SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 12, 2024 ragigudda ganapati
ಶಿವಮೊಗ್ಗ ನಗರದಲ್ಲಿಂದು ರಾಗಿಗುಡ್ಡದ 14 ಗಣಪತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ರಾಗಿಗುಡ್ಡದ ಮೂರನೇ ಕ್ರಾಸ್ನಿಂದ ಹಿಡಿದು ಸರ್ಕಲ್ನವರೆಗೂ ಒಟ್ಟು 14 ಗಣಪತಿಗಳ ಮೆರವಣಿಗೆ ಇವತ್ತು ನಡೆಯಲಿದೆ.
ರಾಗಿಗುಡ್ಡ ಗಣಪತಿ ragigudda ganapati
ರಾಗಿಗುಡ್ಡ ಕಳೆದ ವರ್ಷ ರಾಜ್ಯದೆಲ್ಲೆಡೆ ಸುದ್ದಿಯಾಗಿತ್ತು. ಇಲ್ಲಿ ನಡೆದ ಗಲಾಟೆ ವಿಚಾರ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇವತ್ತಿನ ಗಣಪತಿ ವಿಸರ್ಜನಾ ಮೆರವಣಿಗೆಗೆ ಸಾಕಷ್ಟು ಬಿಗಿ ಬಂದೋಬಸ್ತ್ ಮಾಡಲಾಗಿದೆ.
14 ಗಣಪತಿಗಳ ವಿಸರ್ಜನೆ
ರಾಗಿಗುಡ್ಡದ ಪ್ರಮುಖ ಗಣಪತಿಯಾದ ಮಾರಿಕಾಂಬಾ ಯುವಕರ ಗಣಪತಿ, ಸಾವರ್ಕರ್ ಯುವಕರ ಗಣಪತಿ, ಶಿವಾಜಿ ಯುವಕರ ಗಣಪತಿ, ಭಗತ್ ಸಿಂಗ್ ಯುವಕರ ಗಣಪತಿಯು ಸೇರಿದಂತೆ ಒಟ್ಟು 14 ಗಣಪತಿಗಳ ವಿಸರ್ಜನೆ ನಡೆಯಲಿದ್ದು, ಅದಕ್ಕೂ ಮೊದಲು ರಾಜಬೀದಿ ಉತ್ಸವ ನಡೆಯಲಿದೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಗಣಪತಿಗಳ ಮೆರವಣಿಗೆ ಆರಂಭವಾಗಲಿದ್ದು ತಡರಾತ್ರಿ ಎರಡು ಗಂಟೆಯ ಹೊತ್ತಿಗೆ ರಾಗಿಗುಡ್ಡದಲ್ಲಿಯೇ ಗಣಪತಿಗಳ ವಿಸರ್ಜನೆ ನಡೆಯಲಿದೆ.

ಪೊಲೀಸ್ ರೂಟ್ ಮಾರ್ಚ್
ಇನ್ನೂ ಮುನ್ನೆಚ್ಚರಿಕಾ ಕ್ರಮವಾಗಿ ರಾಗಿಗುಡ್ಡದ ಪ್ರಮುಖ ಎರಿಯಾಗಳಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಹಾಗೂ ಆರ್ಎಫ್ ಕಂಪನಿಯು ರೂಚ್ ಮಾರ್ಚ್ ನಡೆಸಿದೆ. ಅದರ ವಿವರ ಇಲ್ಲಿದೆ Shimoga ragigudda | ರಾಗಿಗುಡ್ಡದಲ್ಲಿ ಪೊಲೀಸ್ ರೂಟ್ ಮಾರ್ಚ್ | ಹೇಗಿದೆ ವಾತಾವರಣ
ಕೋಮು ಸೌಹಾರ್ಧತೆ
ಈ ನಡುವೆ ದಿನಾಂಕ: 10-09-2024 ರಂದು ಸಂಜೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಗಿಗುಡ್ಡದಲ್ಲಿ ರಾಗಿಗುಡ್ಡ ಶಾಂತಿ ಪಡೆ ಸಮಿತಿಯ ಸದಸ್ಯರು, ರಾಗಿಗುಡ್ಡದ ನಿವಾಸಿಗಳಾದ ಹಿಂದೂ ಮತ್ತು ಮುಸ್ಲಿಂ ಮುಖಂಡರುಗಳು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಗಳು ರಾಗಿಗುಡ್ಡದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾದ ವಿವಿಧ ಗಣೇಶ ಪೆಂಡಾಲ್ ಗಳಿಗೆ ಭೇಟಿ ನೀಡಿ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಸೌಹಾರ್ದತೆ ಮೆರದಿದ್ದಾರೆ.
ಈ ವೇಳೆ ಮಾತನಾಡಿದ ಸ್ಥಳೀಯ ಮುಖಂಡರುಗಳು ಯಾರೋ ಕೆಲವು ಜನ ಮಾಡಿದ ಕಿಡಿಗೇಡಿತನದಿಂದ ಮತ್ತು ಯಾವುದೋ ಸನ್ನಿವೇಶದಲ್ಲಿ ಕಳೆದ ಬಾರಿ ಕಹಿ ಘಟನೆಗಳು ಜರುಗಿರುತ್ತವೆ. ಆದರೆ ಅದೆಲ್ಲವನ್ನು ಮರೆತು ಯಾವುದೇ ವೈಮನಸ್ಸು ಮತ್ತು ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಂಡು ಒಟ್ಟಾಗಿ ಮುಂದೆ ಸಾಗೋಣ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಜರುಗದಂತೆ ನಾವೆಲ್ಲರೂ ಶ್ರಮಿಸೋಣ. ಸಹೋದರತ್ವದ ಮನೋಭಾವದೊಂದಿಗೆ ಎಲ್ಲಾ ಧರ್ಮದ ಹಬ್ಬಗಳಲ್ಲಿ ಒಟ್ಟಾಗಿ ಭಾಗವಹಿಸಿ ಎಲ್ಲರೂ ಸೇರಿ ಹಬ್ಬಗಳನ್ನು ಸೌಹಾರ್ದತೆಯಿಂದ ವಿಜೃಂಭಣೆಯಾಗಿ ಆಚರಿಸುವ ಮೂಲಕ ಹಿಂದಿನ ವರ್ಷ ಈ ಪ್ರದೇಶದಲ್ಲಿ ಜರುಗಿದ ಕಳಂಕವನ್ನು ತೊಳೆಯೋಣ ಮತ್ತು ನಮ್ಮ ಮುಂದಿನ ಪೀಳಿಗೆಗೆ, ಮಕ್ಕಳಿಗೆ ಮತ್ತು ನಮ್ಮ ಸಮಾಜದ ಇತರರಿಗೆ ಉತ್ತಮ ಸಂದೇಶವನ್ನು ಸಾರುವ ಮುಖಾಂತರ ಮಾದರಿಯಾಗೋಣ ಎಂದಿದ್ದಾರೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