ಲಕ್ಷ ಲಕ್ಷ ಸಂತ್ರಸ್ತರಿಗೆ ಅನುಕೂಲವಾಗುವ ನಿಜಕ್ಕೂ ಒಳ್ಳೆಯ ಯೋಜನೆ ಘೋಷಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ

Nitin Gadkari announces cashless treatment, cashless treatment scheme for road accident victims

ಲಕ್ಷ ಲಕ್ಷ ಸಂತ್ರಸ್ತರಿಗೆ ಅನುಕೂಲವಾಗುವ ನಿಜಕ್ಕೂ ಒಳ್ಳೆಯ ಯೋಜನೆ ಘೋಷಿಸಿದ ಕೇಂದ್ರ ಸಚಿವ ನಿತಿನ್‌ ಗಡ್ಕರಿ
Nitin Gadkari announces cashless treatment, cashless treatment scheme for road accident victims

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 9, 2025 ‌‌   ‌

ಇನ್ಮುಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ದೇಶಾದ್ಯಂತ ನಗದು ರಹಿತ ಚಿಕಿತ್ಸೆ ಯೋಜನೆ ಸಿಗಲಿದೆ. ಈ ಸಂಬಂಧ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. 

ಈ ಯೋಜನೆ ಅನ್ವಯ ಅಪಘಾತದಲ್ಲಿ ಗಾಯಗೊಂಡವರಿಗೆ 7 ದಿನಗಳ ಕಾಲ ಗರಿಷ್ಠ 1.5 ಲಕ್ಷ ರೂ.ವರೆಗೆ ನಗದು ರಹಿತವಾಗಿ ಚಿಕಿತ್ಸೆ ದೊರೆಯಲಿದೆ. ಅದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. 

ಇನ್ನೂ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಕ್ಕೂ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಗಡ್ಕರಿ ಘೋಷಿಸಿದ್ದಾರೆ. ಹೆದ್ದಾರಿ ಮಾತ್ರವಲ್ಲದೆ, ಯಾವುದೇ ರಸ್ತೆಯಲ್ಲಿ ವಾಹನ ಅಪಘಾತವಾದರೂ ಈ ಯೋಜನೆಯಡಿ ಪ್ರಯೋಜನ ದೊರೆಯಲಿದೆ.

ಈಗಾಗಲೇ ಛತ್ತೀಸ್‌ಗಢದಲ್ಲಿ ಪ್ರಾಯೋಗಿಕವಾಗಿ ಆನಂತರ 6 ರಾಜ್ಯಗಳಿಗೆ ವಿಸ್ತರಿಸಲಾಗಿರುವ ಈ ಯೋಜನೆ ಯನ್ನು 2025ರ ಮಾರ್ಚ್ ವೇಳೆಗೆ ದೇಶಾದ್ಯಂತ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್‌ ಘಡ್ಕರಿ ಮಾಹಿತಿ ನೀಡಿದ್ದಾರೆ

SUMMARY |  Nitin Gadkari announces nationwide cashless treatment scheme for road accident victims


KEY WORDS |‌ Nitin Gadkari announces cashless treatment, cashless treatment scheme for road accident victims