WORDS | junior warrant officer , Indian Air Force ,IAF,Karnataka ,parachute failed to open during a routine training ,Paratrooper Training School ,PTS,