Sunday, 27 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAYDISTRICT

 Jp story ನಿರ್ಬಂಧಿತ ಅರಣ್ಯ ಪ್ರದೇಶಗಳನ್ನು ಅಧಿಕೃತ ಪ್ರವಾಸಿ ತಾಣಗಳನ್ನಾಗಿ ಮಾಡಬಾರದೇಕೆ? – ಜೆಪಿ ಬರೆಯುತ್ತಾರೆ

prathapa thirthahalli
Last updated: July 22, 2025 12:48 pm
Prathapa thirthahalli - content producer
Share
SHARE

Jp story ಶಿವಮೊಗ್ಗ: ಭೌಗೋಳಿಕವಾಗಿ ಅರಣ್ಯ ಮತ್ತು ಹಿನ್ನೀರಿನ ಪ್ರದೇಶಗಳನ್ನು ಒಳಗೊಂಡಿರುವ ಶಿವಮೊಗ್ಗ ಜಿಲ್ಲೆಯು, ಐದು ಅಭಯಾರಣ್ಯಗಳು ಮತ್ತು ಐದಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ವನಸಿರಿಯ ಬೀಡಾಗಿದೆ. ಭದ್ರಾ, ಶೆಟ್ಟಿಹಳ್ಳಿ, ಮೂಕಾಂಬಿಕಾ, ಸೋಮೇಶ್ವರ, ಶರಾವತಿ ಅಭಯಾರಣ್ಯಗಳು ಹಾಗೂ ಭದ್ರಾ ಟೈಗರ್ ರಿಸರ್ವ್ ಅರಣ್ಯ ಪ್ರದೇಶಗಳ ಒಡಲಲ್ಲಿ ನೂರಾರು ಸೌಂದರ್ಯವುಳ್ಳ ತಾಣಗಳಿವೆ. ಆದರೆ, ಈ ತಾಣಗಳಿಗೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ. ಈ ನಿರ್ಬಂಧದ ನಡುವೆಯೂ ಪ್ರವಾಸಿಗರು ಅಪಾಯಕಾರಿ ಸಾಹಸ ಮಾಡಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ, ಯಡೂರಿನ ಅಬ್ಬಿ ಫಾಲ್ಸ್‌ನಲ್ಲಿ ಜೀವ ಕಳೆದುಕೊಂಡ ಸೇಲಂ ಮೂಲದ ವ್ಯಕ್ತಿ.

Jp story ಹೇಳಿ ಕೇಳಿ ಈ ಪ್ರದೇಶ ನಿರ್ಬಂಧಿತವಾಗಿದ್ದರೂ, ತಮಿಳುನಾಡಿನಿಂದ ಬಂದ ಐವರು ಪ್ರವಾಸಿಗರು ಈ ಅಬ್ಬಿ ಜಲಪಾತಕ್ಕೆ ಹೋಗಿದ್ದಾರೆ ಎಂದರೆ ಆ ಜಲಪಾತದ ಆಕರ್ಷಣೆ ಎಷ್ಟಿರಬೇಡ! ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸೌಂದರ್ಯಭರಿತ ತಾಣಗಳನ್ನು ನೋಡಿ, ಆ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಆಗುಂಬೆ ಸುತ್ತಮುತ್ತಲ ಪ್ರದೇಶ, ಯಡೂರು ಮಾಣಿ, ಮಾಸ್ತಿಕಟ್ಟೆ, ಅಬ್ಬಿ ಫಾಲ್ಸ್, ನಗರ ಸುತ್ತಮುತ್ತಲ ಪ್ರದೇಶ, ಚಕ್ರ ಸಾವೆಹಕ್ಲು, ಜೋಗದ ಪರಿಸರ, ಶರಾವತಿ ಕಣಿವೆ ಪ್ರದೇಶದ ಒಡಲಲ್ಲಿ ನೂರಾರು ಇಂತಹ ಸಣ್ಣ ಜಲಪಾತಗಳು ಮತ್ತು ಹಿನ್ನೀರಿನ ಪ್ರದೇಶಗಳಿವೆ. ಈ ಸೌಂದರ್ಯದ ಪರಿಸರ ಎಂತಹವರನ್ನೂ ಆಕರ್ಷಿಸುತ್ತದೆ. ಈ ಪ್ರದೇಶಗಳನ್ನು ಅರಣ್ಯ ಇಲಾಖೆ ‘ನಿರ್ಬಂಧಿತ ಪ್ರದೇಶ’ ಎಂದು ಪರಿಗಣಿಸಿ, ‘ಅತಿಕ್ರಮ ಪ್ರವೇಶ ಕಾನೂನು ಬಾಹಿರ’ ಎಂದು ಫಲಕಗಳನ್ನು ಹಾಕಿದ್ದರೂ, ಇಲಾಖೆಯ ಕಣ್ಣು ತಪ್ಪಿಸಿ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Jp story ಚಿಕ್ಕಮಗಳೂರು, ಕೊಡಗು ಮಾದರಿ ಶಿವಮೊಗ್ಗದಲ್ಲಿ ಜಾರಿಯಾಗಬಾರದೇಕೆ?

