SHIVAMOGGA | MALENADUTODAY NEWS | Aug 16, 2024 ಮಲೆನಾಡು ಟುಡೆ
ರಾಜ್ಯ ರಾಜಧಾನಿ ಬೆಂಗಳೂರಿನ ಹಾಗೆ ಶಿವಮೊಗ್ಗದಲ್ಲಿಯು ಸಹ ಮಳೆ ಬಿಸಿಲು ಎರಡು ಕಾಣಸಿಗುತ್ತಿದೆ. ಅಬ್ಬರದ ಮಳೆಯು ಸುರಿದ ಬೆನ್ನಲ್ಲೆ ಬಿಸಿಲು ಮೂಡುತ್ತಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ಕೂಡ ಕಳೆದೆ ಕೆಲಹೊತ್ತಿನ ನಡುವೆ ಸುರಿದ ಮಳೆಯಿಂದಾಗಿ ಸ್ಮಾರ್ಟ್ ಸಿಟಿಯ ಮುಚ್ಚಿದ ಚರಂಡಿಗಳು ಸಹ ನೀರು ಹೊರಕ್ಕೆ ಚೆಲ್ಲಲು ಆರಂಭಿಸಿದ್ದವು,ಅಲ್ಲದೆ ಪ್ರಮುಖ ರಸ್ತೆಗಳ ಮೇಲೆ ನೀರು ಹರಿಯಲಾರಂಭಿಸಿತ್ತು.

ಇವತ್ತು ಬೆಳಗ್ಗೆಯಿಂದಲೂ ಶಿವಮೊಗ್ಗದಲ್ಲಿ ಮೋಡ ಕವಿದಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಬರಲು ಆರಂಭವಾಯ್ತು. ಈ ನಡುವೆ ಒಮ್ಮೆಲೆ ಜೋರಾದ ಮಳೆಯು ಸುಮಾರು ಮುಕ್ಕಾಲು ಗಂಟೆಗಳ ಕಾಲ ಬಿರುಮಳೆಯಾಗಿ ಸುರಿಯಿತು. ಪರಿಣಾಮ ಚರಂಡಿಗಳು ಓವರ್ ಪ್ಲೋ ಆಗಿ ಪ್ರಮುಖ ರಸ್ತೆಗಳಲ್ಲಿಯೇ ನೀರು ಹರಿಯಲು ಆರಂಭವಾಗಿದೆ.
ವಿಶೇಷವಾಗಿ ಕಮಲಾ ನೆಹರು ಕಾಲೇಜಿನ ಬಳಿಯಲ್ಲಿನ ರಸ್ತೆಯಲ್ಲಿ ದೊಡ್ಡದೊಂದು ಕೆರೆಯೇ ಸೃಷ್ಟಿಯಾಗಿತ್ತು. ಇತ್ತ ಜೈಲ್ ರಸ್ತೆಯಲ್ಲಿ ಕಾಲು ಮುಳುಗುವಷ್ಟು ನೀರು ತುಂಬಿತ್ತು. ನೀರು ಹರಿಯದೆ ಕಟ್ಟಿಕೊಂಡಿದ್ದರಿಂದ ವಾಹನ ಸವಾರರು ಅದರಲ್ಲಿ ವಾಹನಗಳನ್ನ ಚಲಾಯಿಸಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಶಿವಮೊಗ್ಗ ಜೈಲ್ ರಸ್ತೆ ಜಲಾವೃತವಾಗಿದೆ. ಸುಬ್ಬಯ್ಯ ಆಸ್ಪತ್ರೆಯಿಂದ ಹೊಸಮನೆ ಚಾನೆಲ್ ವರೆಗು ರಸ್ತೆ ಮೇಲೆ ನೀರು ಹರಿಯುತ್ತಿದೆ. ಚರಂಡಿಗಳು ಭರ್ತಿಯಾಗಿ ನೀರು ಉಕ್ಕಿ ಬರುತ್ತಿದೆ. ವಾಹನ ಸವಾರರು ನಿಧಾನವಾಗಿ ಚಲಿಸುವಂತಾಗಿದೆ. ಇನ್ನು, ನಗರದ ವಿವಿಧೆಡೆ ತಗ್ಗು ಪ್ರದೇಶಗಳಿಗು ನೀರು ನುಗ್ಗಿದೆ ಎಂದು ಹೇಳಲಾಗುತ್ತಿದೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