SHIVAMOGGA| MALENADUTODAY NEWS | ಮಲೆನಾಡು ಟುಡೆ Feb 20, 2025
ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಯವಕ ಹಾಗೂ ಮಾಗಡಿಯ ಯುವತಿಯ ಮೃತದೇಹಗಳು ಚಿಕ್ಕಮಗಳೂರು ತಾಲ್ಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಇಡೀ ಪ್ರಕರಣ ಅನುಮಾನಕ್ಕೆ ಕಾರಣವಾಗಿದೆ. ಇವರಿಬ್ಬರು ಮಾಗಡಿಯಲ್ಲಿ ಪರಿಚಯವಾಗಿದ್ದವರು ಎಂದು ತಿಳಿದುಬಂದಿದೆ.
ಮೃತ ಯುವಕನ್ನು ಭದ್ರಾವತಿ ಮೂಲದ ಮಧು ಎಂದು ಗುರುತಿಸಲಾಗಿದ್ದರೆ, ಯುವತಿ ಮಾಗಡಿಯ ಖಾಸಗಿ ಪ್ರೌಢಶಾಲೆಯಲ್ಲಿ ಶಿಕ್ಷಕಿ ಆಗಿರುವ ಪೂರ್ಣಿಮಾ ಎಂದು ತಿಳಿದುಬಂದಿದೆ.
ಏನಿದು ಘಟನೆ
ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ, ಇವರಿಬ್ಬರು ಪ್ರೇಮಿಗಳಾಗಿದ್ದರು, ನಡುವೆ ಬಂದ ಮನಸ್ತಾಪದಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಮಧು ಮಾಗಡಿಯಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದು ಪೂರ್ಣಿಮಾರವರ ಪಕ್ಕದ ಮನೆಯಲ್ಲಿ ಬಾಡಿಗೆ ಮನೆಯಲ್ಲಿದ್ದ. ಪರಸ್ಪರ ಪರಿಚಿತರಾಗಿದ್ದ ಇವರಿಬ್ಬರ ನಡುವೆ ಪ್ರೀತಿಯು ಇತ್ತು. ಮೇಲಾಗಿ ಎರಡು ಕುಟುಂಬಗಳು ಸಂಪರ್ಕದಲ್ಲಿದ್ದು, ಶುಭ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರು. ಇನ್ನೂ ಪೂರ್ಣಿಮಾ ಮಧುರವರ ಭದ್ರಾವತಿಗೆ ಬಂದು ಅವರ ಮನೆಯವರನ್ನ ಭೇಟಿ ಮಾಡಿ ಮಾತುಕತೆ ನಡೆದಿದ್ದರು. ಈ ನಡುವೆ ಪೂರ್ಣಿಮಾರಿಗೆ ಎಂಗೇಜ್ಮೆಂಟ್ ಆಗಿದೆ ಎನ್ನಲಾಗುತ್ತಿದೆ. ಇದೆ ಕಾರಣಕ್ಕೆ ಬೇಸರಗೊಂಡ ಮಧು ಆಕೆಯನ್ನು ಹತ್ಯೆ ಮಾಡಿ ತಾನು ಸಹ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನೆ ದಿನ
ನಿನ್ನೆ ಪೂರ್ಣಿಮಾರನ್ನು ಅವರ ಮನೆಗೆ ಡ್ರಾಪ್ ನೀಡುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡಿದ್ದ ಮಧು ಅಲ್ಲಿಂದ ಚಿಕ್ಕಮಗಳೂರು ಜಿಲ್ಲೆ ದಾಸರಹಳ್ಳಿಗೆ ಬಂದಿದ್ದಾನೆ. ಅಲ್ಲದೆ ಹಲವು ಹೊತ್ತು ಅಲೆದಾಡಿ ಆ ಬಳಿಕ ಮೇನ್ ರೋಡ್ನಿಂದ ಒಂದು ಕಿಲೋಮೀಟರ್ ದೂರ ಹೋಗಿ, ಪೂರ್ಣಿಮಾಳ ವೇಲ್ನಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಈ ನಡುವೆ ಪೂರ್ಣಿಮಾಳನ್ನ ಆತ ಎಲ್ಲಿ ಕೊಲೆ ಮಾಡಿದ ಎಂಬುದು ಸ್ಪಷ್ಟವಾಗಿಲ್ಲ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡಸ್ತಿದ್ದಾರೆ.
SUMMARY | magadi woman bhadravati man found dead in chikkamagaluru
KEY WORDS | magadi woman, bhadravati man, found dead ,chikkamagaluru