SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 28, 2024 ಅಕ್ರಮವಾಗಿ ಬೃಹತ್ ಕಂಟೇನರ್ನಲ್ಲಿ ಜಾನುವಾರುಗಳನ್ನ ಸಾಗಿಸಿದ್ದ ಸಂದರ್ಭದಲ್ಲಿ ವಾಹನವನ್ನು ಹಿಂದೂಪರ ಸಂಘಟನೆಗಳು ಅಡ್ಡಗಟ್ಟಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶಿವಮೊಗ್ಗ ನಗರ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ ಜಯನಗರ ಪೊಲೀಸ್ ಠಾಣೆ
ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಿಂದೂ ಪರ ಸಂಘಟನೆಗಳ ಸದಸ್ಯರು ನಿನ್ನೆ ರಾತ್ರಿ ಜಮಾಯಿಸಿದ್ದರಷ್ಟೆ ಅಲ್ಲದೆ ಅಕ್ರಮ ಗೋವುಗಳ ಸಾಗಾಟದ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು.

ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಿಂದ ಕರಾವಳಿಯ ಜಿಲ್ಲೆಗೆ ಅಕ್ರಮವಾಗಿ ಕಂಟೇನರ್ ಲಾರಿಗಳಲ್ಲಿ ನೂರಕ್ಕೂ ಹೆಚ್ಚು ಗೋವುಗಳನ್ನ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯೊಂದು ನಿನ್ನೆ ಹಿಂದೂ ಪರ ಸಂಘಟನೆಗಳ ಸದಸ್ಯರಿಗೆ ಲಭ್ಯವಾಗಿತ್ತು.
ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದ ಸಂಘಟನೆ ಸದಸ್ಯರು , ಪೊಲೀಸರ ಜೊತೆಯಲ್ಲಿ ಉಷಾ ನರ್ಷಿಂಗ್ ಹೋಮ್ ಸರ್ಕಲ್ ಸಮೀಪ ಕಾದಿದ್ದರು. ಮಾಹಿತಿಯಂತೆ ಸ್ಥಳಕ್ಕೆ ಬಂದ ಕಂಟೇನರ್ ಪರಿಶೀಲಿಸಿದಾಗ, ಅದರಲ್ಲಿ 30 ಕ್ಕೂ ಹೆಚ್ಚು ಹಸು, ಕೋಣ, ಹೋರಿಗಳಿದ್ದವು. ಹಾಗಾಗಿ ಕಂಟೇನರ್ನ್ನ ಸ್ಟೇಷನ್ಗೆ ರವಾನಿಸಿ, ಆರೋಪಿಗಳನ್ನ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಈ ನಡುವೆ ಓರ್ವ ಆರೋಪಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ, ಇದರಿಂದ ಪೊಲೀಸ್ ಸ್ಟೇಷನ್ ಆವರಣದಲ್ಲಿ ಕೊಂಚ ಹಲ್ಚಲ್ ಉಂಟಾಗಿತ್ತು. ಅಷ್ಟರಲ್ಲಿ ಸ್ಥಳದಲ್ಲಿದ್ದವರು ಆರೋಪಿಯನ್ನ ಹಿಡಿದು ಮತ್ತೆ ಪೊಲೀಸ್ ವಶಕ್ಕೆ ಒಪ್ಪಿಸಿದರು. ಅಷ್ಟೊತ್ತಿಗೆ ಸ್ಥಳಕ್ಕೆ ಡಿವೈಎಸ್ಪಿ ಸುರೇಶ್ ಕೂಡ ಆಗಮಿಸಿದ್ರು. ಆನಂತರ ಗೋವುಗಳಿದ್ದ ಕಂಟೇನರ್ನ್ನ ಶಿವಮೊಗ್ಗದ ಗೋಶಾಲೆಯೊಂದಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.