Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ನಿರ್ಲಕ್ಷ್ಯ ವಹಿಸದೆ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು |  ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ

131
Last updated: March 20, 2025 5:59 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 20, 2025

vijayakarnaka

ಶಿವಮೊಗ್ಗ |  ಸರ್ಕಾರಿ ಅಧಿಕಾರಿಗಳು ಸಮಯೋಚಿತವಾಗಿ, ಸಂದರ್ಭೋಚಿತವಾಗಿ ಹಾಗೂ ನಿರ್ಲಕ್ಷ್ಯ ವಹಿಸದೇ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಮಾನ್ಯ ನ್ಯಾಯಮೂರ್ತಿಗಳಾದ ಹಾಗೂ ಉಪ ಲೋಕಾಯುಕ್ತರಾದ  ಕೆ.ಎನ್.ಫಣೀಂದ್ರ ಹೇಳಿದರು.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಲಾಗಿದ್ದ “ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ’ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. 

vijayakarnaka

 20 ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಲೇವಾರಿ ಸಭೆ ಮಾಡಿದ್ದೇನೆ. ಉತ್ತಮ ಫಲಿತಾಂಶ ಸಿಕ್ಕಿದೆ. 1984 ರಲ್ಲಿ ಆರಂಭವಾದ ಈ ಸಂಸ್ಥೆ, ಇದರಿಂದ ಸಾರ್ವಜನಿಕರಿಗೆ ಇರುವ ಅನುಕೂಲಗಳೇನು, ಧ್ಯೇಯೋದ್ದೇಶಗಳೇನು, ಯಾವ ರೀತಿ ದೂರು ಸಲ್ಲಿಸಬಹುದು ಹಾಗೂ ಪರಿಹಾರ ಪಡೆಯಬಹುದೆಂದು ತಿಳಿಸುತ್ತಾ, ಸಾರ್ವಜನಿಕರ ತೊಂದರೆಗಳನ್ನು ನಿವಾರಿಸುತ್ತಾ ಬಂದಿದೆ.ಅನೇಕರಿಗೆ ಈ ಸಂಸ್ಥೆಯ ಬಗ್ಗೆ ತಿಳಿದಿಲ್ಲ. ಅದನ್ನು ತಿಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸರ್ವರಿಗೂ ಸಮಬಾಳು, ಸಮಪಾಲು ಸಂವಿಧಾನದ ಆಶಯವಾಗಿದ್ದು ಎಲ್ಲ ಜನರ ರಕ್ಷಣಾತ್ಮಕ ಮತ್ತು ಉತ್ತಮ ಜೀವನಕ್ಕಾಗಿ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಶಾಸಕಾಂಗ, ಕಾರ್ಯಾಂಗ ನ್ಯಾಯಾಂಗ ರಚನೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ನಮ್ಮ ಸಂವಿಧಾನ ಎಲ್ಲ ನಾಗರೀಕರಿಗೆ ಹಕ್ಕು, ಬಾಧ್ಯತೆಗಳನ್ನು ನೀಡಿದೆ. ಮಾನವನ ಸಂರಕ್ಷಣೆಗೆ ಎಲ್ಲ ರೀತಿಯ ಕಾನೂನು ತರಲಾಗಿದೆ. ಗೌರವಯುತ ಜೀವನಕ್ಕಾಗಿ ಅಭಿವೃದ್ದಿ ಸಾಧಿಸಲಾಗುತ್ತಿದೆ ಎಂದರು.

 ಸರ್ಕಾರಿ ಅಧಿಕಾರಿಗಳು ಕಾಲಮಿತಿಯೊಳಗೆ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಸರಿಯಾದ ಸಮಯದಲ್ಲಿ ಕೆಲಸ ಮಾಡದಿದ್ದರೆ ಸಮಾಜ, ಜನ ಅಕ್ರಮ ದಾರಿ ಹಿಡಿಯಬಹುದು. ಅಥವಾ ತೀವ್ರ ತೊಂದರೆಗೆ ಒಳಗಾಗಬಹುದು. ಆದ್ದರಿಂದ ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ಬೇಜವಾಬ್ದಾರಿತನ ತೋರದೆ ನಿರ್ಲಕ್ಷ್ಯ ಅನಗತ್ಯ ವಿಳಂಬ ಮಾಡದೇ ಕೆಲಸ ಮಾಡಿಕೊಡಬೇಕು. ಮಾಡಬೇಕಾದ ಕೆಲಸ ಮಾಡದಿರುವುದು, ಲಂಚಕ್ಕೆ ಬೇಡಿಕೆ ಇಡುವುದು, ಜಾತಿ ಪಕ್ಷಪಾತ ಮಾಡುವುದು ಅಪರಾಧವಾಗುತ್ತದೆ. ಸರ್ವರಿಗೂ ಸಮಬಾಳು ನೀಡುವ ಸದುದ್ದೇಶದಿಂದ ಸರ್ಕಾರ ಜಾರಿಗೆ ಬಂದಿದೆ. ನಮ್ಮ ದೇಶ ಮತ್ತು ಕಾನೂನು ರಕ್ಷಣೆ ನಾವೇ ಮಾಡಿಕೊಳ್ಳಬೇಕು. ದೇಶದ ಮೂಲೆ ಮೂಲೆಯಲ್ಲಿರುವ ಜನರಿಗೂ ರಕ್ಷಣಾತ್ಮಕ ಕಾನೂನುಗಳು, ಸೌಲಭ್ಯಗಳು ತಲುಪಬೇಕು. ಶಾಸಕಾಂಗ ರೂಪಿಸಿರುವ ಕಾಯ್ದೆ, ಕಾನೂನು ಮತ್ತು ಸೌಲಭ್ಯಗಳನ್ನು ಜನರಿಗೆ ಕಾರ್ಯಾಂಗ ತಲುಪಿಸುತ್ತಿದೆ. ಇವನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ.

