Thursday, 31 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಅಂಬ್ಲಿಗೋಳ ಗಂಡು ಹುಲಿ ಸಾವಿನ ಪ್ರಕರಣ ಎನ್.ಟಿ.ಸಿ.ಎ ನಿಯಮಾವಳಿ ಪ್ರಕಾರ  ತನಿಖೆ ನಡೆದಿದೆಯಾ ? ಸ್ಪಷ್ಟನೆ ನೀಡುವರೆ ಚೀಫ್ ವೈಲ್ಡ್ ಲೈಫ್ ಪಿಸಿಸಿಎಫ್ ?  Exclusive ಜೆಪಿ ಬರೆಯುತ್ತಾರೆ.

131
Last updated: February 25, 2025 9:25 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ

ಶಿವಮೊಗ್ಗ | ಷೆಡ್ಯುಲ್ ಒನ್ ಎನಿಮಲ್ ನ ಸಾಲಿನಲ್ಲಿ ಅಗ್ರಸಾಲಿನಲ್ಲಿರುವ  ಹುಲಿ ಸಂರಕ್ಷಣೆಗೆ ಕೇಂದ್ರ ಹಾಗು ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ.ದೇಶದಲ್ಲಿ ಕೇವಲ 2700 ಆಸುಪಾಸಿನಲ್ಲಿ ಹುಲಿಗಳ ಸಂಖ್ಯೆ ಇರುವಾಗ ಅವುಗಳ ಸಂರಕ್ಷಣೆಗೆ ರಾಷ್ಟ್ರೀಯ ನೀತಿಯನ್ನು ರೂಪಿಸಿಲಾಗಿದೆ. ಇನ್ನು ಹುಲಿ ಸಾವನ್ನಪ್ಪಿದ ಸಂದರ್ಭದಲ್ಲೂ, ಅದರ ವೈದ್ಯಕೀಯ ಪರೀಕ್ಷೆ ಹಾಗು ತನಿಖೆ ಹೇಗಿರಬೇಕು ಎಂಬ ನಿಯಮವನ್ನು ಸಹ ರೂಪಿಸಲಾಗಿದೆ. ಆದರೆ ಈ ನಿಯಮವನ್ನು ಅಂಬ್ಲಿಗೋಳದಲ್ಲಿ ಸಾವನ್ನಪ್ಪಿದ ಹುಲಿ ಪ್ರಕರಣದಲ್ಲಿ ಅನುಸರಿಸಲಾಗಿದೆಯಾ ಎಂಬ ಅನುಮಾನ ಮೂಡತೊಡಗಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ಜಿಲ್ಲೆಯ ಅಂಬ್ಲಿಗೋಳ ರೇಂಜ್‌ನ ಜಲಾಶಯದಲ್ಲಿ ಕಳೆದ ವಾರ ಗಂಡು ಹುಲಿಯು ನೀರಿನಲ್ಲಿ ತೇಲುತ್ತಿದ್ದ ದೃಷ್ಯವನ್ನು ಸ್ಥಳೀಯರು ಕಂಡು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹುಲಿಯ ದೇಹವನ್ನು ಅವಲೋಕಿಸಿದಾಗ ಅದು ಸಾವನ್ನಪ್ಪಿ ನೀರಿನಲ್ಲಿ ತೇಲುತ್ತಿರುವುದು ಗೊತ್ತಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಹುಲಿಯ ದೇಹದ ಭಾಗಕ್ಕೆ ಬೇಟೆಗಾರರ ಗನ್ ಶಾಟ್ ಆಗಿದೆಯಾ ಅಥವಾ ಟೆರಿಟೋರಿಯಲ್ ವಾರ್ ನಲ್ಲಿ ಗಾಯಗೊಂಡಿದೆಯಾ ಇಲ್ಲವೇ ಸ್ವಾಭಾವಿಕ ಕಾಯಿಲೆಗೆ ತುತ್ತಾಗಿದೆಯಾ ಎಂಬ ಅನುಮಾನಗಳು ಅಧಿಕಾರಿಗಳಿಗೆ ಕಾಡಿದ್ದಂತೂ ಸುಳ್ಳಲ್ಲ. ಹುಲಿ ಸಾವಿನ ಸುದ್ದಿ ಬೆಂಗಳೂರಿನ ಅರಣ್ಯ ಭವನಕ್ಕೆ ಬಡಿಯುತ್ತಿದ್ದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆಯವರು ಹುಲಿ ಸಾವಿನ ತನಿಖೆಗೆ ಅದೇಶಿಸಿದ್ದಾರೆ. ಆದರೆ ಹುಲಿ ಸಾವಿನ ತನಿಖೆ ಎನ್.ಟಿ.ಸಿ.ಎ ಗೈಡ್ ಲೈನ್ ಪ್ರಕಾರ ನಡೆದಿದೆಯಾ ಎಂಬ ಅನುಮಾನ ಕಾಡುತ್ತಿದೆ.

