Thursday, 22 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಸಕ್ರೆಬೈಲ್‌ ಆನೆ ಬಿಡಾರದಲ್ಲಿ 1 ರಾತ್ರಿಯಲ್ಲಿ 2 ದುರಂತ | ಮರಿಯಾನೆ ಸಾವು, ಮಾವುತನ ಮೇಲೆ ಕಾಡಾನೆ ದಾಳಿ! ನಡೆದಿದ್ದೇನು? JP ಬರೆಯುತ್ತಾರೆ

13
Last updated: March 11, 2025 6:08 pm
13
Share
SHARE

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 11, 2025 ‌‌ ‌

vijayakarnaka

ಮಾವುತ ಕಾವಾಡಿಗಳ ಹಗಲು ರಾತ್ರಿಯ ಆರೈಕೆಗೆ ಸ್ಪಂದಿಸದ ಚೊಚ್ಚಲ ಮರಿಯಾನೆ. ಹಾಲು ಕುಡಿಯದೆ ಉಸಿರು ಚೆಲ್ಲಿತು..ಕಾಡಾನೆಯ ಸಾಂಗತ್ಯವೇ ಮುಳುವಾಯಿತೇ…ಜೆಪಿ ಬರೆಯುತ್ತಾರೆ.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಕ್ರೆಬೈಲು ಆನೆ ಬಿಡಾರದಲ್ಲಿನ ಹೆಣ್ಣಾನೆಗಳ ಪಾಲಿಗೆ ಕಾಡಾನೆಗಳೇ ಆಕರ್ಷಣೆಯ ಕೇಂದ್ರವಾಗಿದೆ.  ಬಿಡಾರದ ಹೆಣ್ಣಾನೆಳು ಕಾಡಾನೆಗಳ ಸಾಂಗತ್ಯದಲ್ಲಿ ವೈಲ್ಡ್ ಜೀನ್ ಗಳನ್ನೆ ಬಿಡಾರಕ್ಕೆ ಉಡುಗೊರೆಯಾಗಿ ನೀಡುತ್ತಿವೆ. ಬೆಳಿಗ್ಗೆ ಬಿಡಾರದಿಂದ ಶೆಟ್ಡಿಹಳ್ಳಿ ಕಾಡಿನ ಪರಿಸರ ಸೇರುವ ಬಿಡಾರದ ಹೆಣ್ಣಾನೆಗಳನ್ನು, ಕಾಡಾನೆಗಳು ಒಲಿಸಿಕೊಳ್ಳುವುದು ಒಂದು ಸಂಪ್ರದಾಯವೇ ಆಗಿದೆ.

ಆದರೆ ಬಿಡಾರದ ಗಂಡಾನೆಗಳ ಪಾಲಿಗೆ ಕಾಡಾನೆಗಳು ಶಾಪವೂ ಹೌದು. ಏಕಂದರೆ, ಹೆಣ್ಣಾನೆಗಳ ಸೆಳೆಯುವ ಕಾಡಾನೆಗಳ ದಾಳಿಗೆ ನ್ಯೂ ಟಸ್ಕರ್ ರಂಗ, ರಾಜೇಂದ್ರ ನಂತ ದೈತ್ಯ ಸಾಕಾನೆಗಳು ಪ್ರಾಣತೆತ್ತಿದೆ. ಇನ್ನೊಂದೆಡೆ ಹೆಣ್ಣಾನೆಗಳನ್ನು ಮನವೊಲಿಸಿಕೊಳ್ಳುವ ಕಾಡಾನೆಗಳು ಅವುಗಳನ್ನು ತಿಂಗಳು ಗಟ್ಟಲೆ ಕಾಡಿನಲ್ಲಿ ತಮ್ಮೊಂದಿಗೆ ಇರಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಮಾವುತ ಕಾವಾಡಿಗಳು ತಮ್ಮ ಪ್ರಾಣ ಪಣಕ್ಕಿಟ್ಟು ಹೆಣ್ಣಾನೆಗಳನ್ನು ಬಿಡಾರಕ್ಕೆ ತರಬೇಕಾಗುತ್ತದೆ. ಕಾಡಾನೆಗಳ ಜೊತೆಗಿದ್ದ ಸಂದರ್ಭದಲ್ಲಿ ಹೆಣ್ಣಾನೆಗಳು ಮಾವುತನ ಯಾವ ಆಜ್ಞೆಯನ್ನು ಪಾಲಿಸದೇ ಒಂದು ರೀತಿಯಲ್ಲಿ ವೈಲ್ಡ್ ಆಗಿರುತ್ತದೆ. ಇಂತಹದ್ದೆ ಸನ್ನಿವೇಶ ಕಳೆದ ರಾತ್ರಿ ಶೆಟ್ಟಿಹಳ್ಳಿ ಕಾಡಿನ ಪರಿಸರದಲ್ಲಿ ಎದುರಾಗಿದ್ದು,  ಕಾಡಾನೆಯ ಸಂಪರ್ಕದಲ್ಲಿದ್ದ ಹತ್ತುವರೆ ವರ್ಷದ ಹೇಮಾವತಿಯನ್ನು ಕರೆತರುತ್ತಿದ್ದ ಮಾವುತನ ಮೇಲೆ ಕಾಡಾನೆ ದಾಳಿ ನಡೆಸಿದೆ. ಅಲ್ಲದೆ ಹೇಮಾವತಿಯ ಐದು ದಿನದ ಗಂಡು ಮರಿ ಸಾವನ್ನಪ್ಪಿದೆ.  

