Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಬೊಮ್ಮನಕಟ್ಟೆಯಲ್ಲಿ ಶೆಟ್ಟಿ ಕೊಲೆ! ರಾಜಿ ಮಾಡ್ಕೊಂಡವರು ಕೊಚ್ಚಿ ಕೊಂದರೆ? ಈ ನಗರದಲ್ಲಿ ಏನಾಗುತ್ತಿದೆ?

13
Last updated: December 1, 2024 8:05 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024 ‌ 

ಶಿವಮೊಗ್ಗದ ಹಳೆ ಬೊಮ್ಮನಕಟ್ಟೆಯ ಬಳಿ ನಿನ್ನೆ ಮಧ್ಯಾಹ್ನ ರೌಡಿಶೀಟರ್‌ ಕಪಡಾ ರಾಜೇಶ್‌ ಶೆಟ್ಟಿಯನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆ ನಡೆದಿರೋದು ಹಳೆಯ ದ್ವೇಷಕ್ಕೆ ಎಂಬುದು ಬಹುತೇಕ ಸ್ಪಷ್ಟವಾಗಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

rajesh shetty

 

ಕರಿಯಾ, ಡಿಂಗಾ, ನೆಪಾಳಿ, ಚಿಟ್ಟೆ, ನಿದ್ದೆ, ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುದು ರೌಡಿಜಗತ್ತಿನಲ್ಲಿ ಕೇಳಿ ಬರುತ್ತಿರುವ ಮಾತು. ಇನ್ನೊಂದೆಡೆ ಆ ನಿಟ್ಟಿನಲ್ಲಿ ಇಡೀ ಪ್ರಕರಣದಲ್ಲಿ ಮತ್ತಾರದ್ದಾದರೂ ಕೈವಾಡ ಇದೆಯೆ? ಎಂಬ ಶಂಕೆಯಲ್ಲಿರುವ ಪೊಲೀಸ್‌ ಇಲಾಖೆ ಇತ್ತೀಚಿನ ಬೆಳವಣಿಗೆಗಳನ್ನ ಕೂಲಂಕುಶವಾಗಿ ಪರಿಶೀಲಿಸ್ತಿದ್ದಾರೆ. ಮೂರು ತಂಡಗಳಾಗಿ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಅಂದಹಾಗೆ, ಯಾವೆಗೆಲ್ಲಾ ಶಿವಮೊಗ್ಗ ಪೊಲೀಸ್‌ ಇಲಾಖೆ ಗಮನ ಕಡಿಮೆಯಾಗಿದೆಯೋ, ಆಗೆಲ್ಲವೂ ಸಿಟಿಯಲ್ಲಿ ರೌಡಿ ಜಗತ್ತು ಮಚ್ಚಿನ ಮೂಲಕ ಸದ್ದು ಮಾಡಿದೆ. ಇದೀಗ ರಾಜೇಶ್‌ ಶೆಟ್ಟಿಯ ಕೊಲೆ ಸಹ ಇದಕ್ಕೆ ಪ್ರಸ್ತುತ ಸಾಕ್ಷಿ. 

rajesh shetty

ವಿಚಿತ್ರ ಅಂದರೆ, ಬಹುತೇಕ ರಾಜಿಯಾಗಿದ್ದ ವಿಚಾರ, ಸೇಡಿನ ಪ್ರತಿಕಾರದ ಕೊಲೆಯಾಗಿ ಮಾರ್ಪಾಡಾಗಿದ್ದು ಹೇಗೆ? ಇದೆ ಶೆಟ್ಟಿಕೊಲೆಯಲ್ಲಿ ಗಟ್ಟಿಗೊಳ್ಳುತ್ತಿರುವ ಪ್ರಶ್ನೆ.  ಶೆಟ್ಟಿ ಕೊಲೆಯ ಸೇಡು ಆರಂಭವಾಗಿದ್ದು ಬಿಜೆಪಿಯ ಮುಖಂಡರೊಬ್ಬರ ಸಾವಿನ ಘಟನೆಯಿಂದ. ಅನಾರೋಗ್ಯದಿಂದ ತೀರಿಕೊಂಡಿದ್ದ ಅವರ ಅಂತಿಮದರ್ಶನದ ವೇಳೆ ಶೆಟ್ಟಿ ಹಾಗೂ ಕರಿಯ ವಿನಯ್‌ ನಡುವೆ ಜಗಳವಾಗಿ ಹೊಡೆದಾಟವಾಗಿತ್ತು. ಅವತ್ತಿನ ಹೊಡೆದಾಟಕ್ಕೆ ಕಾರಣ ಸ್ಪಷ್ಟವಿಲ್ಲ. ಆದರೆ ಅದೇ ದಿನ ರಾತ್ರಿ ಶೆಟ್ಟಿ ಲಾಂಗ್‌ ಹಿಡಿದು ಬಂದು ಕರಿಯನ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆಯಲ್ಲಿ ಕರಿಯ ವಿನಯ್‌ ಹಾಗೂ ಇನ್ನೊಬ್ಬ ಗಾಯಗೊಂಡಿದ್ದ. ಇಬ್ಬರು ಮೆಗ್ಗಾನ್‌ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ರು. ಪ್ರಕರಣ ಕಂಪ್ಲೆಂಟ್‌ ಆಗಿ, ಶೆಟ್ಟಿ ನಿರೀಕ್ಷಿಣಾ ಜಾಮೀನು ಪಡೆದು ಓಡಾಡ್ಕೊಂಡಿದ್ದ. 

