Wednesday, 20 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಬರನಾಡಾಗುತ್ತಿದೆಯಾ ಮಲೆನಾಡು ? ಯಾಕಿಷ್ಟು ತಾಪಮಾನ ಏರಿಕೆ?

131
Last updated: February 25, 2025 8:32 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ

ಫೆಬ್ರವರಿ ತಿಂಗಳ ಕೊನೆ ಹಂತಕ್ಕೆ ನಾವು ಸಮೀಪಿಸುತ್ತಿದ್ದೇವೆ ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ತಾಪಮಾನ ಇನ್ನೂ ಹೆಚ್ಚಿದೆ ಎನ್ನಬಹುದು. ದಿನೇ ದಿನೇ ಬಿಸಿಲಿನ ತಾಪಮಾನಕ್ಕೆ ಮಲ್ನಾಡಿನ ಜನ ಹೈರಣಾಗುತ್ತಿದ್ದಾರೆ. ಕಳೆದ ಬಾರಿ ಸಾಕಷ್ಟು ಮಳೆಯಾಗಿದ್ದರೂ ಕೂಡ ಈಗಾಗಲೇ ಮಲೆನಾಡಿನ ಹಳ್ಳ-ಕೊಳ್ಳಗಳು, ಕೆರೆಗಳು ಎಲ್ಲವೂ ಕೂಡ ಬತ್ತಿ ಹೋಗಿದ್ದು ಮಲೆನಾಡಿನ ರೈತರ ಸ್ಥಿತಿ ಈ ಬಾರಿ ಇನ್ನೂ ಚಿಂತಾಕ್ರಾಂತವಾಗಿದೆ. ಅತಿ ಹೆಚ್ಚಿನ ತಾಪಮಾನಕ್ಕೆ ಹೊಂದಿಕೊಳ್ಳುವ ಅಭ್ಯಾಸವಿಲ್ಲದೆ ಮಲೆನಾಡಿನ ರೈತರು ಸಮಸ್ಯೆಯನ್ನು ಅನುಭವಿಸುವಂತೆ ಆಗಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಾವು ಚಿಕ್ಕವರಿದ್ದಾಗ ನೋಡುತ್ತಿದ್ದ ದಟ್ಟ ಅರಣ್ಯಗಳು ಮಾಯವಾಗುತ್ತಿವೆ. ರೈತರ ದುರಾಸೆಗಳಿಗೆ ಅರಣ್ಯಗಳು ಬಲಿಯಾಗಿ ಅಡಿಕೆ ತೋಟಗಳಾಗಿ ಮಾರ್ಪಾಡಾಗುತ್ತಿದೆ. ಮಲೆನಾಡಿನ ದಟ್ಟ ಅರಣ್ಯಗಳು ಕುರುಚಲು ಅರಣ್ಯವಾಗಿ ಪರಿವರ್ತನೆಗೊಳ್ಳುತ್ತಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದೆ. 

ರೈತರಿಗೆ ಸಂಕಷ್ಟ:  ದಿನೇ ದಿನೇ ಅಂತರ್ಜಲ ಮಟ್ಟ ಕುಸಿತ ಕಾಣುತ್ತಿದ್ದು ರೈತರಿಗೆ ನುಂಗಲಾರದ ತುತ್ತಾಗಿದೆ. ಈಗಾಗಲೇ ಕೆರೆ,ಹಳ್ಳ, ಹೊಳೆಗಳು ಬತ್ತಿ ಹೋಗಿದ್ದು ಕೃಷಿ ಚಟುವಟಿಕೆಗಳಿಗೆ ಮತ್ತು ಅಡಿಕೆ ತೋಟಕ್ಕೆ ನೀರಿಲ್ಲದೆ ಒಣಗುವ ಪರಿಸ್ಥಿತಿ ಬಂದಿದೆ. ಮಲೆನಾಡಿನ ಪ್ರಮುಖ ಬೆಳೆಯಾದ ಅಡಿಕೆಗೆ ಎಲೆಚುಕ್ಕಿ ರೋಗ, ವಿಪರೀತ ಮಳೆಯಿಂದ ಬೆಳೆ ನಾಶ ಹೀಗೆ ಈಗಾಗಲೇ ಬಹಳಷ್ಟು ಸಂಕಷ್ಟದಲ್ಲಿರುವ ರೈತರಿಗೆ ನೀರಿಲ್ಲದ ಅಡಿಕೆ ತೋಟ ಒಣಗುತ್ತಿರುವುದು ಕೂಡ ಒಂದು ಅತ್ಯಂತ ಪ್ರಮುಖ ಸಮಸ್ಯೆಯಾಗಿದೆ. 

