ಹಿಂದೂ ಮಹಾಸಭಾ ಮೆರವಣಿಗೆ ಈಗ ಎಲ್ಲಿದೆ..?

prathapa thirthahalli
Prathapa thirthahalli - content producer

hindu mahasabha ganapathi :

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ನಗರಾದ್ಯಂತ ವಿಜೃಂಭಣೆಯಿಂದ ಸಾಗುತ್ತಿದ್ದು, ಪ್ರಸ್ತುತ ಮೆರವಣಿಗೆ ಶ್ರೇಷ್ಠಿ ಪಾರ್ಕ್‌ ತಲುಪಿದೆ.

ಸಾವಿರಾರು ಜನರು ಈ ರಾಜಬೀದಿ ಉತ್ಸವದಲ್ಲಿ ಭಾಗವಹಿಸಿದ್ದು, ಚಂಡೆ ಹಾಗೂ ತಮಟೆ ವಾದ್ಯಗಳ ಶಬ್ದಕ್ಕೆ ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಿದ್ದಾರೆ. ಎಲ್ಲರ ಮುಖದಲ್ಲಿ ಸಂಭ್ರಮ ಮನೆ ಮಾಡಿದ್ದು, ಭಕ್ತಿ ಮತ್ತು ಸಡಗರದ ವಾತಾವರಣ ನಿರ್ಮಾಣವಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ನಗರದಾದ್ಯಂತ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ.

hindu mahasabha ganapathi : 

Share This Article