Thursday, 10 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

Shivamogga Arecanut Auction: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ 3200 ಅಡಿಕೆ ಮರಗಳ ಫಸಲು ಹರಾಜು: ಆಸಕ್ತರಿಗೆ ಆಹ್ವಾನ

prathapa thirthahalli
Last updated: July 10, 2025 2:25 pm
Prathapa thirthahalli - content producer
Share
SHARE

Shivamogga Arecanut Auction: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ 3200 ಅಡಿಕೆ ಮರಗಳ ಫಸಲು ಹರಾಜು: ಆಸಕ್ತರಿಗೆ ಆಹ್ವಾನ

Shivamogga Arecanut Auction ಶಿವಮೊಗ್ಗ : ಕೃಷಿ ಮತ್ತು ತೋಟಗಾರಿಕೆ ಸಂಶೋದನಾ ಕೇಂದ್ರ ನಗರದ ಹೊನ್ನಾವಿಲೆ ಕೇಂದ್ರದಲ್ಲಿ ಜುಲೈ 21 ರಂದು “ಡಿ, ಇ, ಮತ್ತು ಎಲ್” ತಾಕುವಿನಲ್ಲಿರುವ ಸುಮಾರು 3200 ಅಡಿಕೆ ಮರಗಳಲ್ಲಿರುವ ಫಸಲನ್ನು ನಿರ್ಧಿಷ್ಟ ಅವಧಿಗೆ ಬಹಿರಂಗ ಹರಾಜು ಮುಂದಾಗಿದೆ, ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ಕೃಷಿ ಮತ್ತು ತೋಟಗಾರಿಕೆ ಸಂಶೋದನಾ ಕೇಂದ್ರ ಕ್ಷೇತ್ರಾಧೀಕ್ಷರು ತಿಳಿಸಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬೆಳಿಗ್ಗೆ 10: 30 ಕ್ಕೆ ಟೆಂಡರ್​ ಲಕೋಟೆ ಸಲ್ಲಿಸಿ, ನಂತರ 11:30 ಕ್ಕೆ ಹರಾಜನ್ನು ಕೂಗಲಾಗುತ್ತದೆ. ಯಾರು ಹೆಚ್ಚಿನ ಬೆಲೆಗೆ ಒಪ್ಪಿಕೊಳ್ಳುತ್ತಾರೂ ಅವರು ವಿಲೇವಾರಿಗೆ ಪರಿಗಣಿಸಲಾಗುವುದು. ಆದರೆ ಹರಾಜಿಗೆ ಭಾಗಿಯಾಗುವವರು ಈ ಕೆಳಗಿನ ಷರತ್ತುಗಳಿಗೆ ಒಪ್ಪಿ ಹರಾಜಿಗೆ ಭಾಗಿಯಾಗಬೇಕು ಎಂದು ಇಲಾಖೆ ತಿಳಿಸಿದೆ

car decor

Shivamogga Arecanut Auction:  ಹರಾಜಿನಲ್ಲಿ ಭಾಗವಹಿಸಲು ಪ್ರಮುಖ ಷರತ್ತುಗಳು

ಟೆಂಡರ್ ಫಾರಂ ಮತ್ತು ಠೇವಣಿ: ಟೆಂಡರ್ ಫಾರಂಗಳನ್ನು ಜುಲೈ 21 ರಂದು ಕಚೇರಿ ಸಮಯದಲ್ಲಿಪಡೆಯಬಹುದು. ಮೊಹರಾದ ಟೆಂಡರ್ ಜೊತೆಗೆ 25 ಸಾವಿರ ಠೇವಣಿಯನ್ನು ಕಚೇರಿಯಲ್ಲಿ ನಗದು ರೂಪದಲ್ಲಿ ಪಾವತಿಸಿ ಹರಾಜಿನಲ್ಲಿ ಭಾಗವಹಿಸಬಹುದು. ಠೇವಣಿ ಇಲ್ಲದ ಟೆಂಡರ್‌ಗಳನ್ನು ತಿರಸ್ಕರಿಸಲಾಗುವುದು. ಟೆಂಡರ್‌ನಲ್ಲಿ ನಮೂದಿಸುವ ಬೆಲೆಯನ್ನು ಅಕ್ಷರಗಳಲ್ಲಿ ಮತ್ತು ಅಂಕಿಗಳಲ್ಲಿ ಬರೆಯಬೇಕು. ಮೊಹರಾದ ಕವರ್‌ಗಳ ಮೇಲೆ “ಹಸಿ ಅಡಿಕೆ ಕಾಯಿಯ ಉತ್ಪನ್ನವನ್ನು ನಿರ್ದಿಷ್ಟ ಅವಧಿಗೆ ಕಟಾವು ಮಾಡಿಕೊಳ್ಳಲು ಟೆಂಡರ್” ಎಂದು ನಮೂದಿಸಬೇಕು.

