SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 24, 2025

ಶಿವಮೊಗ್ಗ | ಕೆಲವು ತಾಂತ್ರಿಕ ಅಡೆತಡೆಯಿಂದ ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆಯಾಗುವುದು ತಡವಾಗಿದೆ. ಅತಿ ಶೀಘ್ರದಲ್ಲಿ ಫಲಾನುಭವಿಗಳಿಗೆ ಗ್ಯಾರಂಟಿಯೋಜನೆಯ ಹಣ ತಲುಪಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೆ ಯುವನಿಧಿ ಯೋಜನೆಯ ಫಲವನ್ನು ಪಡೆಯಲು 11 ಕೋಟಿ ಯುವಕರು ನೋಂದಣಿಯಾಗಿದ್ದಾರೆ. ವಿಪಕ್ಷದವರು ಕಮಿಷನ್ಗಾಗಿ ಯೋಜನೆ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಮಾತನಾಡಿದ್ದಾರೆ. ಈಗ ಶ್ವೇತ ಪತ್ರ ಹೊರಡಿಸುವುದು ಬಿಡುವುದು ಪ್ರಶ್ನೆಯಲ್ಲ ಕೆಲವು ತಾಂತ್ರಿಕ ಅಡಚಣೆಯಿಂದ ಅತಿಥಿ ಉಪನ್ಯಾಸಕರಿಗೆ ಸ್ಯಾಲರಿ ಬಿಡುಗಡೆಯಾಗಿಲ್ಲ ಅಷ್ಟೇ. ನಾವು ಗ್ಯಾರಂಟಿ ಯೋಜನೆಗಳ ಅನುದಾನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ವಿಪಕ್ಷದವರು ಬೇಕೆಂತಲೇ ನಮ್ಮ ಯೋಜನೆಗಳ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಹಣ ಬಿಡುಗಡೆಯಾಗುವ ಬಗ್ಗೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕವಾಗಿ ಸಬಲವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆರಂಭವಾಗಿದೆ. ಕಳೆದೊಂದು ವರ್ಷದ ನಿಧಾನಗತಿಯಲ್ಲಿದ್ದ ಯೋಜನೆಗಳಿಗೆ ವೇಗ ನೀಡಲಾಗುವುದು ಎಂದರು.

ನಂತರ ಶಿವಮೊಗ್ಗದ ಆಚಾರ್ಯ ತುಳಸಿ ನ್ಯಾಷನಲ್ ಕಾಲೇಜ್ನಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೌಶಲ್ಯ ಮತ್ತು ರೋಜಗಾರ್ ಉದ್ಯೋಗ ಮೇಳ ಯಶಸ್ವಿಯಾಗಿದೆ. ಯಾವ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಶ್ಯಕತೆ ಇದೆ ಅಂತಹ ವಿದ್ಯಾರ್ಥಿಗಳು, ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದಾರೆ. ಸುಮಾರು 40 ಕ್ಕೂ ಹೆಚ್ಚು ಕಂಪನಿಗಳು ಈ ಉದ್ಯೋಗ ಮೇಳಕ್ಕೆ ಬಂದಿವೆ. ಉದ್ಯೋಗ ಮೇಳ ನಾಮಕಾವಸ್ಥೆ ಆಗಬಾರದು ಎಂದರು.
SUMMARY | The release of funds for the guarantee schemes has been delayed due to some technical snag. Education Minister Madhu Bangarappa opined that the guarantee scheme money will reach the beneficiaries very soon.
KEYWORDS | guarantee schemes, Madhu Bangarappa, Education Minister, political news,