Thursday, 31 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಆನೆ ಬಗ್ಗೆ ಅನುಭವಹೊಂದಿದ್ದ ಡಾಕ್ಟರ್ ವಿನಯ್ ಸೇವೆ ಅರಣ್ಯ ಇಲಾಖೆಗೆ ಅತ್ಯಗತ್ಯವಾಗಿದೆ-ಜೆಪಿ ಬರೆಯುತ್ತಾರೆ.   

131
Last updated: April 5, 2025 11:45 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 5, 2025

ಡಾಕ್ಟರ್ ವಿನಯ್ ಶಿವಮೊಗ್ಗ ವನ್ಯಜೀವಿ ವಿಭಾಗದಲ್ಲಿ ವನ್ಯಜೀವಿ ವೈದ್ಯರಾಗಿ ಒಂಬತ್ತು ವರ್ಷ ಏಳು ತಿಂಗಳು ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಅರಣ್ಯ ಇಲಾಖೆಗೆ ದೊಡ್ಡ ಹೆಸರನ್ನು ತಂದುಕೊಟ್ಟಿದೆ. ಪಶುಸಂಗೋಪನಾ ಇಲಾಖೆಯಿಂದ ಅರಣ್ಯ ಇಲಾಖೆಗೆ ಡೆಪ್ಟೇಷನ್ ಅಡಿ ಸೇವೆಗೆ ಬಂದಿದ್ದ ವಿನಯ್ ತಮ್ಮ ಸೇವಾವಧಿಯಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಆರಂಭದಲ್ಲಿ ಸಕ್ರೆಬೈಲು ಮತ್ತು ತ್ಯಾವರೆಕೊಪ್ಪ ಹುಲಿಸಿಂಹಧಾಮ ಎರಡು ವಿಭಾಗಗಳಲ್ಲೂ ಸೇವೆ ಸಲ್ಲಿಸಿದ ವಿನಯ್ ಹುಲಿ ಸಿಂಹಗಳ ಆರೈಕೆ ಮಾಡಿದ್ದಾರೆ. ಸಾವಿನ ಮನೆ ಕದ ತಟ್ಟಿದ್ದ ಜಿಂಕೆ, ಹುಲಿ ಸಿಂಹಗಳನ್ನು ಬದುಕುಳಿಸಿದ ಕೀರ್ತಿ ವಿನಯ್ ಗೆ ಸಲ್ಲುತ್ತದೆ. ತದನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಶಿವಮೊಗ್ಗ ವನ್ಯಜೀವಿ ವಿಭಾಗದಲ್ಲಿ ವನ್ಯಜೀವಿ ವೈದ್ಯರಾಗಿ ಸೇವೆ ಸಲ್ಲಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಕ್ರೆಬೈಲು ಆನೆ ಬಿಡಾರದ ವ್ಯವಸ್ಥೆ ಸುಧಾರಣೆ

ವಿನಯ್ ಸಕ್ರೆಬೈಲು ಆನೆ ಬಿಡಾರದ ಆನೆಗಳ ಲಾಲನೆ ಪಾಲನೆಯಲ್ಲಿ ಹೆಚ್ಚು ಸಕ್ರೀಯವಾದ್ರು. ಆನೆಗಳನ್ನು ತಮ್ಮ ಕುಟುಂಬದ ಭಾಗವೆಂದೇ ಆರೈಕೆ ಮಾಡಿದ್ರು. ವೃತ್ತಿಯನ್ನು ಪ್ಯಾಷನ್ ಆಗಿ ತೆಗೆದುಕೊಂಡಿರುವ ಅವರು ಪ್ರತಿದಿನ ಬಿಡಾರಕ್ಕೆ ಹಾಗು ಖೆಡ್ಡಾಗೆ ಭೇಟಿ ನೀಡಿ ಆನೆಗಳ ಆರೋಗ್ಯ ತಪಾಸಣೆ ಮಾಡುತ್ತಿದ್ದರು. 

car decor
NES Head Office, Balaraja Urs Road, Shivamogga

ಕಾಡಾನೆ ದಾಳಿಗೊಳಗಾದ ಸಾಕಾನೆಗಳನ್ನು ಬದುಕಿಸಿದ ವೈದ್ಯ

ಬಿಡಾರದಲ್ಲಿ ಪ್ರತಿದಿನ ಕಾಡು ಸೇರುವ ಸಾಕಾನೆಗಳ ಮೇಲೆ ಕಾಡಾನೆಗಳು ದಾಳಿ ಮಾಡುತ್ತಿವೆ. ಅರಿತವಾದ ದಂತ ಸಾಕಾನೆಗಳ ಚರ್ಮವನ್ನ ಸೀಳಿಕೊಂಡು ಸಾವಿನತ್ತ ನೂಕುತ್ತವೆ. ಇಂತಹ ಸಂದರ್ಭದಲ್ಲಿ ವಿನಯ್ ದಾಳಿಗೊಳಗಾದ ಆನೆಗಳಿಗೆ ಉತ್ತಮ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ. 