ನೆರೆ ಜಿಲ್ಲೆಯಾದ ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆ ಅವಕಾಶವಿದೆ. ಜಲಪಾತಗಳಿಗೆ ಪ್ರವೇಶವಿದೆ. ಕೊಡಗು ಜಿಲ್ಲೆಯಲ್ಲೂ ಕೂಡ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಗಳ ಒಡಂಬಡಿಕೆಯಲ್ಲಿ ಅಪಾಯದ ಜಾಗಗಳು ಕೂಡ ಪ್ರವಾಸಿಗ ವೀಕ್ಷಣೆಗೆ ಮುಕ್ತವಾಗಿವೆ. ಅರಣ್ಯ ಇಲಾಖೆ ಪ್ರತಿ ಪ್ರವಾಸಿಗನಿಗೆ ನಿರ್ದಿಷ್ಟ ಶುಲ್ಕವನ್ನು ನಿಗದಿಪಡಿಸುತ್ತದೆ. ಆ ಪ್ರವಾಸಿಗರ ತಂಡಕ್ಕೆ ಸ್ಥಳೀಯ ನಿವಾಸಿಯೊಬ್ಬರನ್ನು ಗೈಡ್ ಆಗಿ ನೀಡಲಾಗುತ್ತದೆ. ಆ ಗೈಡ್ ಪ್ರವಾಸಿ ತಾಣವನ್ನು ತೋರಿಸಿ, ಪ್ರವಾಸಿಗರು ಎಲ್ಲಿ ಹೋಗಬೇಕು, ಎಲ್ಲಿ ಹೋಗಬಾರದು ಎಂಬಂತಹ ಅಪಾಯದ ಮುನ್ಸೂಚನೆಯನ್ನು ನೀಡುತ್ತಾನೆ. ನಂತರ ಸಂಜೆ ಕ್ಯಾಂಪ್‌ಗೆ ವಾಪಸ್ಸಾದಾಗ ಎಲ್ಲರೂ ಸುರಕ್ಷಿತವಾಗಿ ಹಿಂತಿರುಗಿದ ಬಗ್ಗೆ ಆತ ಹಿರಿಯ ಅಧಿಕಾರಿಗೆ ಮಾಹಿತಿ ನೀಡುತ್ತಾನೆ.

car decor
NES Head Office, Balaraja Urs Road, Shivamogga

Jp story ಸ್ಥಳೀಯ ಗ್ರಾಮ ಪಂಚಾಯಿತಿ ಆರ್ಥಿಕ ಚೇತರಿಕೆ

ಪ್ರವಾಸಿಗರಿಂದ ಪಡೆಯುವ ಶುಲ್ಕದಲ್ಲಿ ಶೇಕಡಾ 70ರಷ್ಟು ಸ್ಥಳೀಯ ಗ್ರಾಮ ಪಂಚಾಯಿತಿಗೆ ನೀಡಲಾಗುತ್ತದೆ. ಅರಣ್ಯದಲ್ಲಿ ಚಾರಣ ಎಂದರೆ ಶುಲ್ಕ ದುಬಾರಿಯಾಗಿಯೇ ಇರುತ್ತದೆ. ಪ್ರವಾಸಿಗರಿಂದ ಬಂದ ಹಣವು ಗ್ರಾಮ ಪಂಚಾಯಿತಿಗೂ ವಿನಿಯೋಗವಾಗುವುದರಿಂದ, ಗ್ರಾಮದ ರಸ್ತೆ, ಚರಂಡಿ, ಮನೆಗಳ ಕಾಯಕಲ್ಪಕ್ಕೆ ಅನುಕೂಲವಾಗುತ್ತದೆ. ಗ್ರಾಮ ಪಂಚಾಯಿತಿ ಕೂಡ ಆರ್ಥಿಕವಾಗಿ ಏಳಿಗೆಯಾಗುತ್ತದೆ. ಈ ಪ್ರವಾಸಿ ತಾಣಗಳಿಂದ ಸ್ಥಳೀಯವಾಗಿ ಪ್ರವಾಸಿಗರನ್ನು ನೆಚ್ಚಿಕೊಂಡು ಅಂಗಡಿ-ಹೋಟೆಲ್‌ಗಳು ಸಹ ಪ್ರಾರಂಭವಾಗುತ್ತವೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ.