 ಸಮಸ್ಯೆಗಳ ಪರಿಹಾರಕ್ಕೆ ಪ್ರಾಧಾನ್ಯತೆ ನೀಡಿ, ದುರುದ್ದೇಶದಿಂದ ಕರ್ತವ್ಯಲೋಪವಾಗಿದ್ದರೆ ತಕ್ಕ ಪಾಠವಾಗಬೇಕು ಎಂಬ ಉದ್ದೇಶದಿಂದ ಲೋಕಾಯುಕ್ತ ರಚನೆಯಾಯಿತು. ಸರ್ಕಾರದ ಲೋಪದೋಷವಿದ್ದರೂ ಅದನ್ನು ಹೊರಗೆಳೆದು ಶಿಕ್ಷಿಸುವ ಉದ್ದೇಶದಿಂದ ಈ ಸ್ವಾಯತ್ತ ಸಂಸ್ಥೆ ರಚನೆಯಾಗಿದೆ. ಸಮಸ್ಯೆ ಪರಿಹಾರಕ್ಕೆ ಮೊದಲ ಪ್ರಾಧ್ಯಾನ್ಯತೆ ನೀಡಿ ನಂತರ ಸಮಸ್ಯೆಗೆ ಕಾರಣ ಕುರಿತು ಪರಿಶೀಲನೆ ಮಾಡಿ, ಇಲಾಖಾ ವಿಚಾರಣೆ ನಡೆಸಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ನಂತರ ಸೂಕ್ತ ಕ್ರಮ ಜರುಗಿಸುತ್ತದೆ. ಲೋಕಾಯುಕ್ತದಲ್ಲಿ 40 ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ.

 ಯಾವುದೇ ಸಾರ್ವಜನಿಕರು ಕರ್ತವ್ಯ ಲೋಪವೆಸಗಿದ ಸರ್ಕಾರಿ ಅಧಿಕಾರಿ/ನೌಕರರ ವಿರುದ್ದ ದೂರು ನೀಡಬಹುದು. ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ಕಂಡುಬಂದಲ್ಲಿ ಲೋಕಾಯುಕ್ತ ಸ್ವಯಂ ಪ್ರೇರಿತ ದೂರನ್ನು ನೋಂದಾಯಿಸಿಕೊಳ್ಳಬಹುದು. ಸರ್ಕಾರ ತನ್ನ ಗಮನಕ್ಕೆ ಬಂದದ್ದನ್ನು ಸಹ ಲೋಕಾಯುಕ್ತ ಪರಿಶೀಲಿಸಿ ವರದಿ ಸಲ್ಲಿಸಲು ತಿಳಿಸಬಹುದು. 

 ಸುಳ್ಳು ದೂರು ನೀಡಿದಲ್ಲಿ ದೂರುದಾರರಿಗೂ ಶಿಕ್ಷೆ ಇದೆ. ನಮ್ಮ ವ್ಯಾಪ್ತಿಗೆ ಬರುವ ಪ್ರಕರಣಗಳ ಕೂಲಂಕಷ ತನಿಖೆಗೊಳಪಡಿಸಿ, ವರದಿ ತರಿಸಿಕೊಂಡು ಕ್ರಮ ವಹಿಸಲಾಗುವುದು. ನಮ್ಮ ವ್ಯಾಪ್ತಿಗೊಳಪಡದ ದೂರುಗಳನ್ನು ಎಲ್ಲಿಗೆ ಹೋಗಬೇಕೆಂದು ನಿರ್ದೇಶನ, ಮಾರ್ಗದರ್ಶನ, ಸಲಹೆ ನೀಡಲಾಗುವುದು. ರೂ. 3 ಲಕ್ಷದೊಳಗಿನ ಆದಾಯ ಹೊಂದಿರುವವರಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆ ನೆರವು ನೀಡಲಾಗುವುದು. 

 ನಮ್ಮನ್ನು ನಾವು ಎಚ್ಚರಗೊಳಿಸಿಕೊಳ್ಳಲು ಹಾಗೂ ಸಾರ್ವಜನಿಕರಿಗೆ ಯಾವೆಲ್ಲ ರೀತಿಯ ತೊಂದರೆಯಾಗುತ್ತಿದೆ, ಅದರ ಪರಿಹಾರಕ್ಕೆ ಪ್ರಯತ್ನಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಲಮಿತಿಯೊಳಗೆ ಕರ್ತವ್ಯ ನಿರ್ವಹಣೆ ಮಾಡದಿರುವುದು ಮತ್ತು ಮಾಡಬೇಕಾದ ಕೆಲಸ ಮಾಡದೇ ಇರುವ ಕುರಿತು ಹೆಚ್ಚು ದೂರುಗಳು ಬರುತ್ತಿವೆ. 

