SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 24, 2025
ಶಿವಮೊಗ್ಗ | ಹೆಚ್ಚು ಒತ್ತಡಕ್ಕೆ ಒಳಗಾದವರಿಗೆ ಕ್ರೀಡೆಗಳು ನವೋಲ್ಲಾಸ ನೀಡುವುದರ ಜತೆಗೆ ಸಾಮರಸ್ಯವನ್ನು ಮೂಡಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್ ಹೇಳಿದರು. ಶ್ರೀಕಾಂತಣ್ಣ ಕಪ್ ಸೀಸನ್ 2 ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಗೆಲುವು ಸಾಧಿಸಿದ ತಂಡಗಳಿಗೆ ಟ್ರೋಫಿ, ಬಹುಮಾನ ವಿತರಿಸಿ ಅವರು ಮಾತನಾಡಿದರು.
ಈ ಟೂರ್ನಮೆಂಟ್ ಮೂಲಕ ವಿವಿಧ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆದಿರುವುದು ಶಿವಮೊಗ್ಗದಲ್ಲಿ ಹೊಸ ಭಾಷ್ಯ ಬರೆದಿದಂತಾಗಿದೆ ಎಂದರು. ಕಳೆದೆರಡು ದಿನಗಳಿಂದ ಪಂದ್ಯಾವಳಿಯಲ್ಲಿ ವಿವಿಧ ಸಮುದಾಯಗಳ ಯುವ ಮನಸ್ಸುಗಳು ಒಂದಾಗಿವೆ. ಈ ಮೂಲಕ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಮೂಡಿದಂತಾಗಿದೆ. ಈ ರೀತಿಯ ಕ್ರೀಡೆಗಳು ಹೆಚ್ಚೆಚ್ಚು ನಡೆಯಬೇಕು. ಅದರ ಮೂಲಕ ಶಿವಮೊಗ್ಗದ ಎಲ್ಲಾ ಮನಸ್ಸುಗಳನ್ನು ಒಂದು ಮಾಡಬೇಕೆಂದರು. ಈ ಪಂದ್ಯಾವಳಿಯ ಪ್ರಮುಖ ರೂವಾರಿ, ಯುವ ಮುಖಂಡ ವಿನಯ್ ತಾಂದ್ಲೆ, ಕಾರ್ಯ ಶ್ಲಾಘನೀಯ ಎಂದರು.
ದೈವಜ್ಙ ಯುವಕರ ಮುಡಿಗೆ ಶ್ರೀಕಾಂತಣ್ಣ ಕಪ್
ಶಿವಮೊಗ್ಗದ ಎನ್.ಇ.ಎಸ್. ಮೈದಾನದಲ್ಲಿ ಶನಿವಾರ ಭಾನುವಾರ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ವಸ್ತಿಕ್ ದೈವಜ್ಞ ತಂಡ ಪ್ರಥಮ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಎಂ.ಬಿ.ಸಿ.1 ಹಾಗೂ ಸ್ವಸ್ತಿಕ್ ದೈವಜ್ಞ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಸ್ವಸ್ತಿಕ್ ದೈವಜ್ಞ ತಂಡ ಜಯ ಗಳಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಮೊದಲು ಬ್ಯಾಟಿಂಗ್ ನಡೆಸಿದ ಎಂ.ಬಿ.ಸಿ. ತಂಡ 5 ವಿಕೆಟ್ ನಷ್ಟಕ್ಕೆ ಕೇವಲ 37 ರನ್ ಗಳಿಸಿತ್ತು. ಗೆಲುವಿನ ಗುರಿ ಬೆನ್ನತ್ತಿದ ದೈವಜ್ಞ ತಂಡ ಕೇವಲ 5.3 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 38 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
SUMMARY | Shivamogga district Congress leader M. Shreekanth said that sports not only refreshes those who are under stress but also brings harmony. Srikanth said.
KEYWORDS | Congress, M Shreekanth, shivamogga,