ಹೃದಯಾಘಾತ | ಬೆಜ್ಜವಳ್ಳಿಯಲ್ಲಿ ಅರಣ್ಯ ಸಿಬ್ಬಂದಿ ಸಾವು
30-year-old forest guard, Basavaraj, died of a heart attack in Shivamogga district. He was a resident of Bejjavalli and worked as a guard in the Mahishi beat
SHIVAMOGGA | MALENADUTODAY NEWS | May 28, 2024 ಮಲೆನಾಡು ಟುಡೆ
ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 30 ವರ್ಷದ ಬಸವರಾಜ್ ಮೃತರು. ಇವರು ಮಹಿಶಿ ಬೀಟ್ನಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ವಿವಿಧ ಆನೆ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ಇವರು ಬೆಜ್ಜವಳ್ಳಿಯಲ್ಲಿರುವ ನಿವಾಸದಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಯಿಂದ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸ್ಥಳೀಯರು ಹೇಳುವಂತೆ ಬಸವರಾಜ್ರವರು ಉತ್ತಮ ವ್ಯಕ್ತಿಯಾಗಿದ್ದರು.
ಇನ್ನೂ 30 ನೇ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಇನ್ನೂ ಮೃತರ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.
30-year-old forest guard, Basavaraj, died of a heart attack in Shivamogga district. He was a resident of Bejjavalli and worked as a guard in the Mahishi beat