Shivamogga Arecanut Auction ಬಿಡ್ಡುದಾರರಿಗೆ ಠೇವಣಿ: ಬಿಡ್ಡುದಾರರು ಸಹ ₹25,000/- ಗಳನ್ನು ನಗದು ರೂಪದಲ್ಲಿ ಠೇವಣಿಯಾಗಿ ಪಾವತಿಸಿ ಟೆಂಡರ್ ಹಾಗೂ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು.

ಹರಾಜು ಮುಗಿದ ಕೂಡಲೇ ಅತಿ ಹೆಚ್ಚು ಬಿಡ್ಡುದಾರರು ಠೇವಣಿ ಹಣವನ್ನು ಹೊರತುಪಡಿಸಿ, ಹರಾಜಿನ ಒಟ್ಟು ಮೊತ್ತದ ಅರ್ಧದಷ್ಟು ಹಣವನ್ನು ಸ್ಥಳದಲ್ಲಿಯೇ ಪಾವತಿಸಬೇಕು. ಉಳಿದ ಅರ್ಧದಷ್ಟು ಹಣವನ್ನು ಹರಾಜು ನಡೆದ ದಿನದಿಂದ 7 ದಿನಗಳೊಳಗೆ ಪಾವತಿಸಬೇಕು. ತಪ್ಪಿದಲ್ಲಿ ಠೇವಣಿ ಹಣ ಮುಟ್ಟುಗೋಲು ಹಾಕಿಕೊಳ್ಳುವುದಲ್ಲದೆ, ಎರಡನೇ ಅತಿ ಹೆಚ್ಚು ಬಿಡ್ಡುದಾರರಿಗೆ ಉಂಟಾಗುವ ನಷ್ಟವನ್ನು ಮೊದಲ ಬಿಡ್ಡುದಾರರೇ ಭರಿಸಬೇಕಾಗುತ್ತದೆ.

ಹರಾಜಿನಲ್ಲಿ ಅನುತ್ತೀರ್ಣರಾದ ಬಿಡ್ಡುದಾರರ ಠೇವಣಿ ಹಣವನ್ನು ಹರಾಜು ಮುಗಿದ ನಂತರ ಹಿಂದಿರುಗಿಸಲಾಗುವುದು. ಯಶಸ್ವಿ ಬಿಡ್ಡುದಾರರ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು  ಯಾವುದೇ ಕಾರಣ ನೀಡದೆ ಟೆಂಡರ್ ಅಥವಾ ಹರಾಜನ್ನು ಸ್ವೀಕರಿಸುವ, ತಿರಸ್ಕರಿಸುವ ಅಥವಾ ಮುಂದೂಡುವ ಹಕ್ಕನ್ನು ಕಾದಿರಿಸಿಕೊಂಡಿದೆ.

ಹರಾಜು ಮುಗಿದ ನಂತರ ನೈಸರ್ಗಿಕ ವಿಕೋಪ, ಕಳ್ಳತನ ಅಥವಾ ಇತರೆ ಯಾವುದೇ ಕಾರಣದಿಂದ ಬೆಳೆಗೆ ನಷ್ಟವಾದಲ್ಲಿ ವಿಶ್ವವಿದ್ಯಾಲಯವು ಜವಾಬ್ದಾರಿಯಾಗಿರುವುದಿಲ್ಲ.

ಹರಾಜಿನಲ್ಲಿ ಭಾಗವಹಿಸುವವರು ಠೇವಣಿ ಇಡುವ ಮೊದಲು ಕಚೇರಿ ಸಮಯದಲ್ಲಿ ಅಡಿಕೆ ಫಸಲನ್ನು ಪರಿಶೀಲಿಸುವುದು ಕಡ್ಡಾಯ. ನಂತರ ಯಾವುದೇ ತಕರಾರುಗಳನ್ನು ವಿಶ್ವವಿದ್ಯಾಲಯವು ಪರಿಗಣಿಸುವುದಿಲ್ಲ.

