SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 10, 2025
ಲಾರಿಗೆ ಸಿಎನ್ಜಿ ಗ್ಯಾಸ್ ಅನ್ನು ತುಂಬಿಸುವ ವೇಳೆ ಅದು ಸ್ಪೋಟಗೊಂಡ ಪರಿಣಾಮ ಭದ್ರಾವತಿ ಮೂಲದ ಯುವಕನೊಬ್ಬ ಸಾವನಪ್ಪಿದ್ದಾನೆ.
ಭದ್ರಾವತಿ ತಾಲೂಕಿನ ಗೋಣಿಬೀಡಿನ ಕಂಬದಾಳು ಹೊಸೂರಿನ ಯುವಕ ಲಕ್ಷ್ಮಣ (27) ಸಾವನ್ನಪ್ಪಿದ ದುರ್ದೈವಿ.
ಚಿತ್ರದುರ್ಗದಲ್ಲಿ ಸಿಎನ್ ಜಿ ಗ್ಯಾಸನ್ನು ಲಾರಿಗೆ ಡಂಪ್ ಮಾಡಿ ಶಿವಮೊಗ್ಗದ ಕಡೆ ಹೊರಡುವಾಗ ಈ ಅವಘಡ ಸಂಭವಿಸಿದೆ. ಮೃತ ಯುವಕ ಲಕ್ಷ್ಮಣ್ ಈ ಹಿಂದೆ ಶಿವಮೊಗ್ಗದ ಏರ್ ಪೋರ್ಟ್ ನಲ್ಲಿ ಟ್ಯಾಕ್ಸಿ ಚಲಾಯಿಸಿಕೊಂಡಿದ್ದು, ಇತ್ತೀಚೆಗೆ ಲಾರಿಗಳಿಗೆ ಸಿಎನ್ ಜಿ ಗ್ಯಾಸ್ ತುಂಬಿಸುವ ಕೆಲಸಕ್ಕೆ ಸೇರಿಕೊಂಡಿದ್ದರು.ಇವರ ಸಾವಿಗೆ ಏರ್ ಪೋರ್ಟ್ ನ ಟ್ಯಾಕ್ಸಿ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.
SUMMARY | A youth from Bhadravathi died after a lorry exploded while loading CNG gas into it.
KEYWORDS | Bhadravathi, died, exploded, CNG gas,