SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 19, 2025

ನೋಂದಣಿ ಮಾಡಿಸಿದಂತಹ ಕಾರ್ಮಿಕರಿಗೆ ಕಿಟ್ ಬದಲಾಗಿ ಇನ್ಮುಂದೆ ಕಾರ್ಮಿಕ ದಿನಾಚರಣೆಯಂದು 15 ಸಾವಿರ ಬೋನಸ್ ನೀಡಬೇಕು ಎಂಬುದನ್ನು ಸೇರಿದಂತೆ ಇನ್ನೂ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ಕನ್ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಈ ಕುರಿತು ಇಂದು ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಕರ್ನಾಟಕ ಕನ್ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಕೆ ಮುರುಗನ್ ಮಾತನಾಡಿ, ನಾವು ಕಾರ್ಮಿಕರ ಹಿತರಕ್ಷಣೆಗಾಗಿ ಹಲವಾರು ವರ್ಷಗಳಿಂದ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುತ್ತಾ ಬಂದಿದ್ದೇವೆ. ಆದರೆ ಸರ್ಕಾರ ನಮ್ಮ ಕೆಲವೇ ಕೆಲವು ಬೇಡಿಕೆಯನ್ನು ಮಾತ್ರ ಈಡೇರಿಸಿದೆ. ಇತ್ತೀಚಿನ ದುಬಾರಿ ದುನಿಯಾದಲ್ಲಿ ಸರ್ಕಾರ ಈಗ ಕಾರ್ಮಿಕರಿಗೆ ಕೊಡುತ್ತಿರುವ ಸವಲತ್ತು ಹಾಗೂ ಧನ ಸಹಾಯ ಯಾವುದಕ್ಕೂ ಸಾಲುತ್ತಿಲ್ಲ. ಹಾಗೆಯೇ ಅವರು ನಮಗೆ ಹಲವು ಕಿಟ್ಗಳನ್ನು ನೀಡುತ್ತಿದ್ದು, ಆ ಕಿಟ್ನಲ್ಲಿ ಇರುವಂತಹ ಸಾಮಾಗ್ರಿಗಳ ಕ್ವಾಲಿಟಿ ಚೆನ್ನಾಗಿರುವುದಿಲ್ಲ. ಹಾಗಾಗಿ ನಮ್ಮ ಈ ಕೆಳಕಂಡ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದರೆ ನಮಗೆ ಉಪಯುಕ್ತವಾಗಲಿದೆ ಎಂದರು.

ಕರ್ನಾಟಕ ಕನ್ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ಹಕ್ಕೊತ್ತಾಯಗಳೇನು.
ಎಲ್ಲಾ ಸೈಬರ್ ಗಳಿಗೆ ಲೇಬರ್ ಕಾರ್ಡ್ ಮಾಡಿಕೊಡುವ ಅಧಿಕಾರವನ್ನು ರದ್ದು ಪಡಿಸಿ ಹಳೆಯ ಮಾದರಿಯಲ್ಲಿ ಲೇಬರ್ ಕಾರ್ಡ್ ಆಫೀಸ್ ನಿಂದಲೆ ಕಾರ್ಡ್ ನೊಂದಣಿ ಮಾಡಿಕೊಡುತ್ತಿದ್ದರು, ಇದಕ್ಕೆ ಶುಲ್ಕ ರೂ. 30 ರೂಪಾಯಿ ಪಡೆಸಯುತ್ತಿದ್ದರು. ಈಗ 100 ರೂ. ಶುಲ್ಕ ಪಡೆದು ಅದೇ ರೀತಿಯಲ್ಲಿ ನೋಂದಣಿ ಮಾಡಿಕೊಡಿ.
ಕಾರ್ಮಿಕರಿಗೆ ಕೊಡುತ್ತಿರುವ ಕಿಟ್ ಗಳು ನಿಜವಾದ ಕಾರ್ಮಿಕರಿಗೆ ಸಿಗುತ್ತಿಲ್ಲ.ಆದ್ದರಿಂದ ಅದನ್ನು ರದ್ದು ಪಡಿಸಿ ಮೇ 01 ರಂದು ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕಾರ್ಮಿಕರ ಕುಟುಂಬದ ಒಳಿತಿಗಾಗಿ ಬೋನಸ್ ರೀತಿಯಲ್ಲಿ 15,000/-ರೂಪಾಯಿಗಳನ್ನು ನೊಂದಣಿ ಮಡಿಸಿದಂತಹ ಕಾರ್ಮಿಕರಿಗೆ ಮಂಜೂರು ಮಾಡಬೇಕು.
ನಾಲ್ಕು ವರ್ಷಗಳಿಂದ ಶೈಕ್ಷಣಿಕ ಧನಸಹಾಯವು ಕಾರ್ಮಿಕರ ಪುಕ್ಕಳಿಗೆ ಸರಿಯಾದ ರೀತಿಯಲ್ಲಿ ಕೊಟ್ಟಿರುರುವದಿಲ್ಲ. ಆದ್ದರಿಂದ ಕುಟುಂಬದ ತಂದೆ-ತಾಯಿ ಗಳು ಮಕ್ಕಳ ವಿದ್ಯಭ್ಯಾಸಕ್ಕೆ ಸಾಲ ಮಾಡಿ ತೋಂದರೆ ಅನುಭವಿಸುತ್ತಿದ್ದಾರೆ. ಈ ರೀತಿ ತೊಂದರೆ ಆದಂತಹ ಮಕ್ಕಳಿಗೆ ಆದಷ್ಟು ಬೇಗನೆ ಅವರ ಖಾತೆಗೆ ಸ್ಕಾಲರ್ಶಿಪ್ ಗಳನ್ನು ಬಿಡುಗಡೆ ಗೊಳಿಸಿ ಮಕ್ಕಳ ವಿಧ್ಯಭ್ಯಾಸಕ್ಕೆ ಪ್ರೋತ್ಸಹಿಸಬೇಕು.
