SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 7, 2025
ಶಿವಮೊಗ್ಗ | ಬ್ರಿಟಿಷರಿಗಿಂತ ಕೆಟ್ಟದಾಗಿ ಆಡಳಿತ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸ್ವಾತಂತ್ರ್ಯ ಚುಳವಳಿ ಸಮಯದಲ್ಲಿ ಈಸೂರಿನಲ್ಲಿ ಹೊರಾಟಗಾರರು ದಂಗೆ ಎದ್ದ ರೀತಿಯಲ್ಲಿ ರೈತರು ಧಂಗೆ ಏಳುತ್ತೇವೆ ಎಂದು ಮಲೆನಾಡು ರೈತರ ಹೋರಾಟ ಸಮಿತಿ ಮುಖಂಡ ತೀನಾ ಶ್ರೀನಿವಾಸ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕಾರಿಪುರ ತಾಲ್ಲೂಕು ಈಸೂರು, ಚಿಕ್ಕಜೋಗಿಹಳ್ಳಿ, ಚುರ್ಚಿಗುಂಡಿ ಗ್ರಾಮದಿಂದ ಅಂಜನಾಪುರ ಮತ್ತು ಕೊರಲಹಳ್ಳಿ ಗ್ರಾಮದ ಗ್ರಿಡ್ಗೆ ಜಮೀನು -ತೋಟಗಳ ಮೇಲೆ KPTCL ಅವೈಜ್ಞಾನಿಕ ಗೋಪುರ ವಿದ್ಯುತ್ ಮಾರ್ಗವನ್ನು ನಿರ್ಮಿಸುತ್ತಿರುವುದನ್ನು ಮಲೆನಾಡು ರೈತರ ಹೋರಾಟ ಸಮಿತಿ ಖಂಡಿಸಿದೆ. ಈ ಹಿನ್ನಲೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ರೈತರ ತೋಟಗಳ ಮೇಲೆ ಅವೈಜ್ಞಾನಿಕ ಹೈಟೆಕ್ಷನ್ ವಿದ್ಯುತ್ ಮಾರ್ಗವನ್ನು ಹಾದು ಹೋಗುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ ಹಾಗೂ ಮೆರವಣಿಗೆಯನ್ನು ಮಾರ್ಚ್ 3 ರಂದು ಶಿಕಾರಿಪುರದ ತಾಲ್ಲೂಕು ಕಚೇರಿ ಮುಂಭಾಗ ಹಮ್ಮಿಕೊಂಂಡಿದ್ದೇವೆ ಎಂದರು.
110/111 ಕೆ.ವಿ.ಎಸ್.ಸಿ, ಲೈನ್ ಡಿ.ಸಿ. ಗೋಪುರದಿಂದ ಹಾದು ಹೋಗುವ ಉಪಕೇಂದ್ರಗಳಿಗೆ ಈಸೂರು, ಚಿಕ್ಕಜೋಗಿಹಳ್ಳಿ, ಚುರ್ಚಿಗುಂಡಿ ಗ್ರಾಮದ ಸರ್ವೇ ನಂ. ನ ಫಲವತ್ತಾದ ಮತ್ತು ನೀರಾವರಿ ಅಡಿಕೆ ತೋಟಗಳ ಮೇಲೆ ಅವೈಜ್ಞಾನಿಕ ವಿದ್ಯುತ್ ನೀಲನಕ್ಷೆಯನ್ನು ತಯಾರುಮಾಡಿದ್ದು, ಈ ಮಾರ್ಗವು ಯಾವುದೇ ರೈತರಿಗೆ ಸೂಕ್ತವಾಗಿಲ್ಲ. ಹಾಗೂ ಅವೈಜ್ಞಾನಿವಾಗಿದ್ದು ಮತ್ತು ಈ ಗ್ರಾಮಗಳಲ್ಲಿ ಸಣ್ಣ ಹಿಡುವಳಿ ರೈತರಿದ್ದು, ಈಗಾಗಲೇ ಈ ಜಮೀನುಗಳಲ್ಲಿ ದೀರ್ಘಾವಧಿ ಬೆಳೆಗಳಾದ ಅಡಿಕೆ, ತೆಂಗು ಇತ್ಯಾದಿಗಳನ್ನು ಬೆಳೆಯುತ್ತಿದ್ದು ಇವರ ಬೆಳೆಗಳು ನಾಶವಗಲಿದೆ. ಈ ಬೆಳೆ ಜಮಿನುಗಳನ್ನು ನಂಬಿ ನಮ್ಮ ಕುಟುಂಬ ಬೀದಿಗೆ ಬೀಳಲಿದೆ ಎಂದರು.
