SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 12, 2024 shimoga mla reaction
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 25-28 ಸಾವಿರ ಮತದಾರರನ್ನು ಹೊಂದಿರುವ ಉಪ್ಪಾರ ಜನಾಂಗದ ಆರ್ಥಿಕ ಸಬಲೀಕರಣಕ್ಕಾಗಿ ಜಿಲ್ಲಾಮಟ್ಟದಲ್ಲಿ ಶ್ರೀ ಭಗೀರಥ ಸಹಕಾರ ಸಂಘ, ನಿ, ಶಿವಮೊಗ್ಗ ಆರಂಭವಾಗುತ್ತಿದೆ. ಇದರ ಉದ್ಘಾಟನಾ ಸಮಾರಂಭ ಇದೆ ಸೆಪ್ಟೆಂಬರ್ 14 ರ ಬೆಳಿಗ್ಗೆ 10 ಗಂಟೆಗೆ ನಗರದ ಕುವೆಂಪು ರಂಗ ಮಂದಿರದಲ್ಲಿ ನಡೆಯಲಿದೆ
ಈ ಬಗ್ಗೆ ಶಿವಮೊಗ್ಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಹಕಾರಿ ಸಂಘದ ಅಧ್ಯಕ್ಷ ಎನ್. ಮಂಜುನಾಥ್ 715 ಸದಸ್ಯತ್ವ ಹಾಗೂ 15ಲಕ್ಷ ಮುಂಗಡ ಹಣ ಸಂಗ್ರಹಿಸಲಾಗಿದೆ. 1250 ರೂಪಾಯಿ. ಷೇರು ಶುಲ್ಕವಿದೆ. ಮುಂದಿನ 2 ವರ್ಷದಲ್ಲಿ 5 ಸಾವಿರ ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಶ್ರೀ ಭಗೀರಥ ಸಹಕಾರ ಸಂಘ
ಸಹಕಾರಿ ಸಂಘದಿಂಧ ವಾಹನ ಹಾಗೂ ಜಾಮೀನು ಸಾಲವನ್ನು ನೀಡಲಾಗುವುದು ಎಂದ ಅವರು, ಸಮಾಜದ ಕುಲಗುರುಗಳಾದ ಪುರುಷೋತ್ತಮಾನಂದ ಪುರಿ ಸ್ವಾಮಿಗಳ ಸಾನಿದ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸಹಕಾರಿ ಸಂಘವನ್ನು ಉದ್ಘಾಟಿಸಲಿದ್ಧಾರೆ ಎಂದು ಮಾಹಿತಿ ನೀಡಿದ ಎನ್ ಮಂಜುನಾಥ್ ಕಾರ್ಯಕ್ರಮದಲ್ಲಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು ಮತ್ತು ಎಂಐಡಿಬಿ ಆರ್.ಎಂ. ಮಂಜುನಾಥ ಗೌಡ ಸಂಘದ ಸದಸ್ಯರುಗಳಿಗೆ ಷೇರುಪತ್ರ ವಿತರಿಸಲಿದ್ದಾರೆ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದ್ದಾರೆ. ಮದುವೆ ಆಗಿ 50 ವರ್ಷ ಪೂರೈಸಿರುವ 22 ಸಮಾಜದ ದಂಪತಿಗಳನ್ನು, ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹೆಚ್.ಬಲ್ಲಪ್ಪನವರು ಸನ್ಮಾನಿಸಲ್ಲಿದ್ದಾರೆ ಸಮಾರಂಭದ ಕಾರ್ಯಕ್ರಮದ ಮಾಹಿತಿಯನ್ನ ನೀಡಿದರು.

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