vijayakarnaka

ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ, ವನ್ಯಜೀವಿ ವಿಭಾಗದ ಸಕ್ರೆಬೈಲ್‌ ಆನೆ ಬಿಡಾರದ ಆನೆ ಹೇಮಾವತಿ ಮರಿ ಹಾಕಿರುವ ವಿಚಾರವನ್ನು ಹೊರಜಗತ್ತಿಗೆ ತಿಳಿಸಿರಲಿಲ್ಲ. ಐದು ದಿನಗಳ ಹಿಂದೆ ಹೇಮಾವತಿ ಮರಿಯೊಂದಕ್ಕೆ ಜನ್ಮ ನೀಡಿದೆ. ಹೇಮಾವತಿಗೆ ಇದು ಚೊಚ್ಚಲ ಹೆರಿಗೆಯಾಗಿದ್ದು, ಮರಿ ಜನಿಸುತ್ತಲೇ ತಾಯಿ ಮರಿಗೆ ಹಾಲು ಕುಡಿಸಲು ಹಿಂದೇಟು ಹಾಕಿದೆ. ಹೀಗಾಗಿ ಮರಿಗೆ ತಕ್ಕ ಆರೈಕೆ ಸಿಗದೇ ಮರಿ ಸಾವನ್ನಪ್ಪಿದೆ ಎನ್ನಲಾಗಿದೆ.  ಸಾಮಾನ್ಯವಾಗಿ 14 ವರುಷದ ಆನೆಯು ಗರ್ಭವತಿಯಾಗುತ್ತದೆ. ಇನ್ನೂ 10 ವರುಷದ ಹೇಮಾವತಿ ವಾಡಿಕೆ ಅವಧಿಗೂ ಮೊದಲೇ ಗರ್ಭಿಣಿಯಾಗಿದೆ. ಹೀಗಾಗಿ ಅದರ ಮರಿಯು ಸಹ ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿರಲಿಲ್ಲ. ಮೇಲಾಗಿ ಹೇಮಾವತಿಗೆ ತಾಯ್ತನದ ಅರಿವು ಮೂಡಿರದ ಹಿನ್ನೆಲೆಯಲ್ಲಿ ಅದು ಮರಿಗೆ ಹಾಲು ಕುಡಿಸಲು ನಿರಾಕರಿಸಿದೆ. ಈ ನಡುವೆ ಮಾವುತ, ವೈದ್ಯಾಧಿಕಾರಿಗಳು ಹೇಮಾವತಿಯನ್ನು ನಿಯಂತ್ರಣದಲ್ಲಿಟ್ಟು, ಅದರಿಂದ ಹಾಲು ಕರೆದು ಮರಿಗೆ ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಕಾಡಾನೆಯ ಮಧ್ಯಪ್ರವೇಶದಿಂದ ಹೇಮಾವತಿಯನ್ನು ಹೆಚ್ಚು ಹೊತ್ತು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಹೇಮಾವತಿ ತನ್ನ ಜೊತೆಗೆ ಆರೈಕೆಯಿಲ್ಲದ ಮರಿಯನ್ನು ಸಹ ಕಾಡಿನಲ್ಲಿ ನಡೆದಾಡಿಸಿದೆ. ಪರಿಣಾಮ ನಿತ್ರಾಣಗೊಂಡ ಮರಿ ಸಾವನ್ನಪ್ಪಿದೆ.

