Sunday, 18 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಕಮಲದೊಳಗೆ ಕುಮಾರ ಪರ್ವ! ಶಿವಮೊಗ್ಗ ಪವರ್‌ ಪಾಲಿಟಿಕ್ಸ್‌ನಲ್ಲಿ ವಸಂತ ಅಶ್ವಮೇಧ

13
Last updated: February 23, 2025 8:17 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌ 

ಶಿವಮೊಗ್ಗ ರಾಜಕಾರಣ ಮತ್ತೊಂದು ಮಜಲಿನತ್ತ. ಬದಲಾಗುತ್ತಿರುವ ತಲೆಮಾರಿನಲ್ಲಿ, ರಾಜಕಾರಣದಲ್ಲಿ ಎರಡನೇ ಸ್ಥರದ ನಾಯಕರು ಪವರ್‌ ಸೆಂಟರ್‌ನಲ್ಲಿ ಪವರ್‌ ಮ್ಯಾನ್‌ಗಳಿಗೆ ಟಕ್ಕರ್‌ ಕೊಡುತ್ತಿದ್ದಾರೆ.  ಈ ಪೈಕಿ, ಇನ್ಮುಂದೆ ಇದಕ್ಕೆ ನನ್ನದು ಹೊಸ ಲೆಕ್ಕ ಎನ್ನುತ್ತಿದ್ದಾರೆ ಕುಮಾರ್‌ ಬಂಗಾರಪ್ಪ. ಏನಿದು ಏತಕ್ಕೆ ಇದು ಎಂಬುದಕ್ಕೆ ಇಲ್ಲಿದೆ ವಿವರ

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ರಾಜ್ಯ ರಾಜಕೀಯದ ಶಕ್ತಿ ಕೇಂದ್ರ. ಈ ಮಾತಿಗೆ ರಾಜಕಾರಣದಲ್ಲಿನ ಶಿವಮೊಗ್ಗದ ಘಟಾನುಘಟಿಗಳೇ ಸಾಕ್ಷಿ. ಅದರಲ್ಲಿಯು ಸಾರೆಕೊಪ್ಪ ಬಂಗಾರಪ್ಪ ಬಿಎಸ್‌ ಯಡಿಯೂರಪ್ಪರ ನಡುವಿನ ರಾಜಕೀಯ ಪೈಪೋಟಿ ಇಡೀ ರಾಜ್ಯದಲ್ಲಿ ಪ್ರದರ್ಶನಗೊಂಡಿರುವುದು ಎಲ್ಲರಿಗೂ ಗೊತ್ತಿರುವಂತದ್ದೆ. ಈ ಪೈಪೋಟಿಯಲ್ಲಿ ಇದೀಗ ಹೊಸ ಎಂಟ್ರಿ ತೆಗೆದುಕೊಂಡಿರುವುದು ಕುಮಾರ್‌ ಬಂಗಾರಪ್ಪ. ಅತ್ತ ಕಾಂಗ್ರೆಸ್‌ನಲ್ಲಿ ತಮ್ಮ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರಷ್ಟೆ ಅಲ್ಲದೆ ಶಿವಮೊಗ್ಗದಲ್ಲಿ ಸ್ಟ್ರಾಂಗ್‌ ಹೋಲ್ಡ್‌ ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ ಪಾಳಯದಲ್ಲಿ ಸದ್ಯ ಅವರದ್ದೆ ಕೈ ನಡೆಯುತ್ತಿದೆ. ಇತ್ತ ಸೊರಬದಲ್ಲಿ ತಮ್ಮನಿಂದ ಸೋತ ಕುಮಾರ್‌ ಬಂಗಾರಪ್ಪ ಕೆಲವು ದಿನ ಸೈಲೆಂಟ್‌ ಆಗಿದ್ದರು. ಆದರೆ ಇದೀಗ ಹೈಫರ್‌ ಆಕ್ಟೀವ್‌ ಆಗಿದ್ದಾರೆ. ಬಿಜೆಪಿ ಶುದ್ಧಿಕರಣ ಚಳವಳಿಗೆ ತಮ್ಮದೆ ಮನೆಯನ್ನು ವೇದಿಕೆಯಾಗಿ ಒದಗಿಸಿರುವ ಅವರ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣದ  ಸೆಂಟರ್‌ ಪಾಯಿಂಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಿನ್ನೆ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯೇ ಸಾಕ್ಷಿ. ಯುತ್ನಾಳಗೆ ಬಂದ ಹೈಕಮಾಂಡ್‌ ನೋಟಿಸಿನಿಂದ ಮಾತು ಆರಂಭಿಸಿದ ಅವರು ರಾಜ್ಯಾಧ್ಯಕ್ಷ ಸ್ಥಾನ ಬದಲಾಗಬೇಕು, ಆ ಸ್ಥಾನ ನನಗೆ ನೀಡಿದರೂ ಸೈ ಒಟ್ನಲ್ಲಿ ಚುನಾವಣೆ ಫಿಕ್ಸ್‌ ಎಂದಿದ್ದಾರೆ. 

ಹೀಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ ವಿರುದ್ಧ  ತಮ್ಮ ಕಡೆಯಿಂದ ನಾಮಪತ್ರ ಸಲ್ಲಿಸುವುದು ನಿಕ್ಕಿ ಎಂದಿರುವ ಅವರು ಈ ಸಲ ರಾಜ್ಯಾಧ್ಯಕ್ಷರ ಬದಲಾವಣೆ ನೂರಕ್ಕೆ ನೂರು ಆಗುತ್ತದೆ ಚುನಾವಣಾ ಉಸ್ತುವಾರಿ ಶಿವರಾಜ್‌ ಸಿಂಗ್‌ ಚೌಹಾಣ್‌ ರಾಜ್ಯಕ್ಕೆ ಬರಬೇಕು, ಚುನಾವಣೆ ವೇಳಾಪಟ್ಟಿ ನಿಗದಿಯಾಗಬೇಕು, ತದನಂತರ ಮುಂದಿನ ವಿಚಾರ ತಿಳಿಯುವುದು ಎಂದಿದ್ದಾರೆ. ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಚುನಾವಣೆ ನಡೆಯುವರೆಗೂ ನಮ್ಮ ವಾದ ಇದೇ ರೀತಿಯಿರುತ್ತದೆ ಅಂತಾ ಬಿವೈ ವಿಜಯೇಂದ್ರರಿಗೆ ನೇರ ಸವಾಲು ಹಾಕಿದ್ದಾರೆ. 

ತಮ್ಮನಿಗೆ ಸವಾಲ್‌ ಅಣ್ಣನಿಗೆ ಸಾಥ್‌ 

ಶಾಸಕರಾಗಿದ್ದಾಗಿನಿಂದಲೂ ತಮ್ಮ ವೈಯಕ್ತಿಕ ಪ್ರತಿಷ್ಟೆ ವಿಚಾರದಲ್ಲಿ ರಾಜಿಮಾಡಿಕೊಳ್ಳದ ಕುಮಾರ್‌ ಬಂಗಾರಪ್ಪ, ಆಗಾಗ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಳ್ತಾನೆ ಇದ್ದರು. ಆಗೆಲ್ಲಾ ಸಂಸದ ಬಿವೈ ರಾಘವೇಂದ್ರ ಖುದ್ದು ಕುಮಾರ್‌ ಬಂಗಾರಪ್ಪನವರ ಮನೆಗೆ ಹೋಗಿ ಸಮಾಧಾನ ಮಾಡುತ್ತಿದ್ದರು. ಆನಂತರ ಶಾಸಕ ಸ್ಥಾನದ ಚುನಾವಣೆ ವೇಳೆ ನಮೋ ವೇದಿಕೆ ಕುಮಾರ್‌ ಬಂಗಾರಪ್ಪರನ್ನ ಬಿಡದೇ ಕಾಡಿತು, ಸೋಲಿಗೂ ಒಂಚೂರು ಕಾರಣವಾಯ್ತು. ಆನಂತರ ಸೈಲೆಂಟ್‌ ಆದ ಕುಮಾರ್‌ ಬಂಗಾರಪ್ಪ, ಎಂಪಿ ಎಲೆಕ್ಷನ್‌ ಪ್ರಚಾರಕ್ಕೆ ಬಿಜೆಪಿ ಪರವಾಗಿ ಬರೋದಿಲ್ಲ ಎಂದೇ ಯೋಚಿಸಲಾಗಿತ್ತು. ಅಲ್ಲದೆ ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ಗೆ ಬರುತ್ತಾರೆ, ಅವರೇ ಬಿವೈಆರ್‌ ವಿರುದ್ಧ ನಿಲ್ಲುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅಂತಹದ್ದೊಂದು ಪ್ರಯತ್ನ ಮಧು ಬಂಗಾರಪ್ಪರವರ ಹಠ ಸಾಧನೆಯಿಂದ ನಿಂತಿತು ಎನ್ನುತ್ತದೆ ರಾಜಕಾರಣ. 

