SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 26, 2025
ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂಭಾಗ 1 ಲಕ್ಷ ಮೌಲ್ಯದ ಸುಮಾರು 14 ಗ್ರಾಂ ತೂಕದ ಬಂಗಾರದ ಬ್ರಾಸ್ಲೈಟ್ನ್ನು ಖದೀಮರು ಎಗರಿಸಿ ಪರಾರಿಯಾಗಿದ್ದರು. ಈ ಹಿನ್ನಲೆ ಜಯದೇವಪ್ಪ ಶಿವಮೊಗ್ಗದ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತಂಡ ರಚಿಸಿ ಕಳ್ಳರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಿಂದ 14 ಗ್ರಾಂ. ತೂಕದ ಬಂಗಾರದ ಬ್ರಾಸ್ಲೈಟ್ನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ 01 ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹಾಸ್ಟೆಲ್ನಲ್ಲಿ ಸೌಕರ್ಯಗಳ ಕೊರತೆ ಜಮೀರ್ ಅಹಮದ್ರಿಗೆ ಪತ್ರ ಬರೆದ ವಿಧ್ಯಾರ್ಥಿನಿಯರು
ಮುಸ್ಲಿಂ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಇಲ್ಲದ ಊಟ ಸೇರಿದಂತೆ ಇನ್ನಿತರೇ ಸಮಸ್ಯೆಗಳು ಕಾಡುತ್ತಿದ್ದು, ಅದನ್ನು ಶೀಘ್ರವೇ ಪರಿಹರಿಸಿ ಕೊಡಿ ಎಂದು ವಸತಿ ಸಚಿವ ಜಮೀರ್ ಅಹ್ಮದ್ಗೆ ವಿದ್ಯಾರ್ಥಿನಿಯರು ಪತ್ರವನ್ನು ಬರೆದಿದ್ದಾರೆ. ನಗರದಲ್ಲಿ ವಿದ್ಯಾರ್ಥಿನಿಯರಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಜಿಲ್ಲೆಯ ವಕ್ಫ್ ಬೋರ್ಡ್ ಅಡಿಯಲ್ಲಿ ಸ್ಥಳೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮುಸ್ಲಿಂ ಹಾಸ್ಟೆಲ್ನ್ನು ನಿರ್ಮಿಸಲಾಗಿದೆ. ಆದರೆ ಆ ಹಾಸ್ಟೆಲ್ನಲ್ಲಿ ಸ್ನಾನಗೃಹ, ಶೌಚಾಲಯ, ಊಟದ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳು ಸರಿ ಇಲ್ಲ ಎಂದು ಆರೋಪಿಸಿ ಅದನ್ನು ಕೂಡಲೇ ಪರಿಹರಿಸಿ ಕೊಡಿ ಎಂದು ಸಚಿವರಿಗೆ ವಿದ್ಯಾರ್ಥಿನಿಯರು ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
ಅಜಿತ್ ನಟನೆಯ ವಿದಾಮುಯರ್ಚಿ ಒಟಿಟಿ ರಿಲೀಸ್ ಡೇಟ್ ಫಿಕ್ಸ್
ತಮಿಳು ನಟ ಅಜಿತ್ ನಟನೆಯ ವಿದಾಮುಯರ್ಚಿ ಚಿತ್ರ ಇದೇ ಮಾರ್ಚ್ 03 ರಂದು ನೆಟ್ಫ್ಲಿಕ್ಸ್ನಲ್ಲಿ ಕನ್ನಡ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಕುರಿತು ನೆಟ್ಫ್ಲಿಕ್ಸ್ ಪೋಸ್ಟರ್ ಒಂದನ್ನು ಬಿಡುಗಡೆಮಾಡಿ ಮಾಹಿತಿಯನ್ನು ಬಹಿರಂಗಪಡಿಸಿದೆ.
SUMMARY | The robbers had snatched a gold bracelet weighing around 14 grams worth Rs 1 lakh in front of Shivamogga railway station.
KEYWORDS | robbers, Shivamogga, gold bracelet, chatpat news,