ಕಾಡಿನಲ್ಲಿಯೇ ಹೇಮಾವತಿ ಮರಿಹಾಕಿದ್ದರೂ, ಅದನ್ನು ಶತಾಯಗತಾಯ ಉಳಿಸಿಕೊಳ್ಳುವ ಪ್ರಯತ್ನವನ್ನು ಸಕ್ರೆಬೈಲ್‌ ಮಾವುತ ಹಾಗೂ ಕಾವಾಡಿಗಳ ತಂಡ ಮಾಡಿತ್ತು. ಕಾಡಾನೆ ಜೊತೆಗಿದ್ದರೂ ಜೀವ ಭಯದಲ್ಲಿಯೇ ವನ್ಯ ಜೀವಿ ವೈದ್ಯ ವಿನಯ್ ಹಾಗು ಮಾವುತರ ತಂಡ ಮರಿ ಆನೆಯ ಆರೈಕೆ ಮಾಡಿದ್ದರು. ಪಟಾಕಿ ಸಿಡಿಸಿ ಕಾಡಾನೆಯನ್ನು ಓಡಿಸಿ ಚೊಚ್ಚಲ ಮರಿಗೆ ಹಾಲುಣಿಸುವ ಪ್ರಯತ್ನ ಮಾಡಿದ್ದರು. ತಾಯಿಯ ಗಿಣ್ಣದ ಹಾಲನ್ನು ಬಾಟಲಿಗೆ ತುಂಬಿ ಮರಿಗೆ ಕುಡಿಸಿದ್ದಾರೆ. ಅದರೆ ತಾಯಿ ಮರಿಗೆ ಹಾಲು ಕುಡಿಸುವ ಮನಸ್ಸು ಮಾಡುತ್ತಿಲ್ಲ. ಮರಿಗೆ ತಾಯಿ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯುಲು ಗೊತ್ತಾಗುತ್ತಿಲ್ಲ. ವನ್ಯಜೀವಿಗಳಲ್ಲಿ ಪ್ರಿಮ್ಯಚೂರ್‌ ಗರ್ಭಧಾರಣೆಯಾದಲ್ಲಿ ಇಂತಹ ಸನ್ನಿವೇಶ ಎದುರಾಗುತ್ತದೆ ಎನ್ನುತ್ತಾರೆ ತಜ್ಞರು. 

ಈ ನಡುವೆ ಮರಿ ಆನೆಯ ಆರೈಕೆಯಲ್ಲಿದ್ದ ಮಾವುತ ಕಳೆದ ರಾತ್ರಿ ಮರವೇರಿ ವಾಚ್ ಅಂಡ್ ಗಾರ್ಡ್ ಮಾಡುತ್ತಿದ್ದ..ಈ ಸಂದರ್ಭದಲ್ಲಿ ಹೇಮಾವತಿ ಬಳಿಯಿದ್ದ ಕಾಡಾನೆ ಮಾವುತನನ್ನ ನೋಡಿ ದಾಳಿಗೆ ಮುಂದಾಗಿದೆ. ಸಮಯ ಪ್ರಜ್ಞೆ ಮೆರೆದ ಮಾವುತ ತಕ್ಷಣ ತಪ್ಪಿಸಿಕೊಂಡು ಮರ ಇಳಿದು ಓಡಿದ್ದಾನೆ .ಈ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಶಿವಮೊಗ್ಗ ವನ್ಯಜೀವಿ ಡಿಸಿಎಫ್ ಪ್ರಸನ್ನ ಪಟಗಾರ್ ತಿಳಿಸಿದ್ದಾರೆ.

