SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 14, 2024 | FASTNEWS TODAY
ಪ್ರಿಯಕರನ ಸಲ್ಲಾಪಕ್ಕಾಗಿ ಮಕ್ಕಳನ್ನೆ ಕೊಂದ ತಾಯಿ
ಪ್ರಿಯಕರನ ಜೊತೆಗೆ ಸಲ್ಲಾಪದಲ್ಲಿದ್ದಾಗ ಮಗು ಅಳುತ್ತಿತ್ತು ಎಂದು ಹೆತ್ತ ತಾಯಿಯ ತನ್ನಿಬ್ಬರು ಮಕ್ಕಳನ್ನ ಕೊಲೆ ಮಾಡಿದ ಘಟನೆ ರಾಮನಗರದಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನ ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಬಿಲ್ (3) ಮತ್ತು ಕಬೀಲನ್ (11 ತಿಂಗಳು) ಮೃತ ಮಕ್ಕಳು. ಇವರ ತಾಯಿ ತನ್ನ ಪತಿಯ ಮನೆಯಿಂದ ಮಕ್ಕಳ ಜೊತೆ ನಾಪತ್ತೆಯಾಗಿದ್ದಳು. ಈ ಸಂಬಂಧ ಪತಿ ನೀಡಿದ್ದ ದೂರಿನನ್ವಯ ನಾಪತ್ತೆಯಾದ ಯುವತಿಯನ್ನ ಪತ್ತೆ ಮಾಡಿದಾಗ ಮಕ್ಕಳು ಆಕೆಯ ಬಳಿ ಇರದಿರುವುದು ಗೊತ್ತಾಗಿದೆ. ವಿಚಾರಿಸಿದಾಗ ಪ್ರಿಯಕನ ಜೊತೆಗೆ ಸಲ್ಲಾಪದಲ್ಲಿದ್ದಾಗ ಮಗು ಅಳುತ್ತಿತ್ತು. ಹಾಗಾಗಿ ಸಿಟ್ಟಿನಿಂದ ಅವುಗಳನ್ನ ಕೊಲೆ ಮಾಡಿದ್ದಾರೆ ಎಂಬ ವಿಚಾರ ಪೊಲೀಸರಿಗೆ ಗೊತ್ತಾಗಿದೆ.
ಆಕಸ್ಮಿಕವಾಗಿ ಗುಂಡು ಹಾರಿ ಆರು ಮಂದಿಗೆ ಗಾಯ
ಇತ್ತ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ನಲ್ಲಿ ದಸರಾ ನಿಮಿತ್ತ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂಬು ಹೊಡೆಯುವ ಸಂಪ್ರದಾಯದ ವೇಳೆ, ಆಕಸ್ಮಿಕವಾಗಿ ಕೋವಿಯಿಂದ ಗುಂಡು ಸಿಡಿದಿದೆ. ಪರಿಣಾಮ ಆರು ಜನರಿಗೆ ಗಾಯವಾಗಿದೆ. ಅಂಬು ಹೊಡೆಯುವ ವೇಳೆ ಕೋವಿಯೊಂದಕ್ಕೆ ವ್ಯಕ್ತಿಯೊಬ್ಬರು ಮದ್ದು ತುಂಬಿಸಿ ಟ್ರಿಗರ್ ಎಳೆದಿದ್ದಾರೆ. ಈ ವೇಳೆ ಅಲ್ಲಿದ್ದ ಆರು ಮಂದಿ ಗಾಯಗೊಂಡಿದ್ದಾರೆ.
ಅನೈತಿಕ ಸಂಬಂಧ ವಿಚಾರಕ್ಕೆ ಗುಂಡು ಹಾರಿಸಿದ
ಅತ್ತ ಮಂಡ್ಯ ಜಿಲ್ಲೆಯ ಪಾಂಡವ ಪುರ ತಾಲ್ಲೂಕುನಲ್ಲಿ ತನ್ನ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡು ಯುವಕನೊಬ್ಬನ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಆತ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
SUMMARY | Mother who killed her children, man who opened fire, six injured in accidental firing, Mandya, Pandavapura taluk, Chikkamagaluru, Koppa, Ramanagara

KEYWORDS | Mother who killed her children, man who opened fire, six injured in accidental firing, Mandya, Pandavapura taluk, Chikkamagaluru, Koppa, Ramanagara