rajesh shetty

 

ಇದರ ನಡುವೆ, ಶೆಟ್ಟಿ ಹಾಗೂ ಕರಿಯನ ನಡುವಿನ ಗಲಾಟೆ ಕುರಿತಾಗಿ ರಾಜಿ ಮಾತುಕತೆ ನಡೆದಿತ್ತು. ಹೆಂಡತಿ ಮಕ್ಕಳು ಸಂಸಾರದ ಅಂತಾ ಮಾಡಿಕೊಂಡ ಮೇಲೆ ತೆಪ್ಪಗೆ ಇರಬೇಕು ಎಂದುಕೊಂಡು, ಎರಡು ಕಡೆಯವರು ರಾಜಿ ಮಾತಾಡಿ ಕೈ ಮಿಲಾಯಿಸಿದ್ದರು. ಆದರೆ ಆನಂತರ ಏನಾಯ್ತು? ಹು ಅಂತಾ ಪರಸ್ಪರ ಕೈ ಮಿಲಾಯಿಸಿದವರು, ಸುಳಿವೆ ಕೊಡದೆ ಶೆಟ್ಟಿಯನ್ನ ಏಕೆ ಹೊಡೆದರು. ಇದರ ಹಿಂದೆ ಕುಮ್ಮಕ್ಕಿತ್ತಾ? ಹಾಗಿದ್ದರೆ ಆ ಕಾಣದ ಕೈ ಯಾರದ್ದು? ಸದ್ಯ ಇದೇ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಶೆಟ್ಟಿಗೆ ರೀಲ್ಸ್‌ ಹಾಗೂ ವಾಟ್ಸಾಪ್‌ ಸೇಟಸ್‌ ಹಾಕಿಕೊಳ್ಳುವ ಹುಚ್ಚಿತ್ತು, ಅದೇ ಕಾರಣಕ್ಕೆ ಒಮ್ಮೆ ಪೊಲೀಸ್‌ ಸ್ಟೇಷನ್‌ ನಲ್ಲಿ ದಿನವಿಡಿ ಕುಳಿತು ಆಮೇಲೆ ವಾಪಸ್‌ ಆಗಿದ್ದ. ರೋಡಿನಲ್ಲಿ ಬರ್ತಡೆ ಆಚರಿಸಿ ಅದರ ವಿಡಿಯೋ ಫೇಸ್‌ಬುಕ್‌ಗೆ ಹಾಕಿಕೊಂಡಿದ್ದಕ್ಕೆ ಶೆಟ್ಟಿಯನ್ನ ಪೊಲೀಸರು ಕರೆಸಿ ವಿಚಾರಿಸಿದ್ದರು. ಆನಂತರವೂ ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಪೊಗರ್‌ದಸ್ತ್‌ ವಿಚಾರಗಳನ್ನ ಹಾಕಿಕೊಳ್ತಿದ್ದ ಶೆಟ್ಟಿಯ ವರ್ತನೆಯು ಆತನ ಅಂತ್ಯಕ್ಕೆ ಕಾರಣವಾಯ್ತು ಎನ್ನುವ ಆರೋಪ ಇದೆ. 