ಡಾರ್ಟ್ ಎಕ್ಸ್ ಪರ್ಟ್ ಡಾಕ್ಟರ್ ವಿನಯ್

ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ವಿನಯ್ ಪಾತ್ರ ಗಮನಾರ್ಹವಾಗಿದೆ. ಆನೆಗಳ ದೇಹದ ಗಾತ್ರ ನೋಡಿಯೇ ಇಂತಿಷ್ಟು ಎಂಎಲ್ ಅರವಳಿಕೆ ಪ್ರಯೋಗಿಸುವ ಕಲೆ ವಿನಯ್ ಗೆ ಕರಗತವಾಗಿದೆ. ಆನೆಯನ್ನು ನೋಡುತ್ತಿದ್ದಂತೆ ನಿರ್ಧಿಷ್ಟ ಗುರಿಯಿಟ್ಟು ತಾವೇ ಡಾರ್ಟ್ ಮಾಡಿ ಆನೆಗೆ ಅರವಳಿಕೆ ಮದ್ದು ಪ್ರಯೋಗಿಸುತ್ತಿದ್ದರು. ಡಾರ್ಟ್ ಮತ್ತು ಆಂಟಿ ಡಾರ್ಟ್ ಮಾಡುವಲ್ಲಿ ವಿನಯ್ ಎತ್ತಿದ ಕೈ. ವಿನಯ್ ಇದ್ದ ಆನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಹಿನ್ನಡೆ ಎಂಬುದೇ ಇರಲಿಲ್ಲ. ಶಿವಮೊಗ್ಗ ಚಿಕ್ಕಮಗಳೂರು ಹಾಸನ ಚೆನ್ನಗಿರಿ.ದಾವಣಗೆರೆ ಭಾಗಗಳಲ್ಲಿ ಕಾಡಾನೆ ಸೆರೆಹಿಡಿಯುವ ಕಾರ್ಯಚರಣೆಯಲ್ಲಿ ವಿನಯ್ ಪ್ರಮುಖ ಪಾತ್ರ ವಹಿಸಿದ್ದಾರೆ.

 ವೀನಿಂಗ್ ನಲ್ಲಿ ಎತ್ತಿದ ಕೈ

ತಾಯಿ ಮತ್ತು ಮರಿಯನ್ನ ಬೇರ್ಪಡಿಸುವ ಪ್ರಕ್ರೀಯೆಗೆ ವೀನಿಂಗ್ ಎಂದು ಕರೆಯುತ್ತಾರೆ. ಯಾವುದೇ ಆನೆ ಮರಿಹಾಕಿದಾಗ ಎರಡು ವರ್ಷ ಎರಡು ಅಥವಾ ಮೂರು ತಿಂಗಳುಗಳ ಕಾಲ ಅವು ಒಟ್ಟಿಗೆ ಇರುತ್ತವೆ.ತಾಯಿಯನ್ನು ಬಿಟ್ಟು ಮರಿಯಾಗಲಿ,ಮರಿಯನ್ನು ಬಿಟ್ಟು ತಾಯಿಯಾಗಲಿ ಇರುವುದಿಲ್ಲ.ಇವುಗಳನ್ನು ಬಂಧಮುಕ್ತಗೊಳಿಸುವುದು ಎಂದರೆ ಅದು ಸುಲಭದ ಮಾತಲ್ಲ.ಇದಕ್ಕಾಗಿ ದೊಡ್ಡ ತಯಾರಿಯನ್ನೇ ಮಾವುತರು ಮತ್ತು ಕಾವಾಡಿಗಳು ನಡೆಸಬೇಕಾಗುತ್ತದೆ. ವೀನಿಂಗ್ ಮಾಡುವ ದಿನದಂದು ಮುಂಜಾಗೃತೆಯಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತದೆ. ತಾಯಿ ಮಗು ಬೇರ್ಪಡಿಸುವಿಕೆ ಕಾರ್ಯವನ್ನು ವಿನಯ್ ಮರಿಯಾನೆಗೆ ತೊಂದರೆಯಾಗದ ರೀತಿ ನೆರವೇರಿಸಿದ್ದಾರೆ.

