SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 27, 2024 ಶಿವಮೊಗ್ಗಕ್ಕೆ ನಿನ್ನೆ ದಿನ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಆಗಮಿಸಿದ್ದರು. ರೈಲ್ವೆ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆಯನ್ನು ಸಹ ನಡೆಸಿದರು. ಈ ವೇಳೆ ಶಿವಮೊಗ್ಗಕ್ಕೆ ಸಂಬಂಧಿಸಿದ ಕೆಲವೊಂದು ಹೊಸ ಯೋಜನೆಗಳನ್ನ ಅವರು ತಿಳಿಸಿದ್ದಾರೆ.
ಕೇಂದ್ರ ಸಚಿವರು ವಿವರಿಸಿದ ಹೊಸ ಯೋಜನೆಗಳನ್ನ ನೋಡುವುದಾದರೆ, ಅದರ ವಿವರ ಹೀಗಿದೆ.

ಭದ್ರಾವತಿ ರೈಲು ನಿಲ್ದಾಣವನ್ನು ಅಮೃತ್ ಭಾರತ್ ಯೋಜನೆಗೆ ಸೇರಿಸಲು ಕ್ರಮ
ಶಿವಮೊಗ್ಗ ತಾಲೂಕು ಹಾರನಹಳ್ಳಿ ರೈಲು ನಿಲ್ದಾಣ ಅಭಿವೃದ್ಧಿಗೆ 1.8 ಕೋಟಿ ರೂ ಬಿಡುಗಡೆ
ಶಿವಮೊಗ್ಗ ನಗರದಲ್ಲಿ ರೈಲ್ವೆ ಮೇಲು ಸೇತುವೆಗಳ ಕೆಳಗೆ ಮೂಲ ಸೌಲಭ್ಯಗಳ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆಗೆ 2 ಕೋಟಿ ರೂಪಾಯಿ ಬಿಡುಗಡೆ
ಶಿವಮೊಗ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮತ್ತೊಂದು ಮೇಲ್ಸೇತುವೆಗೆ ಬೇಡಿಕೆ ಸಲ್ಲಿಸಿದ್ದು ಅನುಮತಿಗೆ ಕ್ರಮ
ಬೀರೂರು- ಶಿವಮೊಗ್ಗ ಜೋಡಿ ಮಾರ್ಗ ನಿರ್ಮಾಣಕ್ಕೆ ಸರ್ವೆ ಮತ್ತು ಫೀಸಿಬಲಿಟಿ ಸರ್ವೆ ಸಹ ಆಗಿದೆ. ಆದ್ಯತೆ ಮೇಲೆ ಕಾಮಗಾರಿಗೆ ಕ್ರಮ
ನೂತನ ರೈಲು ಮಾರ್ಗಕ್ಕೆ ಭೂಮಿ ತ್ಯಾಗ ಮಾಡಿದ ರೈತರಿಗೆ ನ್ಯಾಯಯುತ ಪರಿಹಾರ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ
ಎಕ್ಸ್ಪ್ರೆಸ್ ರೈಲುಗಳ ವೇಗವನ್ನು 110 ಕಿ.ಮೀ.ನಿಂದ 135 ಕಿ.ಮೀ.ಗೆ ಹೆಚ್ಚಿಸಲು ಕ್ರಮ