car decor
NES Head Office, Balaraja Urs Road, Shivamogga

ಹುಲಿ ರಾಷ್ರೀಯ ಪ್ರಾಣಿ ಆಗಿರುವುದರಿಂದ ಅದರ ಸಾವಿಗೆ ಪೂರಕವಾಗಿ ತನಿಖೆ, ತಪಾಸಣೆ, ವೈದ್ಯಕೀಯ ಪರೀಕ್ಷೆ, ಅಂತ್ಯ ಸಂಸ್ಕಾರ ಮಾಡುವಾಗ ಸರ್ಕಾರದ ಮಾರ್ಗಸೂಚಿಗಳನ್ನು ಚಾಚು ತಪ್ಪದೆ ಅನುಸರಿಸಬೇಕಾಗುತ್ತದೆ. ಅಂಬ್ಲಿಗೋಳದಲ್ಲಿ ಸಾವನ್ನಪ್ಪಿದ ಗಂಡು ಹುಲಿಗೆ ಎಂಟರಿಂದ ಒಂಬತ್ತು ವರ್ಷ ವಯಸ್ಸು ಆಗಿದ್ದು, ಸಧೃಡವಾಗಿತ್ತು. ಈ ಹುಲಿ ಸಾವಿನ ತನಿಖೆಯಲ್ಲಿ ನ್ಯಾಷನಲ್ ಟೈಗರ್ ಪ್ರೊಟೆಕ್ಷನ್ ಆಕ್ಟ್‌ನ ಗೈಡ್ ಲೈನ್ ಫಾಲೋ ಆಗಿಲ್ಲ. ಒಂದು ಹುಲಿ ಸಾವನ್ನಪ್ಪಿದಾಗ, ವಿಭಾಗ ಮಟ್ಟದ ಅರಣ್ಯಾಧಿಕಾರಿ ಹಾಗು ವೈಲ್ಡ್‌ ಲೈಫ್ ವಾರ್ಡನ್ ನೇತೃತ್ವವದಲ್ಲಿ ಒಂದು ತಂಡವೇ ರಚನೆಯಾಗಬೇಕಾಗುತ್ತದೆ. ಕನಿಷ್ಟ ಇಬ್ಬರು ವೈದ್ಯರು ಘಟನಾ ಸ್ಥಳದಲ್ಲಿರಬೇಕಾಗುತ್ತದೆ. ಇದಲ್ಲದೆ ಜಿಲ್ಲಾ ಮಟ್ಟದ ವನ್ಯಜೀವಿ ವೈದ್ಯರ ಉಪಸ್ಥಿತಿಯೂ ಮುಖ್ಯವಾಗಿರುತ್ತದೆ. ಸಬ್ಜೆಕ್ಟ್ ಎಕ್ಸ್ ಪರ್ಟ್ ಅಂದರೆ ವೆಟನರಿ ಕಾಲೇಜಿನ ಪ್ಯಾಥೋಲಾಜಿಸ್ಟ್ ಉಪಸ್ಥಿತಿ ಮುಖ್ಯವಾಗುರುತ್ತದೆ.