ಮಲೆನಾಡು ಟುಡೆ ಜೊತೆ ಮಾತನಾಡಿದ ಡಿಸಿಎಫ್ ಪ್ರಸನ್ನ ಪಟಗಾರ್, ನಮ್ಮ ಮಾವುತ ಕಾವಾಡಿ ವೈದ್ಯರ ತಂಡ ಚೊಚ್ಚಲ ಮರಿಯನ್ಬು ಉಳಿಸಿಕೊಳ್ಳಲು ನಿರಂತರ ಪರಿಶ್ರಮ ವಹಿಸಿದೆ. ಹೇಮಾವತಿ ಹತ್ತುವರೆ ವರ್ಷಕ್ಕೆ ಮರಿಗೆ ಜನ್ನ ನೀಡಿದೆ. ಚೊಚ್ಚಲ ಮರಿಯ ಆರೋಗ್ಯ ದಲ್ಲಿ ವ್ಯತ್ಯಾಸವಾಗಿದೆ. ತಾಯಿಗೆ ಹಾಲುಣಿಸುವ ತಾಯ್ತನದ ಪರಿಕಲ್ಪನೆ ಇಲ್ಲ. ಮರಿಗೆ ಹಾಲನ್ನು ಹೇಗೆ ನೈಸರ್ಗಿಕವಾಗಿ ಕುಡಿಯಬೇಕೆಂದು ಗೊತ್ತಿಲ್ಲ..ಹಾಲು ಕಡಿಸಲು ನಮ್ಮ ಸ್ಟಾಫ್ ಶ್ರಮ ಪಟ್ಟಿದೆ.ಆದರೆ ಕಾಡಾನೆ ಬಹಳಷ್ಷು ದೂರ ಹೇಮಾವತಿಯೊಂದಿಗೆ ಹೆಜ್ಜೆ ಹಾಕಿದೆ..ಕಾಡಾನೆ ಹೋದಲ್ಲೆಲ್ಲ ಹೇಮಾವತಿ ತನ್ನ ಮರಿಯೊಂದಿಗೆ ಸಾಗಿದೆ..ತುಂಬಾ ಬಳಲಿದ ಮರಿಯಾನೆ ಸುಸ್ತಾಗಿ ಸಾವನ್ನಪ್ಪಿದೆ ಎಂದು ಪ್ರಸನ್ನ ಪಟಗಾರ್ ಹೇಳಿದ್ದಾರೆ

malenadutoday add
Share This Article
Email Copy Link Print
Previous Article ಹಣಗೆರೆಕಟ್ಟೆಗೆ ಬಟ್ಟೆ ವ್ಯಾಪಾರಕ್ಕೆ ಹೋಗುತ್ತಿದ್ದ ಟಿಪ್ಪು ನಗರ ನಿವಾಸಿಗೆ ಆಘಾತ | ಜೇನು ದಾಳಿ, ಓರ್ವ ಸಾವು, ಇಬ್ಬರಿಗೆ ಗಾಯ
Next Article ಎಣ್ಣೆ ಹೊಡೆದು ರೈಲ್ವೇ ಹಳಿ ಮೇಲೆ ಮಲಗಿದ ಕುಡುಕ | ಪವಾಡದ ರೀತಿಯಲ್ಲಿ ಎಸ್ಕೇಪ್, ವಿಡಿಯೋ ವೈರಲ್‌
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಕಾಡು ಬಿಟ್ಟು ಬಂದವರು ಕೋವಿ ಎಲ್ಲಿ ಬಿಟ್ಟರು! NIA, ಪೊಲೀಸರಿಗೆ ಟೆನ್ಶನ್‌ ನೀಡಿದ ವೆಪನ್ಸ್‌ ಡಂಪ್‌ಯಾರ್ಡ್‌!

By 13
JP STORY

ಬೆಂಗಳೂರಲ್ಲಿ ಶಿವಮೊಗ್ಗ ರೌಡಿಗಳಿಂದ ಮರ್ಡರ್!‌ | ಟ್ಯಾಂಕ್‌ ಮೊಹಲ್ಲಾ ರಿಜ್ವಾನ್‌ ಮೋಸ್ಟ್‌ ಡೆಂಜರಸ್‌ ಆಗಿದ್ದೇಗೆ? JP ಬರೆಯುತ್ತಾರೆ

By 13
JP STORY

ನೆಹರು ರೋಡ್‌ ATM ನಲ್ಲಿ ಟೂಲ್ಸ್‌ ಹಾಕಿ ಕ್ಯಾಶ್‌ ಎಗರಿಸಲು ಟ್ರೈ ಮಾಡಿದ ಬಿಹಾರದ ಆರೋಪಿ ಸಿಕ್ಕಿದ್ದೇಗೆ | ಪೊಲೀಸ್‌ ಆಪರೇಷನ್‌ ಬಗ್ಗೆ JP ಬರೆಯುತ್ತಾರೆ

By 13

ಕುಂಸಿಗೆ ದೀಪಕ್‌, ಕೋಟೆಗೆ ಹರೀಶ್‌ ಪಾಟೀಲ್‌ | ರಾಜ್ಯ ಸರ್ಕಾರದಿಂದ ಮತ್ತೆ 12 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ | ವಿವರ ಇಲ್ಲಿದೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up