SHIVAMOGGA | MALENADUTODAY NEWS | Apr 24, 2024
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿರುವ ಕೆಎಸ್ ಈಶ್ವರಪ್ಪ ಜೆಡಿಎಸ್, ಕಾಂಗ್ರೆಸ್ ನಾಯಕರು ಕೂಡ ನನ್ನನ್ನ ಗೆಲ್ಲಿಸೋಕೆ ಪ್ರಚಾರ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಯಾವುದೇ ಶಾಕಿಂಗ್ ನ್ಯೂಸ್ ಇದುವರೆಗೂ ಬಂದಿಲ್ಲ ಎಂದಿದ್ದಾರೆ. ಅಲ್ಲದೆ ಈ ಸಲ100 ಕ್ಕೆ 100 ರಷ್ಟು ನಾನು ಗೆಲ್ತೇನೆ ಎಂದಿದ್ದಾರೆ.
ಅಲ್ಲದೆ ಮತ್ತೊಮ್ಮೆ ಗೀತಾ ಶಿವರಾಜ್ ಕುಮಾರ್ ರವರನ್ನು ಡಮ್ಮಿ ಕ್ಯಾಂಡಿಡೇಟ್ ಎಂದ ಕೆಎಸ್ ಈಶ್ವರಪ್ಪರವರು ಅವರು ನನ್ನ ಸಹೋದರಿ, ಅವರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡೋಲ್ಲ. ಆದರೆ ಡಮ್ಮಿ ಕ್ಯಾಂಡಿಡೇಟ್ ಹಾಕಿದ್ದಾರೆ, ಇದರಿಂದ ನಾನು ಗೆಲ್ಲುತ್ತೇನೆ ಗೀತಾರ ಜೊತೆ ಹೊಗದಿರುವವರು, ರಾಘಜೊತೆ ಹೊಂದರಿರುವವರು ನಮ್ಮ ತಾಯಾಣೆ ನಿಮ್ಗೆ ಬೆಂಬಲ ಕೊಡ್ತೀನಿ ಅಂತಾ ಹೇಳ್ತಾ ಇದ್ದಾರೆ ಅತಿ ಹೆಚ್ಚು ಜನ ಓಟ್ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com ![]() |
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com |