SHIVAMOGGA| MALENADUTODAY NEWS | ಮಲೆನಾಡು ಟುಡೆ Mar 6, 2025

ಸುದ್ದಿ 1 : ದೊಡ್ಡಪ್ಪನ ಮಗಳ ಮೇಲೆ ಚಿಕ್ಕಪ್ಪನ ಮಗನ ಕಣ್ಣು | ಚಿಕ್ಕಮಗಳೂರು ಜಿಲ್ಲೆಯ ಗ್ರಾಮವೊಂದರಲ್ಲಿ ತನ್ನ ದೊಡ್ಡಪ್ಪನ ಅಪ್ರಾಪ್ತ ವಯಸ್ಸಿನ ಮಗಳನ್ನ ಗರ್ಭವತಿ ಮಾಡಿದ ಆರೋಪದ ಅಡಿಯಲ್ಲಿ ಓರ್ವ ಯುವಕನನ್ನು ಪೋಕ್ಸೋ ಕೇಸ್ನಡಿ ಬಂಧಿಸಲಾಗಿದೆ. ಈತ ತನ್ನ ದೊಡ್ಡಪ್ಪನ ಮಗಳ ಜತೆ ಸಲುಗೆ ತೆಗೆದುಕೊಂಡು ದೈಹಿಕ ಸಂಬಂಧ ಹೊಂದಿದ್ದ. ಬಳಿಕ ಅಪ್ರಾಪ್ತೆಯು ಗರ್ಭಿಣಿಯಾಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ವೈಯಕ್ತಿಕ ವಿವರಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ.
ಸುದ್ದಿ 2 : ಅಕ್ಕನ ಮಗಳ ಎಂಟ್ರಿ , ಗಂಡ ಕಾಣೆ
ಗಂಡನ ಅಕ್ಕನ ಮಗಳು ತನ್ನ ಜೀವನಕ್ಕೆ ಎಂಟ್ರಿಯಾದ ಬೆನ್ನಲ್ಲೆ ತಮ್ಮ ಪತಿ ಕಾಣೆಯಾಗಿರುವುದಾಗಿ ಪತ್ನಿಯೊಬ್ಬರು ಶಿವಮೊಗ್ಗದ ಠಾಣೆಯೊಂದದರಲ್ಲಿ ದೂರು ನೀಡಿದ್ದಾರೆ. ಸಂತ್ರಸ್ತೆಯು ನೀಡಿರುವ ದೂರಿನಲ್ಲಿ, ಪ್ರೀತಿಸಿ ಮದುವೆಯಾದ ದಾಂಪತ್ಯದ ನಡುವೆ ತಮ್ಮ ಗಂಡನ ಅಕ್ಕನ ಮಗಳು ಪ್ರವೇಶ ಮಾಡಿದ್ದಳು. ಅವಳ ಫೋನ್ ನಂಬರ್ ಬ್ಲಾಕ್ ಮಾಡಿಸಿದ್ದರು ಸಹ, ತಮ್ಮ ಪತಿ ಆಕೆಯ ಸಂಪರ್ಕದಲ್ಲಿದ್ದ. ಈ ನಡುವೆ ಆಕೆಯ ಫೋನ್ ತೆಗೆದುಕೊಂಡು ಬಂದಿದ್ದ ಪತಿಯನ್ನು ಪ್ರಶ್ನಿಸಿದಾಗ ಜಗಳವಾಗಿದೆ. ಆ ಬಳಿಕ ಅಂಗನವಾಡಿಯಲ್ಲಿದ್ದ ಮಗನನ್ನು ಕರೆದುಕೊಂಡು ಮನೆಗೆ ಬರುವಷ್ಟರಲ್ಲಿ ತಮ್ಮ ಪತಿ ಮನೆಯಿಂದ ಕಾಣೆಯಾಗಿದ್ದ ಎಂದು ಪತ್ನಿ ದೂರು ನೀಡಿದ್ದಾರೆ.

ಸುದ್ದಿ 3 : ಆನಂದಪುರದ ಸಮೀಪದ ಮಲಂದೂರು ಗ್ರಾಮದಲ್ಲಿ ನಿರ್ಮಿಸಲಾದ ಕಸ ವಿಲೇವಾರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ಲಾಸ್ಟಿಕ್, ವೇಪರ್ ಸೇರಿದಂತೆ ಎಲ್ಲ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದಲ್ಲದೆ ಕಟ್ಟಡಕ್ಕೂ ಹಾನಿ ಸಂಭವಿಸಿದೆ. ಸುಮಾರು 4-5 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರುಗಳು ಸ್ಥಳಕ್ಕೆ ಧಾವಿಸಿ ಬೆಂಕಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ನಂತರ ಸಾಗರ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಒಂದೇ ತಿಂಗಳಿನಲ್ಲಿ ಎರಡನೇ ಬಾರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಸುದ್ದಿ 4 : ಕೆಮಿಕಲ್ ಪ್ಯಾಕ್ಟರಿ ಮೇಲೆ ರೇಡ್ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಜೇನುತುಪ್ಪ ಹಾಗೂ ವಿನೆಗರ್ ತಯಾರಿಕ ಘಟಕದ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಹಾಗೂ ಸಾಗರ ತಹಸೀಲ್ದಾರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ತಹಸಿಲ್ದಾರ್ ಚಂದ್ರಶೇಖರ್ ನಾಯಕ್, ಆಹಾರ ಸುರಕ್ಷತೆ ಇಲಾಖೆ ಅಧಿಕಾರಿ ಗುರುರಾಜ್ ,ಪಿಡಿಒ ಸೋಮಪ್ಪ ವಿಲೇಜ್ ಅಕೌಂಟೆಂಟ್ ಗುರುರಾಜ್ ಹಾಜರಿದ್ದರು. ಇನ್ನೂ ಪ್ಯಾಕ್ಟರಿಯಲ್ಲಿನ ಸ್ಯಾಂಪಲ್ಗಳನ್ನು ಪಡೆದಿರುವ ಅಧಿಕಾರಿಗಳು ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ರಿಪೋರ್ಟ್ ಬಳಿಕ ಮುಂದಿನ ಪ್ರಕ್ರಿಯೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.