SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 7, 2024 SHIVAMOGGA NEWS | ಶಿವಮೊಗ್ಗ ನಗರದ ಹೊರವಲಯದಲ್ಲಿ ಆನೆಗಳ ಹಾವಳಿ ಬಗ್ಗೆ ವರದಿಯಾದ ಬೆನ್ನಲ್ಲೆ ಇದೀಗ ಶಿವಮೊಗ್ಗದ ಇನ್ನೊಂದು ಬದಿಯಲ್ಲಿ ಸಿಗುವ ಗೆಜ್ಜೇನಹಳ್ಳಿ ಸುತ್ತಮುತ್ತ ಚಿರತೆಯ ಹಾವಳಿ ಬಗ್ಗೆ ವರದಿಯಾಗಿದೆ. ಸ್ಥಳೀಯ ಮಾಹಿತಿ ಪ್ರಕಾರ, ಕೋಟೆಗಂಗೂರು, ಗೆಜ್ಜೇನಹಳ್ಳಿ ಸುತ್ತಮುತ್ತ ಚಿರತೆ ಹಾವಳಿ ಮಾಡುತ್ತಿದ್ದು, ದನವೊಂದರ ಮೇಲೆ ದಾಳಿ ಮಾಡಿದೆ. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಎತ್ತಿಗೆ ಮೈ ತೊಳೆಯಲು ಹೋದ ವ್ಯಕ್ತಿ ಸಾವು
ಇನ್ನೊಂದಡೆ ಕೆರೆಯಲ್ಲಿ ಎತ್ತಿನ ಮೈ ತೊಳೆಯುತ್ತಿದ್ದ ವೇಳೆ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಕೆರೆಗೆ ಇಳಿಸಿ ಮೈ ತೊಳೆಸುತ್ತಿದ್ದಾಗ, ಎತ್ತು ಗಾಬರಿಯಿಂದ ಓಡಲು ಆರಂಭಿಸಿದೆ. ಈ ವೇಳೆ ಅದಕ್ಕೆ ಕಟ್ಟಿದ ಹಗ್ಗ ಯುವಕನ ಕಾಲಿಗೆ ಸಿಲುಕಿದೆ. ಇದರಿಂದಾಗಿ ಆತನ ಎತ್ತು ಎಳೆದುಕೊಂಡು ಹೋಗಿದೆ. ಪರಿಣಾಮ ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದಾನೆ.
ಶಿವಮೊಗ್ಗ ಜೈಲ್ ಕೈದಿ ವಿರುದ್ಧ ಕೇಸ್
ಆಸ್ಪತ್ರೆಗೆ ತಪಾಸಣೆಗೆ ಎಂದು ಕರೆದುಕೊಂಡು ಬಂದ ಸಂದರ್ಭದಲ್ಲಿ ಕೈದಿಯೊಬ್ಬ ತಮ್ಮವರಿಂದ ಗಾಂಜಾ ಪಡೆದುಕೊಂಡಾಗ ಡಿಎಆರ್ ಪೊಲೀಸರ ಕೈಲಿ ಸಿಕ್ಕಿಬಿದ್ದಿದ್ದಾನೆ. ಅಲ್ಲದೆ ಈ ಸಂಬಂಧ ತಲೆಚಚ್ಚಿಕೊಂಡು ಹೈಡ್ರಾಮಾ ಮಾಡಿದ್ದಾನೆ. ಸದ್ಯ ಈ ಬಗ್ಗೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

Summary | Leopard attack in Gejenahalli, youth drowns in lake in Soraba, ganja found near central jail Prisoner, Shimoga fast news
Keywords | Leopard attack in Gejenahalli, youth drowns in lake in Soraba, ganja found near central jail Prisoner, Shimoga fast news