ಮದುವೆಯ ಸಹಾಯ ಧನ ರೂ. 60,000 ನೀಡುತ್ತಿದ್ದು, ಅದು ಈಗಿನ ಖರ್ಚು ವೆಚ್ಚಗಳಿಗೆ ಏನೆನುಸಾಲದ ಆದ್ದರಿಂದ ಅದನ್ನು ರೂ 1,50,000 (ಒಂದು ಲಕ್ಷದ ಐವತ್ತು ಸಾವಿರ) ರೂಪಾಯಿ ಗಳಿಗೆ ಹೆಚಿಸಬೇಕು.
ವೈಧ್ಯಕಿಯ ಸಹಾಯಧನ ಮೇಡಿಕಲ್ ಬಿಲ್ ಗೆ ಚಿಕಿತ್ಸೆಗೆ ಒಳಪಟ್ಟಂತಹ ಕಾರ್ಮಿಕರು ಎಷ್ಟು ಬಿಲ್ ಪಾವತಿ ಮಾಡಿರುತ್ತಾರೋ ಕಡಿತ ಗೊಳಿಸದೆ ಪೂರ್ಣ ಪ್ರಮಾಣದ ಅಂದರೆ ಶೇ 100% ರಷ್ಟು ನೀಡಬೇಕು.
ಪೇನ್ಸನ್ 60 ವರ್ಷ ಪೂರೈಸಿದ ಕಾರ್ಮಿಕರಿಗೆ ರೂ. 3,000/- ರೂಪಾಯಿಗಳನ್ನು ನೀಡುತ್ತಿದ್ದು, ಗೃಹ ಬಳಕೆಯ ವಸ್ತುಗಳ ಬೇಲೆ ಏರಿಕೆಯಾಗಿರುವುದರಿಂದ ರೂ. 6,000/- ಕ್ಕೆ ಹೆಚ್ಚಿಸಬೇಕು ಹಾಗೂ ಕಳೆದ 5 ತಿಂಗಳಿಂದ ಪೇನ್ಸನ್ ಹಣ ನೀಡಿರುವುದಿಲ್ಲ. ಬೇಗ ಬಿಡುಗಡೆ ಗೊಳಿಸಿ.
ವಸತಿ ಸೌಲಭ್ಯ ಕಟ್ಟಡ ಕರ್ಮಿಕರಿಗೆ ಸ್ವಂತ ಜಾಗ ಇದ್ದರೆ ಅವರಿಗೆ ಮನೆ ಕಟ್ಟಿಕೊಳ್ಳಲು 5,00,000/- ರೂಪಾಯಿ ನೀಡಬೇಕು ಅಥವಾ ನಿವೇಶನ ಖರೀದಿ ಮಾಡಲು ರೂ. 3,00,000/- ರೂಪಾಯಿಗಳನ್ನು ಮಂಡಳಿಯಿಂದ ನೀಡಬೇಕು.
ಹೆರಿಗೆ ಬತ್ತೆ ರೂ. 30,000 ನೀಡುತ್ತಿದ್ದು ಅದನ್ನು ರೂ. 60,000 ರೂಪಾಯಿಗೆ ಹೆಚ್ಚಿಸಬೇಕು.
ಇ.ಎಸ್.ಐ ಸೌಲಭ್ಯಕ್ಕಾಗಿ ನಿಗದಿತ ಕಾರ್ಖನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಿಡುತ್ತಿದ್ದು, ಅದನ್ನು ನಮ್ಮ ಕಟ್ಟಡ ಕಾರ್ಮಿಕರಿಗೂ ನೀಡಬೇಕೆಂದು 20 ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ನಿಗದಿತ ಶುಲ್ಕ (ರೂ. 100) ರೂಪಾಯಿ ಪಡೆದು ಇ.ಎಸ್.ಐ ಸೌಲಭ್ಯ ನೀಡಿ ಕಟ್ಟಡ ಕರ್ಮಿಕರ ಕುಟುಂಬಕ್ಕೆ ಆರೋಗ್ಯ ಭದ್ರತೆ ಕೊಡಿ.
ಸೇಸ್ ಹಣವನ್ನು ಕಟ್ಟಡ ಕಾರ್ಮಿಕರಿಗಲ್ಲದೆ ಬೇರೆ ಯಾವುದಕ್ಕೂ ಉಪಯೋಗಿಸ ಕೂಡದು ಎಂದು ಸರ್ವೊಚ್ಚ(ಸುಪ್ರಿಂ ಕೋರ್ಟ್) ನ್ಯಾಯಾಲಯ ಆದೇಶಿಸಿದೆ. ಅದರಂತೆ ಪಾಲಿಸಿ.
SUMMARY | The Karnataka Construction Workers’ Union has urged the state government to fulfil several other demands, including a bonus of Rs 15,000 on Labour Day
KEYWORDS | Karnataka Construction, state government, demands,