ಯಶಸ್ವಿ ಬಿಡ್ಡುದಾರರಿಗೆ ವಿಶ್ವವಿದ್ಯಾಲಯದಿಂದ ಮುಂಗಡ ಹಣದ ಮೇಲೆ ಯಾವುದೇ ಬಡ್ಡಿ ಅಥವಾ ನಷ್ಟವನ್ನು ಭರಿಸಲಾಗುವುದಿಲ್ಲ.

ಅನ್ವಯವಾಗುವ ತೆರಿಗೆ ಸುಂಕಗಳನ್ನು ಬಿಡ್ಡುದಾರರೇ ಭರಿಸಬೇಕು.

ವಿಶ್ವವಿದ್ಯಾಲಯದ ಹಿತದೃಷ್ಟಿಯಿಂದ ಹೆಚ್ಚುವರಿ ಷರತ್ತುಗಳನ್ನು ವಿಧಿಸಿದಲ್ಲಿ ಅವುಗಳನ್ನು ಪಾಲಿಸಲು ಬಿಡ್ಡುದಾರರು ಬದ್ಧರಾಗಿರಬೇಕು.

ತೋಟದ ಹಗಲು ಮತ್ತು ರಾತ್ರಿ ಕಾವಲಿನ ಜವಾಬ್ದಾರಿ ಗುತ್ತಿಗೆದಾರನದಾಗಿರುತ್ತದೆ. ಕಾವಲಿಗೆ ಅಗತ್ಯವಿರುವ ಸಿಬ್ಬಂದಿಗೆ ವಿಶ್ವವಿದ್ಯಾಲಯದ ಅನುಮತಿ ಪಡೆದು ಗುರುತಿನ ಚೀಟಿ ನೀಡಬೇಕು. ತೋಟದಲ್ಲಿ ದನ, ಮೇಕೆ, ಕುರಿ, ಹಂದಿ ಮತ್ತಿತರ ಯಾವುದೇ ಪ್ರಾಣಿಗಳನ್ನು ಇಟ್ಟುಕೊಳ್ಳಬಾರದು ಅಥವಾ ಮೇಯಿಸಬಾರದು.

ಗುತ್ತಿಗೆದಾರರು ತೋಟವನ್ನು ಬೇರೆಯವರಿಗೆ ಮರು-ಗುತ್ತಿಗೆ ನೀಡುವಂತಿಲ್ಲ.

ಗುತ್ತಿಗೆ ಅವಧಿಯಲ್ಲಿ ಕರಾರಿಗೆ ವಿರುದ್ಧವಾಗಿ ನಡೆದುಕೊಂಡರೆ ಗುತ್ತಿಗೆಯನ್ನು ರದ್ದುಗೊಳಿಸಿ, ಪಾವತಿಸಿದ ಎಲ್ಲಾ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಈ ವಿಷಯದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ, ಮೇಲ್ವಿಚಾರಣೆ ಅಧಿಕಾರಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಅಡಿಕೆ ಫಸಲನ್ನು ಟೆಂಡರ್‌ನಲ್ಲಿ ತಿಳಿಸಿರುವ ನಿಯಮದಂತೆ ಮಾತ್ರ ಕೊಯ್ಲು ಮಾಡಬೇಕು. ಕೊಯ್ಲು ಮಾಡುವಾಗ ಅಂತರ ಬೆಳೆಗೆ ನಷ್ಟ ಉಂಟಾದಲ್ಲಿ ಗುತ್ತಿಗೆದಾರರು ವಿಶ್ವವಿದ್ಯಾಲಯಕ್ಕೆ ಪರಿಹಾರ ನೀಡಬೇಕು.

ಯಶಸ್ವಿ ಗುತ್ತಿಗೆದಾರರು ಈ ಗುತ್ತಿಗೆಯನ್ನು ಜನವರಿ 31, 2026 ರವರೆಗೆ ಮಾತ್ರ ಹೊಂದಿರುತ್ತಾರೆ. ಈ ದಿನಾಂಕದ ನಂತರ ಅಡಿಕೆ ಫಸಲನ್ನು ಕೊಯ್ಲು ಮಾಡುವ ಹಕ್ಕು ಇರುವುದಿಲ್ಲ.

