SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 27, 2024
ಭದ್ರಾ ಹಿನ್ನೀರಿನಲ್ಲಿ ಆನೆಯ ಶವ ಪತ್ತೆ
ಭದ್ರಾ ಹಿನ್ನೀರಿನಲ್ಲಿ ಕಾಡಾನೆಯೊಂದರ ಅಸ್ತಿಪಂಜರ ಪತ್ತೆಯಾಗಿದೆ. ಮೀನು ಹಿಡಿಯುವವರು ಆನೆಗಳ ಮೂಳೆಗಳನ್ನು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರ ಅನ್ವಯ ಅಧಿಕಾರಿಗಳು ಭದ್ರಾ ಅಭಯಾರಣ್ಯದ ಹುಲಿ ಮೀಸಲು ವ್ಯಾಪ್ತಿಯ ಲಕ್ಕವಳ್ಳಿ ವಲಯದ, ಅಲ್ದಾರ ವಿಭಾಗದ ಬೈರಾಪುರ ಹಿನ್ನೀರಿನ ಪ್ರದೇಶದಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸಲಗದ ಅಸ್ತಿ ಪಂಜರ ಪತ್ತೆಯಾಗಿದ್ದು ಆನೆಯ ತಲೆಬುರುಡೆಯಲ್ಲಿ ಹಲವು ರಂದ್ರಗಳು ಕಾಣಿಸಿವೆ. ಹೀಗಾಗಿ ದಂತಕ್ಕಾಗಿ ಆನೆಯನ್ನ ಹತ್ಯೆ ಮಾಡಿರುವ ಶಂಕೆಯನ್ನ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
1999ನೇ ಸಾಲಿನ ಕೊಲೆ ಪ್ರಕರಣ ಶಿಕ್ಷಾರ್ಹ ಅಪರಾಧಿಯನ್ನ ಹಿಡಿದ ಶಿವಮೊಗ್ಗ ಪೊಲೀಸ್
1999ನೇ ಸಾಲಿನಲ್ಲಿ OTPS ನಲ್ಲಿ (Order to Produce) ಪ್ರಕರಣವೊಂದು ವರದಿಯಾಗಿತ್ತು. ಆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ A5 ನಾಪತ್ತೆಯಾಗಿದ್ದ. ಶಿಕ್ಷೆ ಪ್ರಕಟವಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ ಅಪರಾಧಿಯನ್ನ ಶಿವಮೊಗ್ಗ ಜಿಲ್ಲೆಯ ಹಳೆನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಪತ್ತೆ ಮಾಡಿದ್ದಾರೆ. ಇದೀಗ ಆತನನ್ನ ಕೋರ್ಟ್ಗೆ ಹಾಜರು ಪಡಿಸಿದ್ದಾರೆ.
ರೈಲ್ವೆ ಟ್ರ್ಯಾಕ್ ಬಳಿ ಕತ್ತಲಲ್ಲಿ ಏನೋ ಮಾಡುತ್ತಿದ್ದರು?

ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು ಅದರ ವಿವರ ಕುತೂಹಲ ಮೂಡಿಸಿದೆ. ಶಿವಮೊಗ್ಗ ಶೇಷಾದ್ರಿಪುರಂ ಫ್ಲೈಓವರ್ ಕೆಳಗೆ ಇಬ್ಬರು ಯುವಕರು ಮದ್ಯ ಸೇವಿಸಿ ಅಲ್ಲಿಂದ ಟ್ರ್ಯಾಕ್ ಬಳಿಗೆ ಮೂತ್ರ ವಿಸರ್ಜನೆಗೆ ಎಂದು ತೆರಳಿದ್ದರು. ಈ ವೇಳೆ ಕತ್ತಲಲ್ಲಿ ಇಬ್ಬರು ಯುವಕರು ಏನೋ ಮಾಡುತ್ತಿರುವುದು ಕಂಡು ಬಂದಿದೆ. ಅವರನ್ನ ನೋಡಿದ ತಕ್ಷಣವೇ ಯುವಕರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಅಚಾನಕ್ ಆಗಿ ಕತ್ತಲಲ್ಲಿದ್ದವರು ತಮ್ಮನ್ನ ಪ್ರಶ್ನಿಸಿದ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಇದೀಗ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.