ಈ ಮಧ್ಯೆ ದಿಢೀರ್‌ ಅಲರ್ಟ್‌ ಆದ ಕುಮಾರ್‌ ಬಂಗಾರಪ್ಪ ರಾಷ್ಟ್ರೀಯ ನಾಯಕರು ಶಿವಮೊಗ್ಗಕ್ಕೆ ಬರಲು ಆರಂಭಿಸುತ್ತಲೇ ಅವರೊಂದಿಗೆ ಸರ್‌ಪ್ರೈಸ್‌ ಎಂಟ್ರಿ ಕೊಟ್ಟರು. ಬಿವೈ ರಾಘವೇಂದ್ರರ ಬೆನ್ನಿಗೆ ನಿಂತು ಜೈ ಎಂದು ಬಿಡಿ ಎಂದ ಅವರು, ಸಚಿವ ಮಧು ಬಂಗಾರಪ್ಪರವರ ಕ್ಷೇತ್ರದಲ್ಲಿ‌, ಸಹೋದರಿ ಗೀತಾ ಶಿವರಾಜ್‌ ಕುಮಾರ್‌ ವಿರುದ್ಧ ಬಿವೈಆರ್‌ಗೆ ದೊಡ್ಡ ಲೀಡ್‌ ತಂದುಕೊಟ್ರು. ಇದು ಕುಮಾರ್ ಬಂಗಾರಪ್ಪರವರ ಪವರ್‌ ಎಂಬ ಮಾತು ಆ ಹೊತ್ತಲ್ಲಿ ಕೇಳಿದ್ದು ನಿಜ. ಹೀಗೇ ಬಿವೈಆರ್‌ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದ ಕುಮಾರ್‌ ಬಂಗಾರಪ್ಪ ಇದೀಗ  ರಾಘವೇಂದ್ರರ ಸಹೋದರ ಬಿವೈ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ. 

ಮೊದಲಿನಿಂದಲೂ ಬಿವೈ ವಿಜಯೇಂದ್ರರ ಜೊತೆ ಅಷ್ಟಾಗಿ ವೇದಿಕೆ ಹಂಚಿಕೊಳ್ಳದ ಕುಮಾರ್‌ ಬಂಗಾರಪ್ಪರಿಗೆ ಬಿಜೆಪಿಯ ದೊಡ್ಡ ಬಣವೊಂದು ನೇರವಾಗಿ ಸಪೋರ್ಟ್‌ ಮಾಡುತ್ತಿದೆ. ಆ ಶಕ್ತಿಯಿಂದಲೇ ಕುಮಾರ್‌ ಬಂಗಾರಪ್ಪ ವಿಜಯೇಂದ್ರರ ಬದಲಾವಣೆ ಕಾಲ ಬಂದಿದೆ ಎನ್ನುತ್ತಿದ್ದಾರೆ. ಅವರ ಈ ನಡೆ ಶಿವಮೊಗ್ಗದಲ್ಲಿ ಸಾಕಷ್ಟು ಕತೂಹಲ ಮೂಡಿಸ್ತಿದೆ. ವಿಜಯೇಂದ್ರರ ಬದಲಾವಣೆ ಬಗ್ಗೆ ಮಾತ್ರ ಮಾತನಾಡುವ ಕುಮಾರ್‌ ಬಂಗಾರಪ್ಪ, ಯತ್ನಾಳರ ರೀತಿಯಲ್ಲಿ ಬಿಎಸ್‌ವೈ ಅಥವಾ ಬಿವೈಆರ್‌ ಬಗ್ಗೆ ಪ್ರಸ್ತಾಪಿಸ್ತಲ್ಲ ಎಂಬುದೆ ವಿಶೇಷ. 