ಅಪಾಯದ ಸ್ಥಳಗಳು ಎಂದು ನಿರ್ಬಂಧಿತ ಪ್ರದೇಶ ಮಾಡುವುದಕ್ಕಿಂತ ಮುಕ್ತ ಪ್ರವಾಸಕ್ಕೆ ಅವಕಾಶ ನೀಡುವುದರಿಂದ ಹಿಂದುಳಿದ ನಗರ, ಹೊಸನಗರ ಪ್ರದೇಶಗಳು ಆರ್ಥಿಕವಾಗಿ ಚೇತರಿಕೆ ಕಾಣುತ್ತವೆ. ನಗರ, ಹೊಸನಗರ, ಯಡೂರು, ಮಾಸ್ತಿಕಟ್ಟೆ ಅರಣ್ಯ ಪ್ರದೇಶಗಳು ಪ್ರವಾಸಕ್ಕೆ ಮುಕ್ತವಾಗಬೇಕೆಂಬ ಕೂಗು ಸ್ಥಳೀಯವಾಗಿ ದಶಕದಿಂದಲೂ ಕೇಳಿಬರುತ್ತಿದೆ. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಕೃಷಿ ಉತ್ಪತ್ತಿ ಕಡಿಮೆ. ಶರಾವತಿ ಹಿನ್ನೀರಿನಿಂದ ಆವರಿಸಿರುವ ಪ್ರದೇಶದಲ್ಲಿ ಯುವಕರಿಗೆ ಉದ್ಯೋಗ ಎಂಬುದು ಗಗನ ಕುಸುಮವಾಗಿದೆ. ಇಲ್ಲಿನ ಯುವಜನತೆ ಹೆಚ್ಚಾಗಿ ರಾಜಧಾನಿ ಬೆಂಗಳೂರಿಗೆ ಅವಲಂಬಿತರಾಗಿದ್ದಾರೆ.

ಇಲ್ಲಿನ ಪ್ರದೇಶಗಳನ್ನು ಪ್ರವಾಸಿತಾಣಗಳನ್ನಾಗಿ ಮಾಡದಿದ್ದರೂ, ಈ ನಿರ್ಬಂಧಿತ ಸ್ಥಳಗಳಲ್ಲಿ ಪ್ರವಾಸಿಗರು ಅಪಾಯಕಾರಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುವುದು ತಪ್ಪುವುದಿಲ್ಲ. ನಗರ, ಹೊಸನಗರ ಅರಣ್ಯ ವ್ಯಾಪ್ತಿಯ ಪ್ರದೇಶಗಳನ್ನು ಪ್ರವಾಸಿತಾಣವಾಗಿಸುವತ್ತ ರಾಜ್ಯ ಸರ್ಕಾರ ಮನಸ್ಸು ಮಾಡಲಿ.

 Jp story ಪ್ರವೇಶ ನಿರ್ಭಂದಿಸಿ ಬೀರ್ಡ್​ ಹಾಕಿದ ಅರಣ್ಯ ಇಲಾಖೆ
Jp story ಪ್ರವೇಶ ನಿರ್ಭಂದಿಸಿ ಬೀರ್ಡ್​ ಹಾಕಿದ ಅರಣ್ಯ ಇಲಾಖೆ
malenadutoday add
TAGGED:Abbi FallsJp storySHIVAMOGGA
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Kachinakatte ಬೆಂಕಿ ಕೊಟ್ಟ ಪರಿಣಾಮ ಸುಟ್ಟಿರುವ ಬೈಕ್​ Kachinakatte : ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
Next Article Dharmastala : ಕೆಪಿ ಶ್ರೀಪಾಲ್​ Dharmastala : ಧರ್ಮಸ್ಥಳ ಅಸಹಜ ಸಾವು ಪ್ರಕರಣ : ಎಸ್‌ಐಟಿ  ಶೀಘ್ರ ತನಿಖೆ ಆರಂಭಿಸಬೇಕು, ಕೆಪಿ ಶ್ರೀಪಾಲ್​
Leave a Comment

Leave a Reply Cancel reply

Your email address will not be published. Required fields are marked *

You Might Also Like

Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today
STATE NEWSSHIVAMOGGA NEWS TODAY

Today  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು?

By ajjimane ganesh

10 ಗಂಡಸರ ವಿರುದ್ದ ಕೇಸ್‌ ಕೊಟ್ಟ ಲೇಡಿ | ಎಚ್ಚರ ವಹಿಸಿ ಎಂದ ಹೈಕೋರ್ಟ್‌ | ಬಾರಲ್ಲಿ ಕೈ ಟಚ್‌ ಆಗಿದ್ದಕ್ಕೆ ಡಿಶುಂಡಿಶುಂ | ದೇಗಲ ಕಳ್ಳತನ, ಜೈಲ್‌ ವಾರ್ಡನ್‌ ಅರೆಸ್ಟ್

By 13

ಪತಿಯ ಶವವೆಂದು ಅಪರಿಚಿತ ಮೃತದೇಹಕ್ಕೆ ಹಾರ ಹಾಕಿದ ಪತ್ನಿಗೆ ಶಾಕ್‌ | ಗಂಡನಿಗೆ ಹೋಗಿತ್ತು ಕಾಲ್

By 13
free cancer treatment
SHIVAMOGGA NEWS TODAY

free cancer treatment :  ಎಂಐಒ ಆಸ್ಪತ್ರೆಯಿಂದ ಕ್ಯಾನ್ಸರ್​ ರೋಗಿಗಳಿಗೆ ಸಿಹಿಸುದ್ದಿ | ಯಾರೆಲ್ಲಾ ಉಚಿತ ಚಿಕಿತ್ಸೆ ಪಡೆಯಬಹುದು

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up