ಅಂತರ್ಜಲ ಮಟ್ಟ ಕುಸಿತ : ಮಲೆನಾಡು ದಿನದಿಂದ ದಿನಕ್ಕೆ ಬರನಾಡು ಆಗುತ್ತಿರುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ ಎನ್ನಬಹುದು. 200 ರಿಂದ 300 ಅಡಿಗೆ ಇದ್ದ ಅಂತರ್ಜಲ ಮಟ್ಟ ಇಂದು 600 ರಿಂದ 700 ಅಡಿ ಬೋರ್ವೆಲ್ ಕೊರಿಸಿದರೂ ಸಹ ನೀರು ಸಿಗದೇ ರೈತರು ಪರಿತಪಿಸುವಂತಾಗಿದೆ. ಹೀಗೆ ವಿಪರೀತ ಅರಣ್ಯ ನಾಶದಿಂದ ದಿನೇ ದಿನೇ ಮಲೆನಾಡಿನ ನೈಸರ್ಗಿಕ ಅಂಶಗಳು ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ

ಅರಣ್ಯ ನಾಶವೇ ಇದಕ್ಕೆಲ್ಲಾ ಕಾರಣ : ಮನುಷ್ಯ ತನ್ನ ದುರಾಸೆಗಾಗಿ ಮಲೆನಾಡಿನ ದಟ್ಟ ಅರಣ್ಯಗಳನ್ನು ಕಡಿದು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. ಇದರ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಇದು ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಪ್ರಮುಖ ದಾರಿ ಮಾಡಿಕೊಡುತ್ತದೆ. ಕಾಡಿನಲ್ಲಿರುವ ಅನೇಕ ಪ್ರಾಣಿಗಳು ಅತಿಯಾದ ಬಿಸಿಲಿನಿಂದ ಮತ್ತು ಬಿಸಿಲಿಗೆ ಒಗ್ಗಿಕೊಳ್ಳಲು ಆಗದೆ ಪ್ರಾಣ ಬಿಡುತ್ತವೆ. ಸ್ಥಳೀಯ ಸಸ್ಯ ವೈವಿಧ್ಯಗಳು ನಾಶವಾಗುತ್ತವೆ. ಮಣ್ಣಿನ ಸವಕಳಿ ಉಂಟಾಗಿ ಮಣ್ಣಿನ ಗುಣಮಟ್ಟ ಕುಸಿಯುತ್ತದೆ.

ಕಾಡ್ಗಿಚ್ಚಿನ ಪರಿಣಾಮ : ಮಲೆನಾಡಿನ ನೈಸರ್ಗಿಕ ಅರಣ್ಯಗಳು ಕಾಡ್ಗಿಚ್ಚಿಗೆ ಬಲಿಯಾಗುತ್ತಿರುದು ವಿಷಾದಕರ ಸಂಗತಿಯಾಗಿದ್ದು ಇದರಲ್ಲಿ ಶೇಕಡ 95 ಭಾಗ ಮಾನವ ಪ್ರೇರಿತ ಬೆಂಕಿ ಅನಾಹುತಕ್ಕೆ ತುತ್ತಾಗುತ್ತಿವೆ. ಇದು ಮಲೆನಾಡಿನ ಮೇಲೆ ಅತ್ಯಂತ ಭೀಕರ ಪರಿಣಾಮವನ್ನು ಬೀರುವ ಇನ್ನೊಂದು ಪ್ರಮುಖ ಅಂಶ. ಕಾಡಿನಲ್ಲಿರುವ ಹಕ್ಕಿಗಳ ಗೂಡು, ಮೊಟ್ಟೆ, ಮರಿಗಳು ವಿಪರೀತ ಶಾಖದಿಂದ ಸತ್ತು ಹೋಗುತ್ತವೆ ಅಲ್ಲಿ ವಾಸಿಸುವ ಸಣ್ಣ ಸಣ್ಣ ಪ್ರಾಣಿಗಳು ಕಾಡ್ಗಿಚ್ಚಿನ ಶಾಖ ಸಹಿಸಲಾಗದೆ ನಾಶವಾಗುತ್ತವೆ. ಅದಲ್ಲದೆ ಸ್ಥಳೀಯ ಸಸ್ಯ ಪ್ರಭೇದಗಳು ಹಾಗೂ ಕಾಡಿನಲ್ಲಿರುವ ಶುದ್ಧ ನೀರು ಕೂಡ ಕಾಡ್ಗಿಚ್ಚಿನ ಪರಿಣಾಮವಾಗಿ ವಿಷಕಾರಿಯಾಗಿ ಪರಿವರ್ತಿತವಾಗಿ ಕಾಡುಪ್ರಾಣಿಗಳಿಗೆ ಸರಿಯಾದ ಸಮಯಕ್ಕೆ ಕುಡಿಯಲು ನೀರು ಸಿಗದೇ ಅವುಗಳ ಸಾವಿಗೆ ಕಾರಣವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಿಪರೀತ ಅರಣ್ಯ ನಾಶದಿಂದ ಕಾಡು ಪ್ರಾಣಿಗಳು ತಮ್ಮ ಅವಾಸ ಸ್ಥಾನವನ್ನು ಬದಲಿಸಲು ಹಳ್ಳಿಗಳತ್ತ ಮುಖ ಮಾಡುತ್ತವೆ ಇದರಿಂದ ರೈತರ ಬೆಳೆಗಳಿಗೆ ಅಪಾರವಾದ ಹಾನಿಯನ್ನು ಉಂಟು ಮಾಡುತ್ತದೆ ಮತ್ತು ಮಾನವ ಹಾಗೂ ಅರಣ್ಯ ಪ್ರಾಣಿಗಳ ಸಂಘರ್ಷಕ್ಕೆ ಇದು ಕಾರಣವಾಗುತ್ತದೆ.

