SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 6, 2025

ಶಿವಮೊಗ್ಗ | ಇತಿಹಾಸದಲ್ಲಿ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಕಂಬಳವನ್ನು ಆಯೋಜನೆ ಮಾಡಿರುವುದು ಬಹಳ ಸಂತೋಷ ತಂದಿದೆ ಎಂದು ತುಂಗಭದ್ರಾ ಜೋಡುಕೆರೆ ಕಂಬಳದ ಗೌರವಧ್ಯಕ್ಷ ಕೆ ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏಪ್ರಿಲ್ 19, 20 ರಂದು ಶಿವಮೊಗ್ಗದಲ್ಲಿ ಮೊದಲಬಾರಿಗೆ ಕಂಬಳವನ್ನು ಆಯೋಜನೆ ಮಾಡಲಾಗಿದೆ. ಈ ಹಿಂದೆ ನಾನು ಅನೇಕ ಬಾರಿ ದಕ್ಷಿಣ ಕನ್ನಡಕ್ಕೆ ಹೋದಾಗ ದೂರದಿಂದ ಕಂಬಳವನ್ನು ನೋಡಿ ಬಂದಿದ್ದೇನೆ. ಆದರೆ ಇದೀಗ ನಮ್ಮ ಜಿಲ್ಲೆಯಲ್ಲಿ ಹತ್ತಿರದಿಂದ ನೋಡುವ ಅವಕಾಶ ದೊರಕುತ್ತಿದೆ. ವ್ಯವಸ್ಥಾಪಕರು ಕಂಬಳಕ್ಕೆ ಸಂಬಂಧಿಸಿದ ಕೆಲಸಗಳು ವ್ಯವಸ್ಥಿತವಾಗಿ ನಡೆಯಬೇಕೆಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಕಂಬಳಕ್ಕೆ ಜಿಲ್ಲೆಯ ಸಂಸದ ಬಿವೈ ರಾಘವೇಂದ್ರ ಹಾಗೂ ಸಚಿವ ಮಧು ಬಂಗಾರಪ್ಪರವರು ಸಹ ಸಹಕರಿಸುವುದಾಗಿ ತಿಳಿಸಿದ್ದಾರೆ ಎಂದರು.

8 ರಿಂದ 10 ಲಕ್ಷ ಜನ ಸೇರುವ ನಿರೀಕ್ಷೆ
ಫೆ10ರಂದು ಮದ್ಯಾಹ್ನ 3 ಗಂಟೆಗೆ ನಗರದ ತುಂಗಭದ್ರಾ ಜಂಕ್ಷನ್ ಸುತ್ತಲೂ ಇರುವ 16 ಎಕರೆ ಭೂಮಿಯಲ್ಲಿ ಗುದ್ದಲಿ ಪೂಜೆ ನಡೆಯುತ್ತದೆ. ಕೇವಲ ಕಂಬಳದ ಗ್ರೌಂಡ್ ರೆಡಿಮಾಡಲು ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಇದು ತುಳುನಾಡು ಹಾಗೂ ಮಲೆನಾಡು ಎರಡು ಸೇರಿ ಮಾಡುತ್ತಿರುವ ಕಂಬಳ. ಈ ಕಂಬಳದಲ್ಲಿ 8 ರಿಂದ 10 ಲಕ್ಷಜನ ಸೇರುವ ನಿರೀಕ್ಷೆ ಇದೆ ಎಂದರು.
SUMMARY | K S Eshwarappa, honorary president of Tungabhadra Jodukere Kambala, said, “I am very happy that for the first time in history, The Kamla is being organised in Shivamogga.
KEYWORDS | K S Eshwarappa, Kambala, Shivamogga,