SHIVAMOGGA | MALENADUTODAY NEWS | ಮಲೆನಾಡು ಟುಡೆ Oct 16, 2024
ಶಿವಮೊಗ್ಗ | ಇಲ್ಲಿನ ಗಾಂಧಿ ಬಜಾರ್ನ ಅಂಗಡಿಯೊಂದಕ್ಕೆ ಕನ್ನ ಹಾಕಿದ ಕಳ್ಳರು ಅಲ್ಲಿದ್ದ ನೋಟಿನ ಕಂತೆಗಳನ್ನ ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಶಿವಮೊಗ್ಗದ ಗಾಂಧಿ ಬಜಾರಿನ ವೀರಭದ್ರಪ್ಪ ಅಂಡ್ ಸನ್ಸ್ ಸ್ಟೋರ್ನಲ್ಲಿ ಕಳ್ಳತನವಾಗಿದೆ. ಮರುದಿನ ಬೆಳಗ್ಗೆ ಅಂಗಡಿಯವರು ಬಂದು ಅಂಗಡಿಯ ಬಾಗಿಲು ತೆರದಾಗ ಘಟನೆ ಬೆಳಕಿಗೆ ಬಂದಿದೆ.
ಅಂಗಡಿಯ ಪಕ್ಕದ ಬಿಲ್ಡಿಂಗ್ನಿಂದ ಮೂರನೇ ಮಹಡಿಗೆ ಬಂದ ಕಳ್ಳರು, ಅಲ್ಲಿದ್ದ ಗೇಟ್ನ ಬೀಗ ಮುರಿದು ಒಳಕ್ಕೆ ಬಂದಿದ್ದಾರೆ. ಆ ಬಳಿಕ ಸಿಸಿ ಕ್ಯಾಮರಾಗಳ ಸಂಪರ್ಕ ತಪ್ಪಿಸಿ ನೆಲಮಹಡಿಗೆ ಬಂದು ಕ್ಯಾಶ್ ಕೌಂಟರ್ನಲ್ಲಿದ್ದ ಹಣ ಎಗರಿಸಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಣ, ಬೆಳ್ಳಿ ನಾಣ್ಯಗಳು ಕಳ್ಳತನವಾಗಿದೆ ಎನ್ನಲಾಗಿದೆ.

SUMMARY | A case has been registered at Doddapete police station in connection with the theft of bundles of currency notes from a shop in Gandhi Bazar.
KEYWORDS | Doddapete police station , theft of bundles of currency notes, shop in Gandhi Bazar