Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

Karate Championship :  ಶಿವಮೊಗ್ಗದಲ್ಲಿ 6ನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ, ಬೃಹತ್​ ಟ್ರೋಫಿ ಅನಾವರಣ, ಪಂದ್ಯಾವಳಿಗೆ ಖ್ಯಾತ ಚಿತ್ರನಟ ಆಗಮನ 

prathapa thirthahalli
Last updated: July 17, 2025 12:30 pm
Prathapa thirthahalli - content producer
Share
SHARE

Karate Championship :  ಶಿವಮೊಗ್ಗದಲ್ಲಿ 6ನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ : ಬೃಹತ್​ ಟ್ರೋಫಿ ಅನಾವರಣ 

ಶಿವಮೊಗ್ಗ: ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಶನ್ ವತಿಯಿಂದ 6ನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಆಗಸ್ಟ್ 9 ಮತ್ತು 10 ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ವಿನೋದ್ ಹೇಳಿದರು.

ಅಸೋಸಿಯೇಶನ್ 2010 ರಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಜೊತೆಗೆ ಇಂಡೋ-ಶ್ರೀಲಂಕಾ ಹಾಗೂ ಇಂಡೋ-ನೇಪಾಳ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ದಕ್ಷಿಣ ಭಾರತದ ಅತಿ ದೊಡ್ಡ ಕರಾಟೆ ಪಂದ್ಯಾವಳಿಯಾದ ಶಿವಮೊಗ್ಗ ಓಪನ್ 6ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿನೋದ್ ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಬೃಹತ್ ಕರಾಟೆ ಪಂದ್ಯಾವಳಿಗೆ ಅಮೆರಿಕ, ಶ್ರೀಲಂಕಾ, ನೇಪಾಳ ಸೇರಿದಂತೆ ದೇಶದ ಸುಮಾರು 12 ರಾಜ್ಯಗಳಿಂದ ಅಂದಾಜು 1500 ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆಯಿದೆ. ಪಂದ್ಯಾವಳಿಯು ಕತಾ ಮತ್ತು ಕುಮತಿ ವಿಭಾಗಗಳನ್ನು ಒಳಗೊಂಡಿರುತ್ತದೆ. 6 ರಿಂದ 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಒಬ್ಬರಿಗೆ 1500 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ  ಎಂದು ವಿವರಿಸಿದರು.

ಭಾರತದ ಖ್ಯಾತ ಚಿತ್ರನಟ ಹಾಗೂ ಕರಾಟೆ ಬ್ಲಾಕ್ ಬೆಲ್ಟ್ ಸುಮನ್ ತಲ್ವಾರ್ ಮತ್ತು ಅಮೆರಿಕದಿಂದ ಗ್ರಾಂಡ್ ಮಾಸ್ಟರ್ ಒಬ್ಬರು ಈ ಪಂದ್ಯಾವಳಿಗೆ ಆಗಮಿಸಲಿದ್ದಾರೆ. ಶಿವಮೊಗ್ಗದಿಂದಲೇ ಸುಮಾರು 200 ಸ್ಥಳೀಯ ಸ್ಪರ್ಧಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

ನಟ ಸುಮನ್​ ತಲ್ವರ್​
ನಟ ಸುಮನ್ ತಲ್ವಾರ್

Karate Championship ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಆಕರ್ಷಕ ಪದಕ, ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು. ಅತಿ ಹೆಚ್ಚು ಸ್ಪರ್ಧಿಗಳನ್ನು ಹೊಂದಿರುವ ತಂಡಕ್ಕೆ ವಿಶೇಷ ಬಹುಮಾನ ಸೇರಿದಂತೆ ಓವರ್‌ಆಲ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಪ್ರದಾನ ಮಾಡಲಾಗುವುದು ಎಂದು ವಿನೋದ್ ತಿಳಿಸಿದರು. ಪಂದ್ಯಾವಳಿಗೆ ಬರುವ ಸ್ಪರ್ಧಿಗಳಿಗೆ ವಸತಿ, ಊಟ ಮತ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಏಷಿಯನ್ ಮತ್ತು ರಾಷ್ಟ್ರೀಯ ತೀರ್ಪುಗಾರರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಆಗಸ್ಟ್ 9 ಮತ್ತು 10 ರಂದು ನಡೆಯುವ ಕರಾಟೆ ಪಂದ್ಯಾವಳಿಯಲ್ಲಿ ವಿಜೇತರಾಗುವ ಅಭ್ಯರ್ಥಿಗಳಿಗೆ ನೀಡುವ 8 ಟ್ರೋಫಿಗಳನ್ನು ಅನಾವರಣಗೊಳಿಸಲಾಯಿತು. ಕರಾಟೆ ವಿಜೇತರಿಗೆ ಇಷ್ಟು ದೊಡ್ಡ ಟ್ರೋಫಿಗಳನ್ನು ನೀಡುತ್ತಿರುವುದು ಇದೇ ಮೊದಲು ಎಂದು ವಿನೋದ್ ಹೇಳಿದರು.

Karate Championship ವಿಜೇತರಿಗೆ ನೀಡುವ ಟ್ರೋಫಿ ಅನಾವರಣ
Karate Championship ವಿಜೇತರಿಗೆ ನೀಡುವ ಟ್ರೋಫಿ ಅನಾವರಣ

 

Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Dam Water Level july 28 Bhadra dam inflow and outflow : ಭದ್ರ ಜಲಾಶಯದಲ್ಲಿ ಒಳಹರಿವು ಹಾಗೂ ಹೊರ ಹರಿವು ಎಷ್ಟಿದೆ ಇವತ್ತು
Next Article SIT Probeಮುಖಂಡರ ಪ್ರತಿಭಟನೆ SIT Probe : ಧರ್ಮಸ್ಥಳ ಪ್ರಕರಣವನ್ನು ಕೂಡಲೇ SIT ತನಿಖೆಗೆ ವಹಿಸಿ :  SDPI ಆಗ್ರಹ
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIVAMOGGA NEWS TODAY

60 ವರ್ಷ ಮೇಲ್ಪಟ್ಟವರಿಗೆ ಗನ್‌ ಲೈಸನ್ಸ್‌ ಕೊಡಿ | ಕಿಮ್ಮನೆ ರತ್ನಾಕರ್‌

By 131
Trading advertisement Current shock : Rippon pete Dasara Sports cyber crimeThreat case
SHIVAMOGGA NEWS TODAY

ನಾಗರಬಾವಿಯಲ್ಲಿ ವಿದ್ಯುತ್ ಸ್ಪರ್ಶ: ತಾಯಿ-ಮಗನಿಗೆ ಗಂಭೀರ ಗಾಯ

By Prathapa thirthahalli
SHIVAMOGGA NEWS TODAY

19 ವರ್ಷದ ಯುವಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಶಿವಮೊಗ್ಗ ನ್ಯಾಯಾಲಯ |  ಕಾರಣವೇನು

By 131
Wife Conspires to Murder Husband in Shivamogga
SHIVAMOGGA NEWS TODAYSTATE NEWS

ಶಿವಮೊಗ್ಗದಲ್ಲಿಯು ಪರಪುರುಷನ ಜೊತೆ ಸೇರಿ, ಪತಿಯ ಕೊಲೆಗೆ ಯತ್ನ ಪ್ರಕರಣ! ಪತ್ನಿ & ನಾಲ್ವರ ವಿರುದ್ಧ ಕೇಸ್!

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up