SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 10, 2025

ಶೆಟ್ಟಿಹಳ್ಳಿ ಕಾಡಿನ ಪರಿಸರ ಆನೆಗಳ ಪಾಲಿಗೆ ನಿಗೂಡ ರಹಸ್ಯವಾಗುತ್ತಿದೆ. ಇಲ್ಲಿ ಆನೆ ಹುಟ್ಟಿದರೂ ಸಾವನ್ನಪ್ಪಿದರೂ,ಅಧಿಕಾರಿಗಳು ಒಂದು ಕತೆ ಹೇಳಿದ್ರೆ..ಕಾಡಿನ ಪರಿಸರವೇ ಮತ್ತೊಂದು ಕಥೆ ಹೇಳುತ್ತದೆ. ಕಾಡಿನ ರಹಸ್ಯದಲ್ಲಿ ಅವಿತು ಹೋದ ಸತ್ಯ ಸಂಗತಿಗಳೇ ಹೆಚ್ಚಿದೆ. ಇಂತಹ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ನಮ್ಮದಷ್ಟೆ. ಇಲ್ಲಿ ಯಾವುದೇ ಅರಣ್ಯಾಧಿಕಾರಿಗಳನ್ನು ಗುರಿ ಮಾಡುವ ಉದ್ದೇಶ ನಮಗಿಲ್ಲ.
ಹೌದು ಇತ್ತೀಚೆಗೆ ಸಕ್ರೆಬೈಲು ಆನೆ ಬಿಡಾರದ ಹೆಣ್ಣು ಸಾಕಾನೆಗಳು ಕಾಡನ್ನ ಬಿಟ್ಟು ಬಿಡಾರಕ್ಕೆ ಬರುತ್ತಿಲ್ಲ. ಹೇಮಾವತಿ, ಕುಂತಿ, ಭಾನುಮತಿ ನೇತ್ರಾವತಿ ಹೆಣ್ಣಾನೆಗಳು ಕಾಡನ್ನು ಸೇರಿಕೊಂಡು ಹಲವು ದಿನಗಳೇ ಆಗಿವೆ. ಮಾವುತ ಕಾವಾಡಿಗಳು ಏಷ್ಟೇ ಪ್ರಯತ್ನ ಪಟ್ಟರೂ ಹೆಣ್ಣಾನೆಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕಾಡಾನೆಗಳ ಜೊತೆ ಭಾಂದವ್ಯ ಬೆಳೆಸಿಕೊಂಡಿರುವ ಹೆಣ್ಣಾನೆಗಳು ತಿಂಗಳು ಕಾಲ ಸಂಪರ್ಕದಲ್ಲಿದ್ದು, ಗರ್ಭಾವಸ್ಥೆ ತಲುಪುತ್ತಿವೆ. ವಿಪರ್ಯಾಸವೆಂದರೆ, ಗರ್ಭಾವಸ್ಥೆ ತಲುಪುವ ಹೆಣ್ಣಾನೆಯನ್ನು ಪುನಃ ಬಿಡಾರಕ್ಕೆ ತರಲು ಮಾವುತರು ಹರಸಾಹಸ ಪಡುವಂತಾಗಿದೆ. ಪ್ರಾಣದ ಹಂಗು ತೊರೆದು ಕೆಲಸ ಮಾಡಬೇಕಿದೆ.

ನೇತ್ರಾವತಿ ಇಪ್ಪತ್ತೈದು ದಿನ ಕಳೆದ್ರೂ ಬಿಡಾರ ಸೇರಿಲ್ಲ. ಹೀಗಾಗಿಯೇ ಹೇಮಾವತಿ ಹೆಣ್ಣು ಆನೆ ತಿಂಗಳು ಕಾಲ ಕಾಡಾನೆಯೊಂದಿಗೆ ಇರಬೇಕಾಯಿತು.ಹೇಮಾವತಿ ಅಪ್ರಾಪ್ತ ವಯಸ್ಸಿನಲ್ಲಿಯೇ ಗರ್ಭ ಧರಿಸಬೇಕಾಯಿತು.