ಕೃಷಿ ಚಟುವಟಿಕೆಗಳು: ಅಡಿಕೆ ಮರಗಳಿಗೆ ಗೊಬ್ಬರ ಹಾಕುವುದು, ಮಧ್ಯಂತರ ಬೆಸಾಯ, ನೀರಾವರಿ ಹಾಗೂ ಇತರೆ ಸಂಬಂಧಿತ ಕೆಲಸಗಳನ್ನು ಮಾಡುವ ಅಧಿಕಾರವನ್ನು ಕೇಂದ್ರದ ಅಧಿಕಾರಿಗಳು ಹೊಂದಿರುತ್ತಾರೆ.

 

Shivamogga Arecanut Auction ಈ ಎಲ್ಲಾ ಷರತ್ತುಗಳಿಗೆ ಒಪ್ಪುವ ಆಸಕ್ತರು ಹರಾಜಿನಲ್ಲಿ ಪಾಲ್ಗೊಳ್ಳಬಹುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹೊನ್ನಾವಿಲೆ, ಶಿವಮೊಗ್ಗ ಕಚೇರಿಯನ್ನು ಸಂಪರ್ಕಿಸಬಹುದು.

 

 

malenadutoday add
TAGGED:3200 Areca Nut Trees AuctionAgricultural Sciences University Arecanut AuctionArecanut Crop Tender KarnatakaHonnavile Areca Nut Crop SaleShivamogga Arecanut Auction
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article 112 Helpline 112 Helpline : ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ಮಾನವೀಯ ಕಾರ್ಯ: ಸಂಕಷ್ಟದಲ್ಲಿದ್ದ ತಾಯಿ-ಮಗುವಿಗೆ ಪೊಲೀಸ್ ನೆರವು
Next Article shivamogga news today shivamogga news today ಜುಲೈ 10 : ಶಿವಮೊಗ್ಗದಲ್ಲಿ ಗುರು ಪೂರ್ಣಿಮಾ ಸಂಭ್ರಮ: ರಾಘವೇಂದ್ರ ಸ್ವಾಮಿ ಮಠದಲ್ಲಿ ಫುಲ್​ ರಶ್,  ಟ್ರಾಫಿಕ್ ಜಾಮ್!
Leave a Comment

Leave a Reply Cancel reply

Your email address will not be published. Required fields are marked *

You Might Also Like

ಚಾರ್‌ ಧಾಮ್‌ ಯಾತ್ರೆಗಾಗಿ ಪ್ಯಾಕೆಜ್‌ ಬುಕ್‌ ಮಾಡಿದ್ರು | ದುಡ್ಡು ಕಟ್ಟಿದ ಬಳಿಕ ಹೊರಬಿತ್ತು ಬೆಂಗಳೂರು ವ್ಯಕ್ತಿಯ ಅಸಲಿ ಮುಖ

By 13
free cancer treatment
SHIVAMOGGA NEWS TODAY

free cancer treatment :  ಎಂಐಒ ಆಸ್ಪತ್ರೆಯಿಂದ ಕ್ಯಾನ್ಸರ್​ ರೋಗಿಗಳಿಗೆ ಸಿಹಿಸುದ್ದಿ | ಯಾರೆಲ್ಲಾ ಉಚಿತ ಚಿಕಿತ್ಸೆ ಪಡೆಯಬಹುದು

By Prathapa thirthahalli
SHIVAMOGGA NEWS TODAY

ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರರ್‌ ಜಿಲ್ಲಾ ಭೇಟಿ ಸೇರಿದಂತೆ ಟಾಪ್‌ 3 ಚಟ್‌ ಪಟ್‌ ನ್ಯೂಸ್

By 131
mp renukacharya
SHIVAMOGGA NEWS TODAY

mp renukacharya ಜುಲೈ 08 ಭದ್ರಾ ನಾಲೆ ವಿವಾದ, ನಾಳೆ ಚೀಫ್ ಇಂಜಿನಿಯರ್ ಕಚೇರಿಗೆ ಮುತ್ತಿಗೆ | ರಕ್ತ ಕ್ರಾಂತಿಯಾದರೂ ಹೋರಾಟ ನಿಲ್ಲಿಸುವುದಿಲ್ಲ | ಎಂಪಿ ರೇಣುಕಾಚಾರ್ಯ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up