SHIVAMOGGA | MALENADUTODAY NEWS | Aug 23, 2024 ಮಲೆನಾಡು ಟುಡೆ
ಆಸ್ತಿ ವಿಚಾರದಲ್ಲಿ ತಂದೆಯನ್ನ ಕೊಲೆ ಮಾಡಿದ ಆರು ತಿಂಗಳ ಹಿಂದೆ ಜೈಲಿಗೆ ಹೋಗಿದ್ದ ಆರೋಪಿಯನ್ನ ಆತನ ಸಹೋದರಿಯರೇ ಆಸ್ತಿ ವಿಚಾರಕ್ಕೆ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ನಲ್ಲಿ ನಡೆದಿದೆ.
ತರೀಕೆರೆ ತಾಲ್ಲೂಕು ಚೌಡೇಶ್ವರಿ ಕಾಲೊನಿಯ 3ನೇ ಕ್ರಾಸ್ನಲ್ಲಿ ನಿನ್ನ ಗುರುವಾರ ಈ ಘಟನೆ ಸಂಭವಿಸಿದೆ. ರಾಘವೇಂದ್ರ (43) ಕೊಲೆಯಾದ ವ್ಯಕ್ತಿ.
ಈ ಸಂಬಂಧ ಮೃತನ ಸ್ನೇಹಿತ ಶಂಕರ್ ನೀಡಿದ ದೂರಿನ ಮೇರೆಗೆ ಪೊಲೀಸರು ಆರು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಮೃತನ ಮೂವರು ಸಹೋದರಿ ಹಾಗೂ ಭಾವನೊಬ್ಬನನ್ನ ಬಂಧಿಸಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ನಡೆದಿದ್ದೇನು?
ಕೊಲೆಯಾದ ರಾಘವೇಂದ್ರ ಆರು ತಿಂಗಳ ಹಿಂದೆ ತನ್ನ ತಂದೆಯ ಕೊಲೆ ಆರೋಪ ಸಂಬಂಧ ಜೈಲು ಸೇರಿದ್ದ 20 ದಿನಗಳ ಹಿಂದೆ 20 ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆತ ಮನೆಗೆ ಬಂದ ಮೇಲೆ ತಂದೆ ಆಸ್ತಿಯನ್ನು ಮಾರಲು ಯತ್ನಿಸಿದ್ದ. ಈ ವಿಚಾರಕ್ಕೆ ಸಹೋದರಿಯರ ಜೊತೆಗೆ ಜಗಳವಾಗಿದೆ. ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಸುದ್ದಿಗಳು
-
ಪತ್ರಕರ್ತನಿಗೆ ಪೋಕ್ಸೋ ಕೇಸ್ ವಾರ್ನಿಂಗ್ ಕೊಟ್ಟ ಪೊಲೀಸ್ ಆಫಿಸರ್ | ತೀರ್ಥಹಳ್ಳಿಯಲ್ಲಿ ಇದು ಸಾಧ್ಯನಾ?
-
ನೋಟು ಎಕ್ಸ್ಚೇಂಜ್ಗೆ ಡಬ್ಬಲ್ ದುಡ್ಡು ಆಫರ್ | ಹೊಸನಗರದ ವ್ಯಕ್ತಿಗೆ ಬಾಕ್ಸ್ ಕೊಟ್ಟು ಮೋಸ ಮಾಡಿದ ಐವರು ಅರೆಸ್ಟ್
-
ನಾಯಿ, ಬೆಕ್ಕುಗಳಿಗಾಗಿಯೇ ಶಿವಮೊಗ್ಗದಲ್ಲಿ ಓಪನ್ ಆಗಲಿದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ | ಏಲ್ಲಿ ಗೊತ್ತಾ