SHIVAMOGGA | MALENADUTODAY NEWS | ಮಲೆನಾಡು ಟುಡೆ Oct 27, 2024
ನಮ್ಮ ಬಂಗಾರ, ಎಸ್ ಬಂಗಾರಪ್ಪನವರ 92 ನೇ ಹುಟ್ಟುಹಬ್ಬದ ಆಚರಣೆ ನಿನ್ನೆ ದಿನ ಸೊರಬದ ಬಂಗಾರಧಾಮದಲ್ಲಿ ವಿಶೇಷವಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಂಗಾರಪ್ಪ ಅವರ ನೆನಪು ಸದಾ ತಾಜಾವಾಗಿಡಲು ಈ ಸ್ಥಳವನ್ನು ಮಧು ಬಂಗಾರಪ್ಪ ಇಷ್ಟೊಂದು ಅರ್ಥಗರ್ಭಿತವಾಗಿ ಸಮಾಜಕ್ಕೆ ಅರ್ಪಿಸಿದ್ದಾರೆ ಎಂದರು.
ಬಂಗಾರಪ್ಪನವರು ನಮ್ಮಂತಹ ಯುವಕರನ್ನು ಆಕರ್ಷಿಸುವ ಕೆಲಸ ಮಾಡಿದ್ದಷ್ಟೆ ಅಲ್ಲದೆ, ರಮೇಶ್, ನಜೀರ್, ಜಾರ್ಜ್ ರಂತಹವರ ಬದುಕು ರೂಪಿಸುವ ಕೆಲಸ ಮಾಡಿದರು. ಅವರು ಯವಕರಿಗೆ ಆಧ್ಯತೆ ನೀಡಿದ್ದರು ಎಂದ ಗೃಹಸಚಿವರು ಹಿಂದೊಮ್ಮೆ ಸಚಿವ ಸ್ಥಾನ ಕೈ ತಪ್ಪಿದ್ದಾಗ, ತಮ್ಮ ಬಗ್ಗೆ ಬಂಗಾರಪ್ಪನವರು ಅದು ನನ್ನ ಕುದುರೆ ಅದನ್ನ ಓಡಿಸುವ ಕೆಲಸ ನಾನು ಮಾಡುತ್ತೇನೆ ಎಂದಿದ್ದರು ಎನ್ನುತ್ತಾ ಹಳೆಯ ಘಟನೆಯೊಂದನ್ನ ನೆನೆದರು
ನನ್ನನ್ನು ಮಹಾರಾಷ್ಟ್ರ ಉಸ್ತುವಾರಿಯನ್ನಾಗಿ ಮಾಡಿದ್ದಾರೆ. ಬೆಳಗ್ಗೆ ಮುಂಬೈಯಲ್ಲಿ ಇರಬೇಕಿತ್ತು. ಆದ್ರೆ ಬಂಗಾರಪ್ಪ ನವರ ಮೇಲೆ ಇಟ್ಟುಕೊಂಡಿದ್ದ ಗೌರವವನ್ನು ನೆನಪಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ಮಧುಬಂಗಾರಪ್ಪ ಒಬ್ಬ ಮಗನಾಗಿ ಬಂಗಾರಪ್ಪನವರು ನೀಡಿದ ಸಂದೇಶ ನೆನಪು ಮಾಡಿಕೊಳ್ಳುತ್ತಾ ಅವರ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದರು

ಇನ್ನೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಶಿವರಾಜಕುಮಾರ್ ಪ್ರತಿಯೊಬ್ಬರಿಗೆ ಈ ಭಾಗ್ಯ ಸಿಗಲ್ಲ.. ಒಂದು ನಮ್ಮ ತಂದೆ ಇನ್ನೊಂದು ನನ್ನ ಮಾವ…ಬಂಗಾರಪ್ಪನವರ ವಿಚಾರಗಳನ್ನು ಮಧುಬಂಗಾರಪ್ಪ ನೆಡೆಸಿಕೊಂಡು ಬರುತ್ತಾ ಇದ್ದಾರೆ..ಕುಂ.ವೀರಭದ್ರಪ್ಪನವರಿಗೆ ಪ್ರಶಸ್ತಿ ನೀಡುತ್ತಿರುವುದು ನನಗೆ ಹೆಮ್ಮೆ ಹಾಗೂ ಸಂತಸವಾಗಿದೆ. ಮಾವನವರು ಚನ್ನಾಗಿ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದರು. ಸಿಎಂ ಆದಾಗ ಸಿಎಂ ಸ್ಥಾನದಿಂದ ಕೆಳಗೆ ಇಳಿದಾಗ ಅವರು ಅಂದಿನ ಸಂಜೆ ಬ್ಯಾಡ್ಮಿಂಟನ್ ಆಡುತ್ತಿದ್ದರು, ಅವರಿಗೆ ಅಧಿಕಾರದ ಆಸೆ ಇರಲಿಲ್ಲ ಬಡವರ ಬಗ್ಗೆ ಕಾಳಜಿ ಇತ್ತು ಒಳ್ಳೆಯ ಸಮಾರಂಭವನ್ನು ಮಾಡುತ್ತಿರುವ ಮಧುಬಂಗಾರಪ್ಪ, ಪ್ರತಿವರ್ಷ ನಡೆಸಬೇಕು ನಮ್ಮನ್ನು ಸೊರಬಕ್ಕೆ ಕರಸಬೇಕೆಂದು ಹೇಳಿದ್ರು, ಬಳಿಕ ಮುತ್ತಣ್ಣ ಪೀಪಿ ಊದುವ, ಬೇಡುವೆನು ವರವನ್ನು ಹಾಡನ್ನು ಆಡುವ ಮೂಲಕ ಜನರನ್ನ ರಂಜಿಸಿದರು..
ಇನ್ನೂ ಇದೇ ವೇಳೆ ಸಮಾಜ ಸೇವಾಕರ್ತರು ಹಾಗೂ ಸುಮಂಗಲಿ ಸೇವಾಶ್ರಮ ಸ್ಥಾಪಕಿ ಸುಶೀಲಮ್ಮನವರಿಗೆ ಸೇವಾ ಬಂಗಾರ ಪ್ರಶಸ್ತಿ, ಕಾದಂಬರಿಕಾರರು ಕುಂ.ವೀರಭದ್ರಪ್ಪ ಸಾಹಿತ್ಯ ಬಂಗಾರ..ರಂಗಕಲಾವಿದೆ ಪ್ರತೀಭಾ ನಾರಯಣ್ ರವರಿಗೆ ಕಲಾ ಬಂಗಾರ ಪ್ರಶಸ್ತಿ ನೀಡಲಾಯಿತು. ಜೊತಗೆ ಬಂಗಾರಪ್ಪನವ ಕುರಿತು ಪ್ರಬಂಧ ಸ್ಪರ್ಧೆ, ಭಾಷಾಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು..
SUMMARY | The 92nd birthday celebrations of S Bangarappa, were held yesterday in a special way at Bangardhama in Soraba. Speaking on the occasion, Home Minister Dr. G. Parameshwara said that Madhu Bangarappa has dedicated this place to the society in such a meaningful way to keep the memory of Bangarappa fresh.
KEYWORDS | 92nd birthday celebrations of S Bangarappa, Bangardhama in Soraba, Home Minister Dr. G. Parameshwara, Madhu Bangarappa,