 

ಅಟ್‌ಲಾಸ್ಟ್‌ , ಶೆಟ್ಟಿ ಸಾವನ್ನಪ್ಪಿದ್ದಾನೆ, ಆತನನ್ನ ಕೊಂದ ಆರೋಪಿಗಳ ಬಂಧನಕ್ಕೆ ಶಿವಮೊಗ್ಗ ಪೊಲೀಸ್‌ ತಲಾಶ್‌ ನಡೆಸ್ತಿದ್ದಾರೆ. ಅವರವರು ಹೊಡೆದುಕೊಳ್ಳುತ್ತಾರೆ, ಸಾಯುತ್ತಾರೆ. ಕೇಸ್‌ ಆಗುತ್ತದೆ, ಆರೋಪಿಗಳು ಅಂದರ್‌ ಆಗುತ್ತಾರೆ. ಪ್ರತಿ ರೌಡಿಶೀಟರ್‌ ಸಾವಿನಲ್ಲಿಯು ನಡೆಯುತ್ತಿರುವುದು ಇಷ್ಟೆ. ಈ ಘಟನೆಗಳ ಬಗ್ಗೆ ಪೊಲೀಸರಷ್ಟೆ ಅಲ್ಲ,  ಯಾರು ಸಹ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಹೊಡೆಬಡಿದು ರಕ್ತ ಹರಿಸುವ ಜಗತ್ತಿನವರಿಗೆ ಅರ್ಥವಾಗಬೇಕಿದೆ. 

 

SUMMARY |  Who killed Kapada Rajesh Shetty? Who are the accused? 

 

KEY WORDS  |   Who killed Kapada Rajesh Shetty? Who are the accused? 

Share This Article
Facebook Whatsapp Whatsapp Telegram Threads Copy Link
Previous Article ನಕ್ಸಲ್‌ ವಿಕ್ರಂಗೌಡನ ಎನ್‌ಕೌಂಟರ್‌ ಬಗ್ಗೆ ಅನುಮಾನ ಏಕೆ ಗೊತ್ತಾ? ಜೆಪಿ ಬರೆಯುತ್ತಾರೆ
Next Article ಚಿಕ್ಕಮಗಳೂರು ಎಲೆಕ್ಟ್ರಿಷಿಯನ್ ಹಾಗೂ ಭದ್ರಾವತಿ ಗುಜರಿ ವ್ಯಾಪಾರಿ ಅರೆಸ್ಟ್‌ | ಲಕ್ಷ..ಲಕ್ಷ ಕ್ಯಾಶ್‌, ಬೈಕ್‌ ಸೀಜ್
Leave a Comment

Leave a Reply Cancel reply

Your email address will not be published. Required fields are marked *

You Might Also Like

Shivamogga | ಶಿವಮೊಗ್ಗ ಜೈಲ್‌ ಮೇಲೆ SP ಮಿಥುನ್‌ ಕುಮಾರ್‌ ರೇಡ್‌ ಗೆ ಕಾರಣ? | ಸಿಕ್ಕಿದ್ದೇನು? ಫೋಟೋ ಸ್ಟೋರಿ

By 13

ಬಳ್ಳಾರಿ ಜೈಲಲ್ಲಿಯು ದರ್ಶನ್‌ಗೆ ಸಿಗುತ್ತಾ ಅದೆಲ್ಲಾ?! | ಸೆರೆವಾಸ ಅನುಭವಿಸಿದ ರೌಡಿ ಲೋಕ ಏನು ಹೇಳುತ್ತೆ? JP EXCLUSIVE

By 13

ಮಾಳೂರುನಿಂದ ಗಾಜನೂರುವರೆಗೂ ಬಂದ ಕೇರಳ ಗಾಡಿ ಕಾಣೆ | ಅದರಲ್ಲಿದ್ದ ಕದ್ದ ದನಗಳು ನಾಪತ್ತೆ | ಏನಿದು ತೀರ್ಥಹಳ್ಳಿ ರಸ್ತೆಯ ಮಾಯದ ಕಥೆ

By 13
How a Shivamogga Family Narrowly Escaped a Burglary
JP STORYSHIVAMOGGA NEWS TODAYSTATE NEWS

ಶಿವಮೊಗ್ಗದಲ್ಲಿ ಚಡ್ಡಿಗ್ಯಾಂಗ್​ ಮತ್ತೆ ಆ್ಯಕ್ಟೀವ್?​ : ಕಿಟಕಿ ತೆಗೆದು ಮನೆಗೆ ನುಗ್ಗಿ ಆ ಕೃತ್ಯ!

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up