ಆದರೆ ಅಂಬ್ಲಿಗೋಳ ಜಲಾಶಯದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡ ಗಂಡು ಹುಲಿ ಮೃತದೇಹದ ವೈದ್ಯಕೀಯ ತಪಾಸಣೆಯಲ್ಲಿ ಈ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಪ್ಯಾಥೋಲಾಜಿಸ್ಟ್ ನೇತ್ರತ್ವದಲ್ಲಿ ನಡೆಯಬೇಕಾದ ವೈದ್ಯಕೀಯ ಪರೀಕ್ಷೆ, ಲಯನ್ ಸಫಾರಿಯ ಔಟ್ ಸೋರ್ಸ್ ವೈದ್ಯರಿಂದ ನಡೆಸಲಾಗಿದೆ.ಇವರು ಓದಿರುವುದು ಬಿ.ವಿಎಸ್ಸಿ ಅಷ್ಟೆ. ಹಾಗಂತ ಈ ವೈದ್ಯರ ಕಾರ್ಯಕ್ಷಮತೆಯನ್ನು ಪ್ರಶ್ನಿಸುತ್ತಿಲ್ಲ. ಬದಲಾಗಿ ಹುಲಿ ಸಾವಿನ ವೈದ್ಯಕೀಯ ಪರೀಕ್ಷೆಯನ್ನ ಪ್ಯಾಧೋಲಾಜಿಸ್ಟ್ ಮಾಡಬೇಕಿತ್ತು ಎಂಬುದು ಮುಖ್ಯ ಉದ್ದೇಶವಾಗಿದೆ. ಇಲ್ಲಿ ಕೊಲ್ಲಲ್ಪಟ್ಟಿರುವುದು ಅಥವಾ ಸಾವನ್ನಪ್ಪಿರುವುದು ಕುರಿ ಕೋಳಿ ಅಲ್ಲ ಎಂಬ ಪರಿಜ್ಞಾನವೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಇದ್ದಂತೆ ಇಲ್ಲ. ಇಲ್ಲಿ ಎನ್.ಟಿ.ಸಿ.ಎ ಗೈಡ್ ಲೈನ್ ಅನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.ಈ ಬಗ್ಗೆ ಅರಣ್ಯ ಭವನದಲ್ಲಿರುವ ಚೀಫ್ ವೈಲ್ಡ್ ಲೈಫ್ ವಾರ್ಡನ್ ಸ್ಷಷ್ಟನೇ ನೀಡಿ, ಹುಲಿ ಸಾವಿಗೆ ನ್ಯಾಯ ಕೊಡುವರೇ…ಎಂಬದು ಮಿಲಿಯನ್ ಡಾಲರ್ ಪ್ರಶ್ಮೆಯಾಗಿದೆ. ಅಂಬ್ಲಿಗೋಳ ಹುಲಿ ಸಾವಿನ ತನಿಖೆಯ ಬಗ್ಗೆ ಪ್ರಾಣಿಪ್ರಿಯರು ವನ್ಯಜೀವಿ ತಜ್ಞರು ಧ್ವನಿ ಎತ್ತಬೇಕಿದೆ.

SUMMARY | A national policy has been formulated to protect tigers when the number of tigers in the country is only around 2700.

KEYWORDS | tiger, death, ambligola, forest department,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಬರನಾಡಾಗುತ್ತಿದೆಯಾ ಮಲೆನಾಡು ? ಯಾಕಿಷ್ಟು ತಾಪಮಾನ ಏರಿಕೆ?
Next Article ಮಂಗನ ಕಾಯಿಲೆಗೆ ತೀರ್ಥಹಳ್ಳಿಯ ಮಹಿಳೆ ಬಲಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

JP STORY

ಶರೋನನ್ನ ಇಂಚಿಂಚು ಕೊಂದ ಗ್ರೀಷ್ಮಾಳಿಗೆ ಮರಣದಂಡನೆ | ಪ್ರೀತಿ ಕೊಂದ ಕೊಲೆಗಾತಿಯ ರಿಯಲ್‌ ಕಹಾನಿ!

By 13

ಬೀದಿ ಬದಿ ದುಡಿಮೆಗೆ ಸಂಕಷ್ಟ | ಸಂತೆಯಷ್ಟೆ ಅಲ್ಲ, ಗಾಂಧಿ ಬಜಾರ್‌ನಿಂದ ಪುಟ್‌ಪಾತ್‌ ವ್ಯಾಪಾರಿಗಳ ತೆರವಿಗೆ ಡಿಸಿಗೆ ಅಹವಾಲು

By 13
JP STORY

Shimoga Ganapathi | ಹಬ್ಬಕ್ಕೆ ಪೊಲೀಸ್‌ ರೆಡಿ | ಹಳೆ ವಿಡಿಯೋ ನೋಡಿ ಕೇಸ್‌ | ‍‍ಪ್ಲೆಕ್ಸ್‌ಗೆ ಪರ್ಮಿಟ್‌ ಪಕ್ಕಾ | ಎಸ್‌ಪಿ ಹೇಳಿದ ಐದು ಪಾಯಿಂಟ್ಸ್‌

By 13

ಖಾತೆ ಕೇಳ್ಬೇಡಿ, ಇ ಖಾತೆ ಆಗಿಯೇ ಇಲ್ಲ ಬಿಡಿ | ಜನರಿಗೆ ಸಂಕಷ್ಟ, ಪಾಲಿಕೆಗೆ ದಸರಾ? | ಸಚಿವರೇ ಇತ್ತ ನೋಡಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up