ಬಾನು ಮುಷ್ತಾಕ್ ದಸರಾ ಉದ್ಘಾಟನೆ : ಕೆ ಎಸ್​ ಈಶ್ವರಪ್ಪ ಹೇಳಿದ್ದೇನು.

prathapa thirthahalli
Prathapa thirthahalli - content producer

Dasara festival : ಬಾನು ಮುಷ್ತಾಕ್ ಚಾಮುಂಡಿ ದೇವಿಗೆ ಪೂಜೆ ಮಾಡಿ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಜನರ ಮುಂದೆ ಸ್ಪಷ್ಟೀಕರಣ ನೀಡಿದರೆ ದಸರಾ ಉದ್ಘಾಟನೆಗೆ ಯಾವುದೇ ತೊಂದರೆ ಇಲ್ಲ ಎಂದು ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಹೇಳಿದರು.

ಇಂದು ನಗರದಲ್ಲಿ  ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದಸರಾ ಉದ್ಘಾಟನೆಗೆ  ಮುಖ್ಯಮಂತ್ರಿಗಳು ಬಾನು ಮುಷ್ತಾಕ್​ ರವರವರಿಗೆ ಉದ್ಘಾಟನೆ ಮಾಡಲು ಹೇಳಿದ್ದಾರೆ. ಇದರ ಬಗ್ಗೆ ನಾನು ಟೀಕೆ ಮಾಡಲು ಇಷ್ಟ ಪಡುವುದಿಲ್ಲ. ನಮ್ಮ ರಾಜ್ಯದಲ್ಲಿ ದಸರಾವನ್ನು ಬಹಳಾ ವೈಭವದಿಂದ ನಡೆಸಲಾಗುತ್ತದೆ. ಭಾನು ಮುಸ್ತಾಕ್ ಗೆ ಈ ಬಗ್ಗೆ ಆಸಕ್ತಿ ಇದ್ದು ಒಪ್ಪಿಕೊಂಡಿದ್ದರೆ ತೊಂದರೆ ಇಲ್ಲ. ಈ ಕುರಿತು ಬಾನು ಮುಷ್ತಾಕ್  ಚಾಮುಂಡಿ ದೇವಿಗೆ  ಪೂಜೆ ಮಾಡಿ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಜನರ ಮುಂದೆ ಸ್ಪಷ್ಟೀಕರಣ ನೀಡಬೇಕು. ಇಲ್ಲದಿದ್ದರೆ ಮುಖ್ಯ ಮಂತ್ರಿಗಳು ಹಾಗೂ ಭಾನು ಮುಸ್ತಾಕ್ ರವರು ಹಿಂದೂಗಳಿಗೆ ಅಪಮಾನ ಮಾಡಿದಂತೆ ಆಗುತ್ತದೆ ಎಂದರು.

- Advertisement -

Dasara festival

 

Share This Article