SUMMARY | ಕುಮಾರ್‌ ಬಂಗಾರಪ್ಪ, ಮಧು ಬಂಗಾರಪ್ಪ, ಬಿಎಸ್‌ ಯಡಿಯೂರಪ್ಪ, ಸಾರೇಕೊಪ್ಪ ಬಂಗಾರಪ್ಪ, ಎಸ್‌ ಬಂಗಾರಪ್ಪ, ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ , ಬಿಜೆಪಿ ರಾಜ್ಯಾಧ್ಯಕ್ಷ ಬಸನಗೌಡ ಪಾಟೀಲ್‌ ಯತ್ನಾಳ್‌ , Kumar Bangarappa, Madhu Bangarappa, BS Yeddyurappa, Sarekoppa Bangarappa, S Bangarappa, BY Raghavendra, BY Vijayendra, BJP State President Basanagowda Patil Yatnal.

KEY WORDS |‌  ಕುಮಾರ್‌ ಬಂಗಾರಪ್ಪ, ಮಧು ಬಂಗಾರಪ್ಪ, ಬಿಎಸ್‌ ಯಡಿಯೂರಪ್ಪ, ಸಾರೇಕೊಪ್ಪ ಬಂಗಾರಪ್ಪ, ಎಸ್‌ ಬಂಗಾರಪ್ಪ, ಬಿವೈ ರಾಘವೇಂದ್ರ, ಬಿವೈ ವಿಜಯೇಂದ್ರ , ಬಿಜೆಪಿ ರಾಜ್ಯಾಧ್ಯಕ್ಷ ಬಸನಗೌಡ ಪಾಟೀಲ್‌ ಯತ್ನಾಳ್‌ , Kumar Bangarappa, Madhu Bangarappa, BS Yeddyurappa, Sarekoppa Bangarappa, S Bangarappa, BY Raghavendra, BY Vijayendra, BJP State President Basanagowda Patil Yatnal.

malenadutoday add
Share This Article
Email Copy Link Print
Previous Article ಲಾರಿಯಲ್ಲಿ ಅಡಿಕೆ ಸಾಗಿಸಲು ನಿರ್ಬಂಧ ‌‌& GST ಪ್ರಾಬ್ಲಮ್‌ | ಸಚಿವ ಮಧು ಬಂಗಾರಪ್ಪರ ಮಹತ್ವದ ಹೇಳಿಕೆ !
Next Article ಶಿರಸಿಯಲ್ಲಿ KSRTC ಬಸ್‌ನಲ್ಲಿಯೇ ಸಾಗರದ ನಿವಾಸಿಯ ಹತ್ಯೆ!? ಪತ್ನಿ, ಪ್ರಿಯಕರ ಅರೆಸ್ಟ್‌!
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

POLITICS

ಇನ್ನೇರಡು ತಿಂಗಳಲ್ಲಿ ಆಶ್ರಯ ಮನೆ ನೀಡದಿದ್ದರೆ ಹೋರಾಟ

By 131
POLITICS

ಈದ್ಗಾ ಮೈದಾನದ ವಿಚಾರವಾಗಿ ಲೋಕಾಯುಕ್ತ & ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಬೇಟಿ ಮಾಡುತ್ತೇವೆ | ಕೆ ಎಸ್‌ ಈಶ್ವರಪ್ಪ

By 131
POLITICS

ಶಿವಮೊಗ್ಗ ಪಾಲಿಕೆ ಎಲೆಕ್ಷನ್‌ ಕುರಿತಾದ BIG ಅಪ್‌ಡೇಟ್ಸ್‌ | MLA ಚನ್ನಬಸಪ್ಪರಿಗೆ ಚುನಾವಣಾ ಆಯೋಗ ಪತ್ರ | ಲೆಟರ್‌ನಲ್ಲಿ ಏನಿದೆ ಗೊತ್ತಾ?

By 13
by vijayendra
POLITICS

by vijayendra :  ಮೇ 14 ರಂದು ರಾಜ್ಯದಾಧ್ಯಂತ ತಿರಂಗಾ ಯಾತ್ರೆಗೆ ಚಾಲನೆ | ಏನಿದು ತಿರಂಗ ಯಾತ್ರೆ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up