SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಶಿವಮೊಗ್ಗ | ನಗರದ ಟಿಪ್ಪುನಗರದ ಖಾಲಿ ಜಾಗವೊಂದರಲ್ಲಿ ಅಳವಡಿಸಿದ್ದ ಮೊಬೈಲ್ ಟವರ್ ಸಾಮಗ್ರಿಗಳನ್ನ ಕಳ್ಳತನ ಮಾಡಲಾಗಿದೆ ಎಂಧು ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 2008ರಲ್ಲಿ ಮೊಬೈಲ್ ಟವರ್ ಅಳವಡಿಸಿದ್ದ ಕಂಪನಿ ಕೊರೊನಾ ಬಳಿಕ ಅದರ ನಿರ್ವಹಣೆಯನ್ನ ಸರಿಯಾಗಿ ಮಾಡಿರಲಿಲ್ಲ. ಇಗೀಗ ಪರಿಶೀಲನೆಗೆ ಅಂತಾ ಬಂದಾಗ ಟವರ್ನ ಬಹುತೇಕ ಸಾಮಗ್ರಿಗಳು ನಾಪತ್ತೆಯಾಗಿವೆ. ಈ ಸಂಬಂಧ 46.30 ಲಕ್ಷ ರೂಪಾಯಿ ಐಟಮ್ಸ್ ಕಳುವಾಗಿರುವ ಬಗ್ಗೆ ಸ್ಟೇಷನ್ನಲ್ಲಿ ದೂರು ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು KSRTC ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಚಿನ್ನದ ಸರವನ್ನ ಕಳ್ಳತನಮಾಡಲಾಗಿದೆ. ಶಿಕಾರಿಪುರದಿಂದ ಹೊನ್ನಾಳಿಗೆ ಹೊರಟಿದ್ದ ಮಹಿಳೆಯ ಸರವನ್ನ ಬಸ್ ಹತ್ತುವಾಗಲೇ ಎಗರಿಸಲಾಗಿದೆ. ಚಿನ್ನದ ಸರ 2 ಲಕ್ಷ ರೂಪಾಯಿ ಮೌಲ್ಯದಾಗಿತ್ತು ಎನ್ನಲಾಗಿದೆ. ಶಿಕಾರಿಪುರ ಪೊಲೀಸರು ಕೇಸ್ ಮಾಡಿದ್ದಾರೆ.
ಲಾರಿಯೊಂದರ ಬ್ಯಾಟರಿ ಕದಿಯಲು ಬಂದ ಕಳ್ಳರು ಸ್ಥಳದಲ್ಲಿಯೇ ತಮ್ಮ ಬೈಕ್ ಸಹ ಬಿಟ್ಟು ಪರಾರಿಯಾದ ಘಟನೆ ಬಗ್ಗೆ ಶಿವಮೊಗ್ಗದ ಆಲ್ಕೊಳದಲ್ಲಿ ವರದಿಯಾಗಿದೆ. ಇಲ್ಲಿನ ಲಗಾನ್ ಕಲ್ಯಾಣ ಮಂದಿರದ ಬಳಿ ನಿಲ್ಲಿಸಿದ್ದ ಲಾರಿಯೊಂದರ ಬ್ಯಾಟರಿ ಕದಿಯಲು ಕಳ್ಳರು ಸ್ಕೆಚ್ ಹಾಕಿದ್ದರು. ಅದನ್ನ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ನೋಡಿ ಜೋರಾಗಿ ಕೂಗಿದ್ದಾರೆ. ಇದರಿಂದ ಗಾಬರಿಗೊಂಡ ಕಳ್ಳರು ಕದ್ದ ಬ್ಯಾಟರಿ ಹಾಗೂ ಬೈಕ್ನ್ನ ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಈ ಸಂಬಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
SUMMARY | Shivamogga FAST News, Shikaripura KSRTC Bus Stand, Shivamogga District, Shikaripura Police Station, Tunganagar Police Station, Alkola, Lagaan Kalyana Mandir, Battery Theft, Mobile Tower Theft,

KEYWORDS | Shivamogga FAST News, Shikaripura KSRTC Bus Stand, Shivamogga District, Shikaripura Police Station, Tunganagar Police Station, Alkola, Lagaan Kalyana Mandir, Battery Theft, Mobile Tower Theft,