ಹೇಮಾನತಿ ಗರ್ಭವಾದ ವಿಚಾರ ಗೊತ್ತಾದಾಗ, ಅದನ್ನು ಬಿಡಾರಕ್ಕೆ ತಂದು ಆರೈಕೆ ಮಾಡುವ ಸಣ್ಣ ಪ್ರಯತ್ನ ಮಾಡಬಹುದಿತ್ತು, ಆದರೆ ಆ ಸಾಹಸಕ್ಕೆ ಯಾರು ಕೈ ಹಾಕಿದಂತಿಲ್ಲ. ಕಾಡಾನೆ ಜೊತೆ ಇರುವ ಸಾಕಾನೆಯನ್ನು ಹಿಡಿಯುವುದು ದುಸ್ಥರವಾಗಿತ್ತು ಎನ್ನುವ ವಾಸ್ತವ ಕಟು ಸತ್ಯ ಗೊತ್ತೇ ಇದೆ. ಕಾಡಾನೆಯನ್ನು ಓಡಿಸಲು ಸೂಕ್ತ ಪರಿಕರಗಳೇ ಇಲ್ಲ. ಪಟಾಕಿ ಸಿಡಿಸಿ, ಕಾರ್ಟ್ರೇಜ್ ಬಳಸಿ, ಕಾಡಾನೆ ಓಡಿಸಬಹುದು. ಕಡೇ ಪಕ್ಷ ಗಾಳಿಯಲ್ಲಿ ಗುಂಡು ಹಾರಿಸಿ ಆದ್ರೂ ಕಾಡಾನೆಯನ್ನು ಓಡಿಸಿ. ಬಿಡಾರದ ಸಾಕಾನೆಗಳನ್ನು ತರಬಹುದು. ಅದ್ಯಾವ ವ್ಯವಸ್ಥೆಗಳು ಮಾವುತರ ಬಳಿ ಇಲ್ಲದಿರುವೇ..ಪ್ರಾಣಕ್ಕೆ ಸಂಚಕಾರವಾಗಿದೆ
ಕಾಡಿನಲ್ಲಿ ಹೇಮಾವತಿ ಅಪ್ರಾಪ್ತ ವಯಸ್ಸಿನಲ್ಲಿಯೇ ಗರ್ಭ ಕಟ್ಟಿರೋ ವಿಚಾರ ಇಲಾಖೆಗೆ ಗೊತ್ತಾಗುತ್ತಿದ್ದಂತೆ ಅರಣ್ಯ ಸಿಬ್ಬಂದಿಗಳು ಸಾಂಪ್ರಾದಾಯಿಕವಾಗಿ ಹೇಮಾವತಿಯನ್ನು ಕಾಡಾನೆಯಿಂದ ಬೇರ್ಪಡಿಸಿ ಬಿಡಾರಕ್ಕೆ ತರಬಹುದಿತ್ತು. ಹೀಗೆ ಬಿಡಾರಕ್ಕೆ ತಂದಿದ್ದೇ ಆದಲ್ಲಿ, ಹೇಮಾವತಿ ಮರಿಗೆ ಬಿಡಾರದಲ್ಲಿಯೇ ಚಿಕಿತ್ಸೆ ನೀಡಿ ಆರೈಕೆ ಮಾಡಬಹುದಿತ್ತು. ಅದು ಹೆರಿಗೆಯಾದ ಸಂದರ್ಭದಲ್ಲಿ ವೈದ್ಯರು , ಮಾವುತರು ಹಾಗು ಬಿಡಾರದ ಹೆಣ್ಣು ಸಾಕಾನೆ ಮೂಲಕ ಬಾಣಂತನವನ್ನು ನಿಭಾಯಿಸಬಹುದಿತ್ತು. ಮರಿಯನ್ನು ಆರೋಗ್ಯದಾಯಕವಾಗಿ ಉಳಿಸಿಕೊಳ್ಳಬಹುದಿತ್ತು. ಇವ್ಯಾವ ದುಸ್ಸಾಹಸಕ್ಕೆ ಕೈ ಹಾಕದ ಸಿಬ್ಬಂದಿಗಳ ನಿಲುವಿನಿಂದಾಗಿ ಹೇಮಾವತಿ ಕಾಡಿನಲ್ಲಿಯೇ ಮರಿಗೆ ಜನ್ಮ ನೀಡಿತು. ಸೂಕ್ತವಾದ ಆರೈಕೆ ವ್ಯವಸ್ಥೆಯಿಲ್ಲದೆ ಮರಿಯಾನೆ ಸಾವು ಕಂಡಿತು..ಈಗ ಹೇಳಿ ಹೇಮಾವತಿ ಮರಿಯ ಸಾವಿಗೆ ಕಾರಣ ಯಾರು..?
SUMMARY | The environment of the Shettihalli forest is becoming a mystery for elephants.
KEYWORDS | Shettihalli forest, elephants, sakrebailu, wild animals,