SHIVAMOGGA | MALENADUTODAY NEWS | Aug 11, 2024 ಮಲೆನಾಡು ಟುಡೆ
ತುಂಗಭದ್ರಾ ಡ್ಯಾಂ ಗೇಟ್ ಚೈನ್ ಕಟ್ ಆಗಿ ಭಾರೀ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದೆ. ಒಂದು ಕಡೆ ಆತಂಕ, ಇನ್ನೊಂದು ಕಡೆ ಬೆಳೆಗೆ ನೀರು ಉಳಿಯದು ಎಂಬ ಸಂಕಟಗಳ ನಡುವೆ ಜನಪ್ರತಿನಿಧಿಗಳು ಘಟನೆಯನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ.
ತುಂಗಭದ್ರಾ ಜಲಾಶಯ
ಈ ಸಂಬಂಧ ಶಿವಮೊಗ್ಗದಲ್ಲಿ ಮಾತನಾಡಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (tungabhadra dam gate collapse) ತುಂಗಭದ್ರಾ ಡ್ಯಾಂ ಗೇಟ್ ಹಾಳಾಗಿದೆ. ಹಾಗೆ ಆಗಬಾರದಿತ್ತು ಆಗಿದೆ ಎಂದಿದ್ದಾರೆ.
ಇನ್ನೂ ಡ್ಯಾಂಗಳ ರಿಪೇರಿಗೆ ಕೇಂದ್ರ ಸರ್ಕಾರ ಹಣ ನೀಡಬೇಕು, ಆದರೆ ನೀಡಿಲ್ಲ, ಸದ್ಯ ತುಂಗಾಭದ್ರಾ ಡ್ಯಾಂನ ಗೇಟ್ ರಿಪೇರಿಯು ಸೇರಿದಂತೆ ಎಲ್ಲಾ ಜಲಾಶಯಗಳ ದುರಸ್ಥಿಗೆ ಕೇಂದ್ರ ಸರ್ಕಾರ ಹಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಹೇಗಿದೆ ಡ್ಯಾಂಗಳ ಸ್ಥಿತಿಗತಿ
ಅಲ್ಲದೆ ನಮ್ಮ ಜಿಲ್ಲೆಯಲ್ಲಿ ಎಲ್ಲ ಕಡೆ ಚೆನ್ನಾಗಿದೆ. ಜಲಾಶಯಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ರವರು ಸಹ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ನಾಲ್ಕು ದಿನಗಳಲ್ಲಿ ತುಂಗಭದ್ರಾ ಜಲಾಶಯದ ಗೇಟ್ನ ದುರಸ್ಥಿ ನಡೆಯಲಿದೆ ಎಂದಿದ್ದಾರೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