SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 8, 2025

ಶಿವಮೊಗ್ಗ | ಶಿಕಾರಿಪುರ ರೈತರ ಪರವಾಗಿ ತೀ.ನಾ.ಶ್ರೀನಿವಾಸ್ರವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ನಮ್ಮ ಬಗ್ಗೆ ತೀನಾ ಶ್ರೀನಿವಾಸ್ರವರು ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಸಂಸಂದ ಬಿವೈ ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತೀನಾ ಶ್ರೀನಿವಾಸ್ರವರು ಸುದ್ದಿಗೋಷ್ಠಿಯಲ್ಲಿ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ. ಶಿಕಾರಿಪುರದಲ್ಲಿ ವಿದ್ಯುತ್ ಗ್ರೀಡ್ಗೆ ಗೋಪುರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ. ನಾನು ಯಾವುದೇ ಆಣೆ ಪ್ರಮಾಣವನ್ನು ಮಾಡಿಲ್ಲ. ಆದರೆ ಅವರು ಆಣೆ ಪ್ರಮಾಣ ಮಾಡಿದ್ದೇವೆ ಎಂದು ಹೇಳಿ ರೈತರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಶಿಕಾರಿಪುರದಲ್ಲಿ ವಿದ್ಯುತ್ ಗ್ರೀಡ್ಗೆ ಗೋಪುರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ 10 ಸಾವಿರ ಅಡಿಕೆ ಮರಗಳು ನಾಶವಾಗುತ್ತಿಲ್ಲ. ಅಲ್ಲಿ 1000 ಅಡಿಕೆ ಮರಗಳಷ್ಟು ನಾಶವಾಗುತ್ತದೆ. ಪರ್ಯಾಯ ಮಾರ್ಗದಲ್ಲಿ ತೆಗೆದುಕೊಂಡು ಹೋದರೆ ಇನ್ನಷ್ಟು ಅನಾಹುತಗಳು ಆಗುತ್ತವೆ. ಮತ್ತು ಅದು ಅವೈವಜ್ಞಾನಿಕವಾಗಿದೆ. ಇದೇ ಮೊದಲ ಬಾರಿಗೆ ಗ್ರೀಡ್ನ ಕೆಳಭಾಗದಲ್ಲಿ ಇರುವ ಬೆಳೆಗೆ ರೈತರಿಗೆ ಪರಿಹಾರ ದೊರಕಲಿದೆ ಎಂದರು.
1972ರಿಂದ ಶೆಟ್ಟಿಹಳ್ಳಿ ಅಭಯಾರಣ್ಯದ 695 ಚ.ಕಿ.ಮೀ ಡಿ.ನೋಟಿಫಿಕೇಷನ್ಗೆ ಪ್ರಯತ್ನವಾಗಿತ್ತು. ಈಗ ಅದಕ್ಕೆ ಫಲ ಸಿಕ್ಕಿದೆ. ಶಿವಮೊಗ್ಗದಿಂದ ಆಯನೂರು/ಕೋಣಂದೂರು, ಮಂಡಗದ್ದೆ, ಶಿವಮೊಗ್ಗ ವ್ಯಾಪ್ತಿಯ ಸುರಕ್ಷಿತಾರಣ್ಯ ಈಗ ಡಿನೋಟಿಫೀಕೇಷನ್ ಆಗಿರುವುದರಿಂದ 675ರಿಂದ 395 ಚ.ಕಿ.ಮೀ.ಗೆ ಕಡಿಮೆಯಾಗಲಿದ್ದು, ಇದರಿಂದ ಆ ಭಾಗದಲ್ಲಿ ವಾಸಿಸುವ ನಿವಾಸಿಗಳಿಗೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.
SUMMARY | Samsanda BY Raghavendra said that the allegations levelled by T.N. Srinivas on behalf of shikaripura farmers are far from the truth and he should stop speaking lightly about us.
KEYWORDS | BY Raghavendra, shikaripura, farmers, politics,