SHIVAMOGGA| MALENADUTODAY NEWS | ಮಲೆನಾಡು ಟುಡೆ Apr 2, 2025

ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಲಿಂಗದಳ್ಳಿಯಲ್ಲಿ ಕಾಡಾನೆಯೊಂದು ಸಾವನ್ನಪ್ಪಿದೆ. ಇಲ್ಲಿನ ತಣಿಗೆಬೈಲು ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ತಗುಲಿ 35 ವರ್ಷದ ಗಂಡಾನೆ ಸಾವನ್ನಪ್ಪಿದೆ.
ಇಲ್ಲಿನ ವ್ಯಕ್ತಿಯೊಬ್ಬರ ಕಾಫಿ ತೋಟದ ಮೂಲಕ ನಂದಿಗಾವೆ ದಂಡುಬಿಟ್ಟಹಾರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ತಂತಿ ಅಳವಡಿಸಲಾಗಿದೆ. ಈ ವಯರ್ಗೆ ಆನೆಯ ಸೊಂಡಿಲು ತಾಗಿ ದುರಂತ ಸಂಭವಿಸಿದೆ.
ಕಾಡಾನೆಯು ತೋಟದಲ್ಲಿದ್ದ ಹಲಸಿನ ಹಣ್ಣುಗಳನ್ನು ತಿನ್ನಲು ಬಂದಿತ್ತು. ಈ ವೇಳೆ ಮರವೊಂದರಿಂದ ಹಲಸಿನ ಹಣ್ಣು ಎಳೆಯುವಾಗ ಅದರ ಪಕ್ಕದಲ್ಲಿದ್ದ ಲೈನ್ಗೆ ತಾಗಿ ವಿದ್ಯುತ್ ಶಾಕ್ನಿಂದ ಕಾಡಾನೆ ಸಾವನ್ನಪ್ಪಿದೆ ಎಂದು ಸ್ಥಳಿಯರು ತಿಳಿಸಿದ್ಧಾರೆ.