ರೈತರು ತೋರಿಸುವ ಮಾರ್ಗದಲ್ಲಿ 12 ರಿಂದ 15 ಡಿ.ಸಿ ಗೋಪುರಗಳನ್ನು ನಿರ್ಮಿಸಿ ಕೇವಲ 4.5 ಕಿ.ಮೀ. ಅಂತರದಲ್ಲಿ ಕೊರಲಹಳ್ಳಿ ಗ್ರಿಡ್ ಅನ್ನು ತಲುಪುತ್ತದೆ. ಆದರೆ ಅಧಿಕಾರಿಗಳು ತಯಾರಿಸಿರುವ ಅವೈಜ್ಞಾನಿಕ ನೀಲಿನಕ್ಷೆಯಲ್ಲಿ 45 ರಿಂದ 50 ಡಿ.ಸಿ. ಗೋಪುರಗಳು ಬಂದಿದ್ದು, ಇದರ ಮಾರ್ಗವು 23 ಕಿ.ಮೀ ಆಗಲಿದೆ. ಈ ಮಾರ್ಗವು ಸರ್ಕಾರಕ್ಕೂ ಆರ್ಥಿಕ ಹೊರೆಯಾಗುತ್ತಿದ್ದು, ಇದರಲ್ಲಿ ಸಾಕಷ್ಟು ಜನ ರೈತರು ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾಗಿ ಬೀದಿಗೆ ಬೀಳುವ ಸಂದರ್ಭ ಬಂದಿದೆ. ಸಂಸದಬಿ.ವೈ. ರಾಘವೇಂದ್ರ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಎಲ್ಲಾ ಗ್ರಾಮಗಳ ರೈತರನ್ನು ಸೇರಿಸಿ ರೈತರಿಗೆ ಮತ್ತು ಜಮೀನುಗಳಿಗೆ ಯಾವುದೇ ತೊಂದರೆ ಆಗದಂತೆ ಬದಲಿ ವಿದ್ಯುತ್ ಮಾರ್ಗವನ್ನು ನಿರ್ಮಿಸುತ್ತೇವೆ ಎಂದು ಈಸೂರು ಗ್ರಾಮದ ಜಿ.ಎಸ್. ಶಿವರುದ್ರಪ್ಪ ಬಯಲು ರಂಗಮಂದಿರದಲ್ಲಿ ವೀರಭದ್ರೇಶ್ವರ ದೇವರ ಹೆಸರಿನಲ್ಲಿ ಮಾತು ಕೊಟ್ಟಿದ್ದು, ಈಗ ಆ ಮಾತನ್ನು ತಪ್ಪಿದ್ದಾರೆ ಎಂದರು. ರೈತರಿಗೆ ನ್ಯಾಯ ಸಿಗಬೇಕು ಎಂಬ ದೃಷ್ಠಿಯಿಂದ ಈ ಹೋರಾಟವನ್ನು ಕೈಗೊಂಡಿದ್ದು, ಇದಕ್ಕೂ ಸರ್ಕಾರ ಬಗ್ಗದಿದ್ದರೆ ಸ್ವಾತಂತ್ರ್ಯ ಚಳುವಳಿಯಲ್ಲಿ ಈಸೂರಿನಲ್ಲಿ ಹೊರಾಟಗಾರರು ಧಂಗೆ ಎದ್ದ ರೀತಿಯಲ್ಲಿ ನಾವು ರೈತರು ಧಂಗೆ ಏಳುತ್ತೇವೆ ಎಂದು ಎಚ್ಚರಿಸಿದರು.
SUMMARY | The peasants will revolt in the manner in which the agitators revolted in Isur during the freedom movement against the central government, which is ruling worse than the British.
KEYWORDS | central government, formers, shikaripura,