SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 12, 2025

ಶಿವಮೊಗ್ಗ | ಶಿವಮೊಗ್ಗ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘ ವತಿಯಿಂದ ಮಾರ್ಚ್ 15 ರಂದು ಬೆಳಿಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು 398ನೇ ಜಯಂತೋತ್ಸವ ಹಾಗೂ ಮರಾಠ ಸಮಾಜದ ವೆಬ್ ಸೈಟ್ ಲಾಂಚ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಸಮಾಜದ ಅಧ್ಯಕ್ಷರಾದ ಸತೀಶ್ ಶಿಂದೆ ತಿಳಿಸಿದರು
ಇಂದು ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿನ್ ಶಿವಾಜಿರಾವ್ ಸಿಂಧ್ಯಾ ವಹಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಭವಾನಿ ದತ್ತ ಪೀಠ, ಗೋಸಾಯಿ ಮಠ, ಗವಿಪುರ, ಬೆಂಗಳೂರಿನ ಮರಾಠ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಂಜುನಾಥ್ ಭಾರತಿ ಸ್ವಾಮೀಜಿಗಳು ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಮಾಡಲಿದ್ದಾರೆ ಎಂದರು.

ಇದೇ ವೇಳೆ ನಮ್ಮ ಸಮಾಜದ ವೆಬ್ಸೈಟ್ ಲಾಂಚ್ ಕಾರ್ಯಕ್ರಮ ನಡೆಯಲಿದ್ದು. ನಮ್ಮ ಸಮಾಜದ ವೆಬ್ಸೈಟ್ ಲಾಂಚ್ ಅನ್ನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹಾಗೂ ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ಮಾಡಲಿದ್ದಾರೆ. ಈ ವೆಬ್ಸೈಟ್ನಲ್ಲಿ ನಮ್ಮ ಸಮಾಜದ ಬಗ್ಗೆ ಮಾಹಿತಿ ಹಾಗೂ ಪ್ರಮುಖರ ಫೋನ್ ನಂಬರ್ ಸೇರಿದಂತೆ ಮದುವೆಯಾಗಲು ಇಚ್ಚಿಸುವ ನಮ್ಮ ಸಮಾಜದ ಯುವಕ ಯುವತಿಯರು ವಧು ವರರನ್ನು ಸಹ ಹುಡುಕಿಕೊಳ್ಳುವ ಸೌಲಭ್ಯವನ್ನು ಮಾಡಿದ್ದೇವೆ. ಹಾಗೆಯೇ ಈ ವೇಳೆ ನಮ್ಮ ಸಮಾಜದ ಪ್ರಮುಖ ಹಿರಿಯನ್ನು ಗುರುತಿಸಿ ಸನ್ಮಾನವನ್ನು ಮಾಡಲಿದ್ದೇವೆ ಎಂದರು.
SUMMARY | The 398th birth anniversary celebrations of Sri Chhatrapati Shivaji Maharaj and the launch of maratha samaj website will be held at Kuvempu Rangamandira
KEYWORDS | Kuvempu Rangamandira, Chhatrapati Shivaji,birth anniversary, website,