ಆನೆ ದಾಳಿ ವಿನಯ್ ಬದುಕಿದ್ದೇ ರೋಚಕ

ಆನೆಯ ದಾಳಿಯಿಂದ ಸಾವನ್ನು ಪಾರಾದವನಿಗೆ ಮತ್ತೆ ಸಾವೇ ಇಲ್ಲ ಎನ್ನುತ್ತಾರೆ ಹಿರಿಯರು, ಇದು ವನ್ಯಜೀವಿ ವೈದ್ಯ ಡಾಕ್ಟರ್ ವಿನಯ್ ಪಾಲಿಗೆ ಸತ್ಯವಾಗಿದೆ. ಮೂರು ಬಾರಿ ಆನೆ ದಾಳಿಗೆ ಒಳಗಾದ ವಿನಯ್ ಸಾವನ್ನು ಗೆದ್ದಿದ್ದೇ ಒಂದು ರೋಚಕ ಸಂಗತಿ. ಎರಡು ಬಾರಿ ಆನೆ ದಾಳಿಯಿಂದ ಪಾರಾದ್ರೂ, ಮೂರನೇ ಬಾರಿ ವಿನಯ್ ಪಾಲಿಗೆ ಸಾವು ಕಣ್ಣ ಮುಂದೆ ಬಂದು ನಿಂತಿತ್ತು. ಹೌದು 11-04-23  ರಂದು ಕಾಡಾನೆ ತುಳಿತಕ್ಕೆ ಒಳಗಾದ ವಿನಯ್ ಬದುಕುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಕೇವಲ ಒಂದು ತಿಂಗಳ ಅವಧಿಯಲ್ಲಿ ಸಾವನ್ನೇ ಗೆದ್ದು, ಸಹಜ ಸ್ಥಿತಿಗೆ ಮರುಳಿದ್ರು ಡಾಕ್ಟರ್ ವಿನಯ್. 

ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕಿನ ಗಡಿಭಾಗದ ಗ್ರಾಮಸ್ಥರಿಗೆ ತೀವ್ರ ಕಿರುಕುಳ ನೀಡುತ್ತಿದ್ದ ಸುಮಾರು 12 ವರ್ಷದ ಕಾಡಾನೆ ಹೊಲಕ್ಕೆ ಹೋಗಿದ್ದ ಓರ್ವ ಬಾಲಕಿಯನ್ನು ಬಲಿಪಡೆದಿತ್ತು. ಸುಮಾರು ಐದು ಮಂದಿಗೆ ಗಾಯಗೊಳಿಸಿದ ಕಾಡಾನೆಯನ್ನು ಸೆರೆಹಿಡಿಯಲು ಗ್ರಾಮಸ್ಥರಿಂದ ಒತ್ತಡ ಹೆಚ್ಚಾಗಿತ್ತು. ಸಕ್ರೆಬೈಲು ಬಿಡಾರದಿಂದ ಕುಮ್ಕಿ ಆನೆಗಳನ್ನು ಕರೆದೊಯ್ಯಲಾಗಿತ್ತು. ಬೆಳಗಿನ ಜಾವ, ಕುಮ್ಕಿ ಆನೆಗಳಿದ್ದ ಕ್ಯಾಂಪ್ ತೊರೆದ ತಂಡ ಜೀನಹಳ್ಳಿಯವರಿಗೆ ಜೀಪಿನಲ್ಲಿ ಫಾಲೋ ಮಾಡಿಕೊಂಡು ಬಂದಿದೆ. ಆನೆ ಸಾಗಿದ ಕಾಲ್ಗುರುತು ಕಾರ್ಯಾಚರಣೆಗೆ ಹುಮ್ಮಸ್ಸು ನೀಡಿತ್ತು. ಬೆಳಿಗ್ಗೆ ಸುಮಾರು 8.30 ರ ಸಮಯ. ವಿನಯ್ ಮತ್ತು ತಂಡ ಜೀನಹಳ್ಳಿಯ ಬೀಳಿ ಪ್ರದೇಶದಲ್ಲಿ ಕಾಡಾನೆ ಇರುವುದನ್ನು ಪತ್ತೆ ಹಚ್ಚಿತು. ತಕ್ಷಣ ಆನೆಯನ್ನು ಡಾರ್ಟ್ ಮಾಡಲು ಉಳಿದ ವೈದ್ಯರು ಗನ್ ಸಮೇತ ಸನಿಹಕ್ಕೆ ಅಣಿಯಾದ್ರು..ಜಾಲಿ ಮರಗಳ ಪೊದೆಯೊಳಗೆ ಹೋಗಿದ್ದ ಕಾಡಾನೆ, ಒಮ್ಮಲೆ ತಿರುಗಿ ದಾಳಿಗೆ ಅಣಿಯಾಯ್ತು. ಗಾಯಾಳು ವಿನಯ್ ಗೆ ತಕ್ಷಣ ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಯ್ತು. ಹೆಚ್ನಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯ್ತು.

