SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 31, 2024
ಹೌದು ಹೀಗೊಂದು ಕುತೂಹಲ ಓದುಗರಿಗಿದ್ದರೆ, ಆತಂಕ ರೌಡಿಗಳಿಗೆ ಇದ್ದೇ ಇರುತ್ತೆ. ಹೊಸ ವರ್ಷದ ಹಿಂದೆ ಮುಂದೆ ರೌಡಿ ಜಗತ್ತು ತುಂಬಾನೆ ಅಲರ್ಟ್ ಆಗಿರುತ್ತೆ. ಎದುರಾಳಿಗಳ ಕಥೆ ಮುಗಿಸಲು ತೆರೆಮರೆಯಲ್ಲಿ ಸಂಚು ರೂಪಿತವಾಗೋದೆ ವರ್ಷದ ಹಿಂದೆ ಮುಂದೆ. ಹೊಸ ವರ್ಷದ ಹಿಂದಿನ ವಾರ ಇಲ್ಲವೇ ಆರಂಭದಲ್ಲಿ ಹಿಂದೆಲ್ಲಾ ರೌಡಿಗಳು ಕೊಂಚ ಯಾಮಾರಿ ಕೊಲೆಯಾಗಿದ್ದಾರೆ.
ಇದರ ಆತಂಕ ಶಿಷ್ಯ ವರ್ಗವನ್ನು ಕಾಡುತ್ತಿದೆ. ದ್ವೇಷ ಪ್ರತಿಕಾರ ತೀರಿಸಿಕೊಳ್ಳಲು ಹೊಂಚುಹಾಕುವ ರೌಡಿಗಳು ಹೊಸವರ್ಷವನ್ನೇ ಮಹೂರ್ತವನ್ನಾಗಿ ಇಟ್ಟುಕೊಂಡಿರುತ್ತಾರೆ. ಶಿವಮೊಗ್ಗ ನಗರದಲ್ಲಿ ಹೊಸ ವರ್ಷದ ಹಿಂದಿನ ದಿನ ಕೊಲೆಗಳು ನಡೆದಿರುವುದು ಇದಕ್ಕೆ ಉದಾಹರಣೆಯಾಗಿದೆ. ಹೊಸ ವರ್ಷಕ್ಕೆ ಇನ್ನು ವಾರ ಬಾಕಿ ಇದೆ ಎನ್ನುವಾಗಲೇ ಪರಸ್ಪರ ದ್ವೇಷ ಕಾರುವ ಮನಸ್ಸುಗಳು ಯಾವ ಹೆಜ್ಜೆಯನ್ನು ಮುಂದಿಡುವುದಿಲ್ಲ. ಯಾವ ಕಾರ್ಯಕ್ಕೂ ಕೈ ಹಾಕೋದಿಲ್ಲ. ಸಹಚರರೊಂದಿಗೆ ವಾರಗಟ್ಟಲೇ ಊರಿನಿಂದ ಕಾಲ್ಕೀಳುತ್ತಾರೆ. ಇನ್ನು ಕೆಲವರು ಭೂಗತರಾಗಿಬಿಡ್ತಾರೆ.

ಸಧ್ಯ ಶಿವಮೊಗ್ಗದಲ್ಲಿ ದ್ವೇಷ ಪ್ರತಿಕಾರಕ್ಕೆ ಒಂದು ಬಲಿಯಂತೂ ಗ್ಯಾರಂಟಿ ಎಂಬ ಮಾತು ಪಾತಕ ಲೋಕದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಅದು ಯಾರು ಯಾವಾಗ ಎಂಬುದು ಗೊತ್ತಿಲ್ಲ. ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ತಮ್ಮದೇ ಹಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೊಸ ವರ್ಷದಲ್ಲಿ ಶಿವಮೊಗ್ಗದಲ್ಲಿ ಯಾವ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಜನತೆ ಬಯಸಿದ್ದಾರೆ.
SUMMARY | Yes, if there is such a curiosity among the readers, the rowdies will be worried. The rowdy world will be on high alert before the new year
KEYWORDS | rowdies, new year, crime news, kannada news,