ಮಾ.20 ರಂದು ವೈಯಕ್ತಿಕ 65 ಪ್ರಕರಣಗಳನ್ನು ಗುರುತಿಸಿದ್ದು ಅದನ್ನು ವಿಲೇವಾರಿ ಮಾಡಲಾಗುವುದು. ಮಾ.21 ರಂದು ಕಾನೂನು ಅರಿವು ಸಭೆ, ಸಂವಾದ, ವಿವಿಧ ಕಚೇರಿ ಭೇಟಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಾಗುವುದು . ಸಾರ್ವಜನಿಕರ ಸಮಸ್ಯೆ ನಿವಾರಣೆಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದ ಅವರು ರಾಷ್ಟ್ರಕವಿ ಕುವೆಂಪು ಹಾಗೂ ಡಿವಿಜಿ ಕವಿವಾಣಿಯನ್ನು ಅಳವಡಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದರು.

 ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಮಾತನಾಡಿ, ಉಪ ಲೋಕಾಯುಕ್ತರ ಬದ್ದತೆಯು ನಮಗೆ ಪ್ರೇರಣೆಯಾಗಿದೆ. ಇಂದು ಬೆಳಿಗ್ಗೆಯೇ ನಗರದ ಗಾಂಧಿ ಪಾರ್ಕ್, ನವುಲೆ ಕೆರೆ, ಕಸ ತುಂಬಿದ ನಾಲೆ ಸೇರಿದಂತೆ ಸಮಸ್ಯೆ ಇರುವ ಸ್ಥಳಗಳನ್ನು ಉಪ ಲೋಕಾಯುಕ್ತರು ವೀಕ್ಷಿಸಿ ಸಮಸ್ಯೆ ಪರಿಹಾರದ ಕುರಿತು ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದ್ದಾರೆ. ಕೇವಲ ಅಧಿಕಾರಿಗಳಿಂದ ಪರಿಹಾರ ಕಷ್ಟವಾಗುವಂತಹ ಇಂತಹ ಸ್ಥಳಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ. ನಾವು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಇವತ್ತಿನಿಂದಲೇ ಉಪ ಲೋಕಾಯುಕ್ತರು ತಿಳಿಸಿದಂತೆ ಮುನ್ನಡೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡತ್ತೇವೆಂದು ತಿಳಿಸಿದರು. 

SUMMARY |  Government officials should do the work of the public in a timely, timely and negligent manner

KEYWORDS  |  public,  Government, officials  Upa-Lokayukta, Justice, K.N. Phanindra,

malenadutoday add
Share This Article
Email Copy Link Print
Previous Article ಗೌರವಧನ ಹೆಚ್ಚಿಸುವಂತೆ ಆಶಾಕಾರ್ಯಕರ್ತೆಯರ ಪ್ರತಿಭಟನೆ | ಜಿಲ್ಲಾಧಿಕಾರಿಗಳಿಗೆ ಮನವಿ
Next Article ಕಸ ವಿಲೇವಾರಿಯಲ್ಲಿ ಲೋಪವಿದ್ದರೆ ಸುಮೋಟೋ ಕೇಸ್‌ ದಾಖಲಿಸಿ | ಉಪಲೋಕಾಯುಕ್ತ ನ್ಯಾ.ಕೆ.ಎ.ಫಣೀಂದ್ರ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಕನ್ನಡವನ್ನು ಕಾಪಾಡು ಕನ್ನಡಿಗರಿಂದ ಎಂದು ಹೇಳುವ ಸನ್ನಿವೇಶ ಸೃಷ್ಠಿಯಾಗುತ್ತಿರುವುದು ದುರಂತ | ನೇಹಾ ಹೊಸಮನೆ

By 131

ಏಪ್ರಿಲ್‌ ಫೂಲ್‌ ಅಲ್ಲಾ, ಹುಷಾರು ಬಾಸು | ಪೊಲೀಸ್‌ ಸ್ಟೈಲ್‌ನಲ್ಲಿಯೇ ಕಾಲ್‌ ಮಾಡಿ ನಿಂತಲ್ಲೆ ಅರೆಸ್ಟ್‌ ಮಾಡ್ತಾರೆ

By 13

ತಂದೆ ಮಗನ ಬಾಂಧವ್ಯದ ಫಾದರ್‌ ಚಿತ್ರದ ಮೋಷನ್‌ ಪೋಸ್ಟರ್‌ ರಿಲೀಸ್‌

By 131
SHIVAMOGGA NEWS TODAY

ಕೆಲಸಕ್ಕೆ ಬಾಲಕಾರ್ಮಿಕರ ನೇಮಕ | ಪ್ರತಿಷ್ಠಿತ ಹೋಟೆಲ್‌ ಮೇಲೆ ಕೇಸ್

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up