ಪುನರ್ಜನ್ಮ ಪಡೆದು ಮತ್ತೆ ಆನೆ ಸೇವೆಗೆ ಅಣಿಯಾದ ವೈದ್ಯ

ಹಲವು ತಿಂಗಳು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದ ವಿನಯ್ ಗುಣಮುಖರಾಗುತ್ತಿದ್ದಂತೆ ಮತ್ತೆ ಸಕ್ರೆಬೈಲಿನ ಆನೆಗಳ ಸೇವೆಗೆ ಅಣಿಯಾದ್ರು. ತಮ್ಮ ಮೇಲೆ ದಾಳಿ ಮಾಡಿದ ಆನೆಯನ್ನು ಕಂಡು ಮೌನವಾದರು. ಆನೆ ದಾಳಿಗೆ ತುತ್ತಾದರೂ, ವಿನಯ್ ಎದೆಗುಂದದೇ ಮತ್ತೇ ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡರು.‌ ಇವರ ಸೇವೆಯನ್ನು ಗುರುತಿಸಿ ಅರಣ್ಯ ಮಂತ್ರಿಗಳು ಗೌರವಿಸಬೇಕಿದೆ.  9.7 ವರ್ಷ ಸೇವೆ ,ಸಲ್ಲಿಸಿದ ವಿನಯ್ ಪುನಃ ಪುಶುಸಂಗೋಪನಾ ಇಲಾಖೆಗೆ ಮರಳಿದ್ದಾರೆ. ಅವರ ಅನುಭವ ಅರಣ್ಯ ಇಲಾಖೆಗೆ ಅತ್ಯಗತ್ಯವಾಗಿದೆ.

SUMMARY | Dr. Vinay has served as a wildlife doctor in Shivamogga wildlife division for nine years and seven months

KEYWORDS | Dr Vinay, wildlife doctor, Shivamogga, 

malenadutoday add
Share This Article
Facebook Whatsapp Whatsapp Telegram Threads Copy Link
Previous Article car accident in maluru : ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಅಧಿಕಾರಿಯ ಅಸಭ್ಯ ವರ್ತನೆ, ಸೂಕ್ತ ಕ್ರಮ ಕೈಗೊಳ್ಳಿ | ವಿಜಯಕುಮಾರ್
Next Article ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಗುಡ್ ನ್ಯೂಸ್ | ಜನರಿಗೆ ಸಿಗಲಿದೆ ಈ ಅನುಕೂಲ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಗ್ರಾಹಕರಿಗೆ ಬಿಗ್‌ ಶಾಕ್‌ | ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

By 131
Haratalu halappa ಹರತಾಳು ಹಾಲಪ್ಪ
SHIVAMOGGA NEWS TODAY

Haratalu halappa :  ಸಿಗಂದೂರು ಸೇತುವೆ ಉದ್ಘಾಟನೆ: ಸಿಎಂಗೆ ದಾರಿ ತಪ್ಪಿಸಲಾಗಿದೆ – ಮಾಜಿ ಸಚಿವ ಹಾಲಪ್ಪ ಆರೋಪ

By Prathapa thirthahalli
SHIVAMOGGA NEWS TODAY

ಈದ್ಗಾ ಮೈದಾನಕ್ಕೆ ಷರತ್ತು ಬದ್ದ ಸಾರ್ವಜನಿಕ ಅವಕಾಶ | ಮಸ್ಜಿದ್‌ ಮುಖಂಡರು ಹೇಳಿದ್ದೇನು

By 131
police complaint
SHIMOGA NEWS LIVESHIVAMOGGA NEWS TODAYSTATE NEWS

Historic Gathering Malnad Seers / ಇವತ್ತು ಮಲೆನಾಡು ಮಠಾಧೀಶರ ಧರ್ಮಸಭೆ! ಏನು ವಿಶೇಷ ಗೊತ್ತಾ!?

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up