SHIVAMOGGA | MALENADUTODAY NEWS | ಮಲೆನಾಡು ಟುಡೆ Oct 22, 2024
ಮೈಸೂರು ಬಂಡಿಫುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಹಿಡಿದ ಹುಲಿಯನ್ನು ಭದ್ರಾ ಅಭಯಾರಣ್ಯದ ಮುತ್ತೋಡಿ ಫಾರೆಸ್ಟ್ಗೆ ಬಿಟ್ಟಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಹುಲಿಯನ್ನು ಮುತ್ತೋಡಿ ಅಭಯಾರಣ್ಯಕ್ಕೆ ಬಿಡಲಾಗಿದೆ. ಇದಕ್ಕೂ ಮೊದಲು ಸ್ಥಳೀಯರಿಗೆ ಅಥವಾ ಜನಪ್ರತಿನಿಧಿಗಳಿಗೂ ಮಾಹಿತಿ ನೀಡಿಲ್ಲ ಎಂದು ಇಲ್ಲಿನ ಕಾಫಿ ಬೆಳೆಗಾರರು ಆರೋಪಿಸಿದ್ದಾರೆ.
ಮೇಲಿನ ಹುಲುವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿಯನ್ನು ಬಿಡಲಾಗಿದೆ, ಹೀಗಾಗಿ ಹುಲಿ ಈ ಭಾಗದಲ್ಲಿ ಜನರಿಗೆ ತೊಂದರೆ ಕೊಡುವ ಅಪಾಯ ಒಂದು ಕಡೆ. ಇನ್ನೊಂದೆಡೆ ವರ್ಗಾವಣೆಗೊಂಡಿರುವ ಹುಲಿ ಈಗಾಗಲೇ ಜನರ ಜೊತೆಗೆ ಸಂಘರ್ಷ ಹೊಂದಿದೆ. ಹಾಗಾಗಿ ಅದು ದಾಳಿ ಮಾಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂಬುದು ಸ್ಥಳೀಯರ ವಾದ
ಎಲ್ಲಿಂದಲೋ ತಂದು ಇಲ್ಲಿ ಹುಲಿ ಬಿಡಲು ಅವಕಾಶ ನೀಡಿದವರು ಯಾರು? ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.

SUMMARY | Mysuru tiger captured in Bandipur Sanctuary limits has been released to Muttodi Forest in Bhadra Sanctuary, triggering outrage in Chikkamagaluru district.
KEYWORDS | Mysuru tiger, Bandipur Sanctuary limits , Muttodi Forest in Bhadra Sanctuary, Chikkamagaluru district,