SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 24, 2024 siddaramaiah news
ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ 100 ಫೀಟ್ ರೋಡ್ನಲ್ಲಿರುವ ರೇಣುಕಾಂಬಾ ಸಾಮಿಲ್ನಲ್ಲಿ ಯುವಕನೊಬ್ಬ ಶವ ಕ್ರೇನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಳೆದ 22 ನೇ ತಾರೀಖು ಸಂಜೆ ಈ ವಿಷಯ ಬೆಳಕಿಗೆ ಬಂದಿದ್ದು ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರು ಅನುಮಾನಸ್ಪದ ಪ್ರಕರಣ ದಾಖಲಿಸಿದ್ದಾರೆ. ಮಂಜುನಾಥ್ ಎಂಬಾತ ಮೃತ ವ್ಯಕ್ತಿ.
ಈತನ ಮೃತದೇಹದ ಕ್ರೇನಿಗೆ ನೇಣು ಬಿಗಿದ ಸ್ಥಿತಿಯಲಿ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನ ಕೆಳಕ್ಕೆ ಇಳಿಸಿ ಮರಣೋತ್ತರ ಪರೀಕ್ಷೆ ಮುಗಿಸಿದ್ದಾರೆ.

ಇನ್ನೂ ಘಟನೆ ವಿಚಾರವಾಗಿ ಮಂಜುನಾಥ್ರ ತಂದೆ ದೂರು ನೀಡಿದ್ದು, ನನ್ನ ಮಗನಿಗೆ ಸಾಲದ ವಿಚಾರದಲ್ಲಿ ಕೆಲವರಿಂದ ಜೀವ ಬೆದರಿಕೆ ಇತ್ತು, ನನ್ನ ಮಗನ ಸಾವಿನ ಸ್ಥಿತಿಯನ್ನು ನೋಡಿದರೆ ಯಾರೋ ಬಂದು ಕೊಲೆ ಮಾಡಿ ನೇತು ಹಾಕಿರುವ ಬಗ್ಗೆ ನಮಗೆ ಅನುಮಾನವಿರುತ್ತದೆ, ಆದ್ದರಿಂದ ಈ ಸಾವಿನ ಬಗ್ಗೆ ಕಾನೂನು ಕ್ರಮ ಕೈಗೊಂಡು ಸೂಕ್ತ ತನಿಖೆ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.