ಮಲೆನಾಡಿಗರಲ್ಲಿ ಆರೋಗ್ಯ ಸಮಸ್ಯೆಗಳು: ಮಲೆನಾಡಿನ ಜನರಿಗೆ ಯಾವಾಗಲೂ ಸೂಕ್ತ ತಾಪಮಾನಕ್ಕೆ ಹೊಂದಿಕೊಂಡು ಅಭ್ಯಾಸವಿಲ್ಲದೇ ಇರುವುದರಿಂದ ಸತತವಾದ ಈ ವಿಪರೀತ ತಾಪಮಾನಕ್ಕೆ ಒಗ್ಗಿಕೊಳ್ಳುವುದು ಇಲ್ಲಿನ ಜನರಿಗೆ ಸಾಧ್ಯವಾಗದೇ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಿನ ಜನರವರೆಗೂ ಆರೋಗ್ಯ ಸಮಸ್ಯೆಗಳು ಬೆನ್ನು ಬಿಡದೆ ಕಾಡುತ್ತಿವೆ. ಅತಿಯಾದ ಬಿಸಿಲಿಗೆ ಬೆನ್ನು ಕೊಡಲು ಇಲ್ಲಿನ ಜನ ಹೆದರುತ್ತಿದ್ದು ಇದು ಕೃಷಿ ಚಟುವಟಿಕೆಗಳ ಕುಂಠಿತಕ್ಕೆ ಕಾರಣವಾಗುತ್ತಿದೆ. ಯಾವಾಗಲೂ ಕೂಡ ಸಂಕಷ್ಟದ ಗೂಡು ಎಂಬಂತಿರುವ ಮಲೆನಾಡಿನ ರೈತನ ಜೀವನ ಅತಿಯಾದ ತಾಪಮಾನದಿಂದ ಇನ್ನೂ ಸಂಕಷ್ಟಕ್ಕೀಡಾಗುವಂತೆ ಮಾಡಿದೆ.

ವರದಿ : ವಿಕಾಸ್‌ ಕ್ಯಾಸನೂರು

SUMMARY | The people of Malnad are getting tired of the heat day by day.

KEYWORDS | Malnad,  heat, summer session,

m srikanth
Share This Article
Facebook Whatsapp Whatsapp Telegram Threads Copy Link
Previous Article ಮಾನವ ಹಕ್ಕು ಹಾಗೂ ಸಂವಿಧಾನ ಹಕ್ಕುಗಳ ಜಾಗೃತಿ ಕಾರ್ಯಕ್ರಮ | ಉದ್ದೇಶವೇನು
Next Article ಅಂಬ್ಲಿಗೋಳ ಗಂಡು ಹುಲಿ ಸಾವಿನ ಪ್ರಕರಣ ಎನ್.ಟಿ.ಸಿ.ಎ ನಿಯಮಾವಳಿ ಪ್ರಕಾರ  ತನಿಖೆ ನಡೆದಿದೆಯಾ ? ಸ್ಪಷ್ಟನೆ ನೀಡುವರೆ ಚೀಫ್ ವೈಲ್ಡ್ ಲೈಫ್ ಪಿಸಿಸಿಎಫ್ ?  Exclusive ಜೆಪಿ ಬರೆಯುತ್ತಾರೆ.
Leave a Comment

Leave a Reply Cancel reply

Your email address will not be published. Required fields are marked *

You Might Also Like

Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today
SHIVAMOGGA NEWS TODAYSTATE NEWS

ontikoppal panchanga / ಜೂನ್ 19, 2025 / ಈ ದಿನದ ವಿಶೇಷ ಏನು ಗೊತ್ತಾ?

By Malenadu Today
STATE NEWS

ದಿನ ಭವಿಷ್ಯ ಹೇಗಿರಲಿದೆ!? ಇವತ್ತಿನ ರಾಶಿಫಲ

By 13

KPSC ಪರೀಕ್ಷೆ ಮುಂದೂಡಿಕೆ | ಈಡಿಗ ವಧು–ವರರ ಸಮಾವೇಶ | ಶಿವಮೂರ್ತಿ ಶರಣರ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌

By 13
STATE NEWS

ಬಿಗ್ ಬಾಸ್ 11 ರ ಕಿರೀಟ ವೈಲ್ಡ್ ಕಾರ್ಡ್ ಸ್ಪರ್ಧಿ ಮುಡಿಗೆ | ಗೆಲ್ಲಲು ಕಾರಣವಾದ ಪ್ರಮುಖ ಅಂಶಗಳೇನು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up